ಒತ್ತುವರಿ ತೆರವು ಮಾಡದಂತೆ ಜೆಸಿಬಿ ಕೆಳಗೆ ಬಿದ್ದು ರೈತನ ಗೋಳಾಟ

Public TV
1 Min Read
ckb teravu addi

ಚಿಕ್ಕಬಳ್ಳಾಪುರ: ಒತ್ತುವರಿ ಮಾಡಿಕೊಂಡಿರುವ ಅರಣ್ಯ ಭೂಮಿ ತೆರವು ಕಾರ್ಯಾಚರಣೆ ಮಾಡದಂತೆ ಜೆಸಿಬಿ ಕೆಳಗೆ ಬಿದ್ದು ರೈತರೊಬ್ಬರು ಗೋಳಾಡಿದ ಘಟನೆ ಜಿಲ್ಲೆಯ ತೌಡನಹಳ್ಳಿ ಗ್ರಾಮದಲ್ಲಿ ನಡೆಯಿತು.

ತೌಡನಹಳ್ಳಿ ಗ್ರಾಮದ ಹಲವು ಮಂದಿ ರೈತರು ಅರಣ್ಯ ಭೂಮಿಯನ್ನ ಒತ್ತುವರಿ ಮಾಡಿ ಕೃಷಿ ಭೂಮಿಯನ್ನಾಗಿ ಪರಿವರ್ತಿಸಿಕೊಂಡು ಕೃಷಿಕಾಯಕ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಆದ್ರೆ ಇಂದು ಸರಿ ಸುಮಾರು 38 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು ಮಾಡಲು ಬಿಗಿ ಪೊಲೀಸ್ ಬಂದೋಬಸ್ತ್‍ನೊಂದಿಗೆ ಅರಣ್ಯಾಧಿಕಾರಿಗಳು ಆಗಮಿಸಿದ್ದರು.

ckb teravu addi 2

ಈ ವೇಳೆ ತಮ್ಮ ಜಮೀನು ತಮಗೆ ಬಿಡಿ, ಒತ್ತುವರಿ ತೆರವು ಮಾಡಬೇಡಿ ಅಂತ ಅಂಗಲಾಚಿ ಬೇಡಿಕೊಂಡ ರೈತರು ಜೆಸಿಬಿ ಕೆಳಗೆ ಕುಳಿತು ಒತ್ತುವರಿ ತೆರವಿಗೆ ಅಡ್ಡಿಪಡಿಸಿದರು. ಆದರೆ ಇದ್ಯಾವುದನ್ನು ಲೆಕ್ಕಿಸಿದ ಅರಣ್ಯಾಧಿಕಾರಿಗಳು ಜೆಸಿಬಿ ಮೂಲಕ ಒತ್ತುವರಿ ತೆರವಿಗೆ ಮುಂದಾದರು. ಆಗ ಏಕಾಏಕಿ ಜೆಸಿಬಿ ಕೆಳಗೆ ಬಿದ್ದ ರೈತ ಮುನಿರಾಜು ಒತ್ತುವರಿ ತೆರವು ಮಾಡದಂತೆ ಗೋಳಾಡಿದ್ದಾರೆ. ಕೂಡಲೇ ರೈತನನ್ನ ಗುಂಡಿಯಿಂದ ಮೇಲೆಳೆದ ಪೊಲೀಸರು, ರೈತರ ಅಡ್ಡಿ ನಡುವೆಯೂ ಒತ್ತುವರಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ckb teravu addi 1

ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪೊಲೀಸರ ಬಂದೋಬಸ್ತ್‍ನಲ್ಲಿ ಅರಣ್ಯಾಧಿಕಾರಿಗಳು ತೆರವು ಕಾರ್ಯಾಚರಣೆ ನಡೆಯುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *