ಕಲಬುರಗಿ: ವಸತಿ ಯೋಜನೆಯಲ್ಲಿ (Housing scheme) ಮಂಜೂರಾಗಿದ್ದ ಮನೆಯ ಲಂಚದ ವಿಚಾರದಲ್ಲಿ ವ್ಯಕ್ತಿಯೊಬ್ಬ ಕೊಲೆಯಾದ ಪ್ರಕರಣ ಜೇವರ್ಗಿ (Jevargi) ತಾಲೂಕಿನ ಆಂದೋಲ (Andola) ಗ್ರಾಮದಲ್ಲಿ ನಡೆದಿದೆ.
ಬಸವರಾಜ್ (35) ಎಂಬಾತನಿಗೆ ವಸತಿ ಯೋಜನೆ ಅಡಿ ಮನೆ ಮಂಜೂರಾಗಿತ್ತು. ಮನೆಗೆ ಹಣ ಬಿಡುಗಡೆ ಮಾಡಲು ಗ್ರಾಮ ಪಂಚಾಯಿತಿ (Gram Panchayat) ಉಪಾಧ್ಯಕ್ಷೆ ಹಾಗೂ ಆಕೆಯ ಪತಿ 25 ಸಾವಿರ ರೂ. ಲಂಚ (Bribe) ನೀಡುವಂತೆ ಕೇಳಿದ್ದರು. ಇದನ್ನೂ ಓದಿ: ತಂದೆ ಮನೆಯಿಂದ ಕಾಸ್ಟ್ಲಿ ವಾಚ್ ತರದಿದ್ದಕ್ಕೆ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ!
ಇದರಿಂದ ಬೇಸರಗೊಂಡಿದ್ದ ಬಸವರಾಜ್ ಲಂಚದ ವಿಚಾರವನ್ನು ಊರಿನವರ ಮುಂದೆ ಹೇಳಿಕೊಂಡಿದ್ದ. ಇದರಿಂದ ಕೋಪಗೊಂಡ ಗ್ರಾಮ ಪಂಚಾಯತಿ ಉಪಾಧ್ಯಕ್ಷೆಯ ಪತಿ ಸಿದ್ದಪ್ಪ ಹಾಗೂ ಮಗ ಗುರುರಾಜ್, ಬಸವರಾಜ್ನ ಎದೆ ಹಾಗೂ ಮರ್ಮಾಂಕ್ಕೆ ಒದ್ದು ಕೊಲೆ ಮಾಡಿದ್ದಾರೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ತ್ರಿಪುರ ಬಿಜೆಪಿ ಬೆಂಬಲಿಗರಿಂದ ಸಂಸದೀಯ ತಂಡದ ಮೇಲೆ ದಾಳಿ