– ಕೊಲೆಗೆ ಹಿರಿ ಮಗನ ಸಾಥ್
ಚಿಕ್ಕೋಡಿ: ಕುಡಿಯಲು ಹಣಕ್ಕಾಗಿ ಪೀಡಿಸುತ್ತಿದ್ದ ಮಗನನ್ನು ತಂದೆಯೇ ಕೊಲೆ ಮಾಡಿರುವ ಘಟನೆ ಬೆಳಗಾವಿಯ (Belagavi) ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದಲ್ಲಿ ನಡೆದಿದೆ.
- Advertisement 2
ಜು.8ರ ರಾತ್ರಿ ಹಿಡಕಲ್ ಗ್ರಾಮದಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕುಡಿಯಲು ಹಣ ಕೇಳುತ್ತಿದ್ದ ಸೋಮಯ್ಯ ಹಿರೇಮಠ (24) ಹತ್ಯೆಗೊಳಗಾದ ವ್ಯಕ್ತಿ. ಸೋಮಯ್ಯ ಕೆಲಸ ಮಾಡದೇ ಮನೆಯಲ್ಲೇ ಇರುತ್ತಿದ್ದ. ಅಲ್ಲದೇ ವಿಪರೀತ ಮದ್ಯ ಕುಡಿಯುತ್ತಿದ್ದ. ಕುಡಿಯಲು ಹಣಕ್ಕಾಗಿ ಜುಲೈ 8ರ ರಾತ್ರಿ ಬಳಿ ಗಲಾಟೆ ಮಾಡಿದ್ದಾನೆ. ಈ ವೇಳೆ ಆತನ ತಂದೆ ತಂದೆ ಮಹಾಲಿಂಗಯ್ಯ, ಸೋದರ ಬಸಯ್ಯ ಸೇರಿ ತಲೆಗೆ ಬೆತ್ತದಲ್ಲಿ ಹೊಡೆದು ಹತ್ಯೆ ಮಾಡಿದ್ದಾರೆ. ಇದನ್ನೂ ಓದಿ: ಬಿಹಾರ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ – ಲಾಠಿಚಾರ್ಜ್ಗೆ ಬಿಜೆಪಿ ನಾಯಕ ಬಲಿ
- Advertisement 3
- Advertisement 4
ಬಳಿಕ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ನಾಟಕ ಮಾಡಿದ್ದರು. ಬಳಿಕ ಸಾಕ್ಷಿ ನಾಶ ಮಾಡಲು ಶವ ಮಣ್ಣು ಮಾಡುವ ಬದಲು ತಮ್ಮ ಜಮೀನಿನಲ್ಲಯೇ ಸುಟ್ಟು ಅಂತ್ಯಸಂಸ್ಕಾರ ಮಾಡಿದ್ದಾರೆ. ಈ ವೇಳೆ ಗ್ರಾಮಸ್ಥರು ಸೋಮಯ್ಯನ ಶವದ ತಲೆಯಲ್ಲಿ ಗಾಯವಾಗಿದ್ದನ್ನು ಗಮನಿಸಿದ್ದರು. ಆ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದರು.
ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಕೊಲೆಯ ವಿಚಾರ ಬಯಲಾಗಿದೆ. ಆರೋಪಿ ಮಹಾಲಿಂಗಯ್ಯ ಹಿರೇಮಠ(54), ಬಸಯ್ಯ ಹಿರೇಮಠ(26) ಬಂಧಿಸಲಾಗಿದೆ. ಈ ಸಂಬಂಧ ಹಾರೂಗೇರಿ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಎಣ್ಣೆ ಏಟಲ್ಲಿ ಅರ್ಧ ಸುಟ್ಟ ಯುವತಿಯ ಮೃತದೇಹ ತಿಂದ್ರು!
Web Stories