ಬೆಳಗಾವಿ: ವಿದೇಶದಿಂದ ಬಂದು ದೇಶ ಸುತ್ತಿದ ವಿದೇಶಿಗರು (Foreigners) ಬೇರೆಲ್ಲೂ ಜಾಗ ಸಿಗದೆ ಸ್ಮಶಾನದಲ್ಲಿ (Cemetery) ರೆಸ್ಟ್ ಮಾಡಿರುವ ಘಟನೆ ಜಿಲ್ಲೆಯ ಖಾನಾಪುರ (Khanapur) ತಾಲೂಕಿನ ರುಮೇವಾಡಿ ಗ್ರಾಮದಲ್ಲಿ ನಡೆದಿದೆ.
ಸ್ಮಶಾನ ಎಂದರೆ ದೂರ ಸರಿಯುವ ಜನರೇ ಹೆಚ್ಚು. ಇವರ ಮಧ್ಯೆ ಸ್ಮಶಾನದಲ್ಲಿಯೇ ವಿದೇಶಿಗರು ವಾಸ್ತವ್ಯ ಹೂಡಿದ್ದಾರೆ. ಬೆಳ್ಳಂಬೆಳಗ್ಗೆ ಸ್ಮಾಶಾನದಲ್ಲಿ ಗಾಢ ನಿದ್ದೆಗೆ ಜಾರಿದ್ದ ವಿದೇಶಿಗರನ್ನು ಕಂಡು ಖಾನಾಪುರದ ಜನರು ಹೌಹಾರಿದ್ದಾರೆ. ಇದನ್ನೂ ಓದಿ: ಸಚಿವ ಸತೀಶ್ ಜಾರಕಿಹೊಳಿ ತವರು ಜಿಲ್ಲೆಯ 20 ಗ್ರಾಮಗಳಲ್ಲಿ ಸುಸಜ್ಜಿತ ರಸ್ತೆಗಳೇ ಇಲ್ಲ!
ಎರಡು ಬುಲೆಟ್ ಬೈಕ್ ಮೇಲೆ ರೈಡ್ಗೆ ಬಂದಿದ್ದ ವಿದೇಶಿಗರು ರಾತ್ರಿ ತಂಗಲು ಎಲ್ಲೂ ಜಾಗ ಸಿಗದ ಹಿನ್ನೆಲೆ ಸ್ಮಶಾನದಲ್ಲಿ ವಾಸ್ತವ್ಯ ಹೂಡಿದ್ದಾರೆ. ಜನ ಸೇರುತ್ತಿದ್ದಂತೆ ಎಚ್ಚರಗೊಂಡ ಅವರು ಯಾರೊಂದಿಗೂ ಮಾತನಾಡದೆ ಬೈಕ್ ಹತ್ತಿ ಹೊರಟು ಹೋಗಿದ್ದಾರೆ. ಇದನ್ನೂ ಓದಿ: ಫ್ರೀ ಬಸ್ ಘೋಷಣೆ ಬಳಿಕ ಮೊದಲ ವೀಕೆಂಡ್ – ಸರ್ಕಾರಿ ಬಸ್ಗಳು ಫುಲ್ ರಶ್