ಸುದೀಪ್, ಪುನೀತ್‍ಗೆ ಅನಿಲ್ ಕುಂಬ್ಳೆ ಚಾಲೆಂಜ್

Public TV
1 Min Read
Anil kumble Puneeth Sudeep 1

ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಈಗ ಪದ್ಯ ಓದುವ ಚಾಲೆಂಜ್ ಶುರುವಾಗಿದೆ. ಈ ಚಾಲೆಂಜ್ ಅನ್ನು ವಿಶೇಷವಾಗಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಟ-ನಟಿಯರು ಆರಂಭಿಸಿದ್ದರು. ಈಗಾಗಲೇ ಈ ಸವಾಲನ್ನು ಅನೇಕ ನಟ-ನಟಿಯರು ಸ್ವೀಕರಿಸಿ, ಪೂರೈಸಿದ್ದಾರೆ.

ಇದೀಗ ಗೋಲ್ಡನ್ ಸ್ಟಾರ್ ಗಣೇಶ್, ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಅನಿಲ್ ಕುಂಬ್ಳೆ ಅವರಿಗೆ ಪದ್ಯ ಓದುವ ಚಾಲೆಂಜ್ ಹಾಕಿದ್ದರು. ಚಾಲೆಂಜ್ ಸ್ವೀಕರಿಸಿದ ಅನಿಲ್ ಕುಂಬ್ಳೆ ಅವರು, ರಾಷ್ಟ್ರಕವಿ ಕುವೆಂಪು ಅವರ “ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು” ಎಂಬ ಕವನವನ್ನು ಹಾಡಿದ್ದಾರೆ. ಈ ಮೂಲಕ ಗಣೇಶ್ ಅವರು ನೀಡಿದ್ದ ಪಂಥಾಹ್ವಾನ ಸವಾಲನ್ನು ಪೂರೈಸಿದ್ದಾರೆ.

Puneeth Rajkumar anil kumble

ಅನಿಲ್ ಕುಂಬ್ಳೆ ಅವರು ಟ್ವಿಟ್ಟರಿನಲ್ಲಿ ಈ ವಿಡಿಯೋ ಶೇರ್ ಮಾಡಿ, “ಈ ಸವಾಲನ್ನು ಮುಂದುವರಿಸಬೇಕು ಎಂದು ನನ್ನ ಸ್ನೇಹಿತರಾದ ಕಿಚ್ಚ ಸುದೀಪ್, ಪುನೀತ್ ರಾಜ್ ಕುಮಾರ್ ಹಾಗೂ ವಿಜಯ ಪ್ರಕಾಶ್ ಅವರಿಗೆ ಕೇಳಿಕೊಳ್ಳುತ್ತೇನೆ. ಅದರಲ್ಲೂ ವಿಜಯ ಪ್ರಕಾಶ್ ಹಾಡಿನ ಮೂಲಕವೇ ಈ ಚಾಲೆಂಜ್ ಪೂರ್ಣಗೊಳಿಸಬೇಕು” ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *