ಬೆಂಗಳೂರು: ನಡುರಸ್ತೆಯಲ್ಲಿ ಬಿಎಂಟಿಸಿ ಬಸ್ ಕೆಟ್ಟು ನಿಂತ ಪರಿಣಾಮ ಸುಮಾರು ಮೂರು ಕಿಲೋಮೀಟರ್ ನಷ್ಟು ಟ್ರಾಫಿಕ್ ಜಾಮ್ ಉಂಟಾಗಿತ್ತು.
ಕೆ.ಆರ್. ಪುರದಿಂದ ಟಿನ್ ಪ್ಯಾಕ್ಟರಿವರೆಗೆ ಮೂರು ಕಿಲೋಮೀಟರ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇತ್ತ ಐಟಿಪಿಎಲ್ ಮಾರ್ಗವೂ ಪುಲ್ ಜಾಮ್ ಆಗಿದ್ದು, ಮಹದೇವಪುರದಿಂದ ಟಿನ್ ಪ್ಯಾಕ್ಟರಿವರೆಗೆ ಪುಲ್ ಟ್ರಾಫಿಕ್ ಸಮಸ್ಯೆ ಉಂಟಾಗಿದೆ.
- Advertisement 2
- Advertisement 3
ಒಂದೆಡೆ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಇತ್ತ ನಡು ರಸ್ತೆಯಲ್ಲಿಯೇ ಬಸ್ ರಿಪೇರಿಯಾಗಿದೆ. ಇದರಿಂದ ಬೆಳಗ್ಗೆ 6 ಗಂಟೆಯಿಂದ ವಾಹನಗಳು ನಿಂತಲ್ಲೇ ನಿಂತಿದ್ದು, ನಡು ರಸ್ತೆಯಲ್ಲಿಯೇ ವಾಹನ ಸವಾರರ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
- Advertisement 4
ಬಸ್ ಕೆಟ್ಟು ನಿಂತಿರುವ ಬಗ್ಗೆ ತಿಳಿದು ಬಸ್ ತೆರವು ಮಾಡುವುದಾಗಲೀ ಅಥವಾ ಟ್ರಾಫಿಕ್ ಕ್ಲಿಯರ್ ಮಾಡದೇ ಇರುವ ಟ್ರಾಫಿಕ್ ಪೊಲೀಸರು ಹಾಗೂ ಬಿಎಂಟಿಸಿ ಆಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv