ಹಾವೇರಿ: ಅಣ್ಣನ ಪ್ರೀತಿ ವಿಚಾರಕ್ಕೆ ತಮ್ಮ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.
ಪ್ರೀತಿಸಿದ ಹುಡುಗನಿಗೆ ಪ್ರೇಯಸಿ ಸಹೋದರರು ಟಾರ್ಚರ್ ಕೊಟ್ಟಿದ್ದಾರೆ. ಸಹೋದರರ ಕಿರುಕುಳದಿಂದ ಬೇಸತ್ತು ಹಂಸಭಾವಿ (Hansabhavi) ಯಲ್ಲಿ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಳೆದ 8 ವರ್ಷದಿಂದ ಅಣ್ಣ ಮಂಜು ನಾಯ್ಕ್, ಹಾನಗಲ್ ತಾಲೂಕಿನ ಬಾಳೂರು ತಾಂಡಾದ ಯುವತಿ ರಾಜೇಶ್ವರಿ ನಾಯ್ಕ್ ಎಂಬ ಯುವತಿಯನ್ನ ಪ್ರೀತಿಸುತ್ತಿದ್ದ. ಆದರೆ ಇದೀಗ ಯುವತಿ, ಮಂಜು ನಾಯ್ಕ್ ಜೊತೆ ಮದುವೆಗೆ ನಿರಾಕರಿಸಿ ನಾಲ್ಕು ದಿನಗಳ ಹಿಂದೆ ಬೇರೆ ಯುವಕನ ಜೊತೆ ಮದುವೆಯಾಗಿದ್ದಳು. ಪ್ರೀತಿಸಿತ್ತಿರುವ ಸಂದರ್ಭದಲ್ಲಿ ಕೊಟ್ಟಿದ್ದ ಬಂಗಾರ ಮತ್ತು ಹಣವನ್ನು ಮರಳಿಸಲು ಯುವತಿ ನಿರಾಕರಿಸಿದ್ದಳು.
ಸುರೇಶ್ ನಾಯ್ಕ್ (ಮಾಜಿ ಪ್ರಿಯತಮ) ಕಾಟವನ್ನು ತಾಳಲಾರದೆ ರಾಜೇಶ್ವರಿ ತನ್ನ ಸಹೋದರರಿಗೆ ತಿಳಿಸಿದ್ದಳು. ಅಣ್ಣನ ಹುಡುಕಾಟದಲ್ಲಿದ್ದ ಸಹೋದರರಿಗೆ ತಮ್ಮ ಸಿಕ್ಕಿದ್ದಾನೆ. ಈ ವೇಳೆ ಅಣ್ಣನನ್ನು ಹುಡುಕಿ ಕೋಡುವಂತೆ ಒತ್ತಾಯ ಮಾಡಿದ್ದಾರೆ. ಅಣ್ಣನ ಸಾವಿಗೆ ಪ್ರೇಯಸಿ ಮನೆಯವರು ಕಾರಣವೆಂದು ತಮ್ಮ ಮಂಜು ನಾಯ್ಕ ಆರೋಪ ಮಡಿದ್ದಾರೆ.
ಈ ಸಂಬಂಧ ಹಂಸಭಾವಿ ಪೊಲೀಸ್ ಠಾಣೆ (Hansabhavi Police Station) ಯಲ್ಲಿ ಪ್ರಕರಣ ದಾಖಲಾಗಿದೆ.