Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬರಿದಾಗ್ತಿದೆ ಆಮ್ಲಜನಕ.. ಜೀವಸಂಕುಲಕ್ಕೆ ಕಂಟಕ – ಭೂಮಿಯಲ್ಲಿ ಏನಾಗ್ತಿದೆ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಬರಿದಾಗ್ತಿದೆ ಆಮ್ಲಜನಕ.. ಜೀವಸಂಕುಲಕ್ಕೆ ಕಂಟಕ – ಭೂಮಿಯಲ್ಲಿ ಏನಾಗ್ತಿದೆ?

Latest

ಬರಿದಾಗ್ತಿದೆ ಆಮ್ಲಜನಕ.. ಜೀವಸಂಕುಲಕ್ಕೆ ಕಂಟಕ – ಭೂಮಿಯಲ್ಲಿ ಏನಾಗ್ತಿದೆ?

Public TV
Last updated: July 31, 2024 2:25 pm
Public TV
Share
3 Min Read
Earths Water Is Rapidly Losing Oxygen
SHARE

ಮನುಷ್ಯನ ಪ್ರಾಣವಾಯು ‘ಆಮ್ಲಜನಕ’ (Oxygen). ಇದಿಲ್ಲದಿದ್ದರೆ ಮಾನವನ ಪ್ರಾಣಪಕ್ಷಿ ಕೆಲವೇ ನಿಮಿಷಗಳಲ್ಲಿ ಹಾರಿಹೋಗುತ್ತದೆ. ವಾತಾವರಣದ 1/5% ರಷ್ಟು, ಭೂಪದರದ ತೂಕದಲ್ಲಿ 49% ರಷ್ಟು, ಖನಿಜ ಹಾಗೂ ಶಿಲೆಗಳ ತೂಕದ ಅರ್ಧದಷ್ಟು ಮತ್ತು ಭೂಮಿಯಲ್ಲಿರುವ ನೀರಿನ ತೂಕದ 89% ರಷ್ಟು ಆಮ್ಲಜನಕವಿದೆ. ನಮಗೆ ವಾತಾವರಣದಲ್ಲಿನ ಆಮ್ಲಜನಕ ಎಷ್ಟು ಮುಖ್ಯವೋ, ಜಲಚರಗಳಿಗೆ ನೀರಿನಲ್ಲಿನ ಆಮ್ಲಜನಕ ಅಷ್ಟೇ ಮುಖ್ಯ.

ಕ್ಷೀರಪಥ ಗ್ಯಾಲಕ್ಸಿಯಲ್ಲಿ ಜೀವರಾಶಿ ಹೊಂದಿರುವ ಗ್ರಹವೆಂದರೆ ಅದು ಭೂಮಿ. ಭೂಮಿಯು 71% ನಷ್ಟು ನೀರಿನಿಂದಲೇ ಕೂಡಿದೆ. ಉಳಿದದ್ದು ಭೂಭಾಗವಾಗಿದೆ. ಈ ಭಾಗದಲ್ಲಿ ಮನುಷ್ಯ, ಪ್ರಾಣಿ-ಪಕ್ಷಿ, ಸರಿಸೃಪಗಳು ವಾಸಿಸಿದರೆ, ನೀರಿನಲ್ಲಿ ಕೋಟ್ಯಾನುಕೋಟಿ ಜಲಚರಗಳಿವೆ. ಭೂಮಿಯಲ್ಲಿನ ಬಹುಪಾಲು ಜೀವಿಗಳು ನೀರಿನಲ್ಲೇ ಇವೆ. ಇಷ್ಟು ಪ್ರಮಾಣದ ಜೀವರಾಶಿಗಳಿಗೆ ಈಗ ಕಂಟಕ ಎದುರಾಗಿದೆ. ಜಲಮೂಲಗಳಲ್ಲಿ ಆಮ್ಲಜನಕ ವೇಗವಾಗಿ ಕ್ಷೀಣಿಸುತ್ತಿದೆ. ಇದು ಭೂಮಿಯ ಜೀವಾಧಾರಕ ವ್ಯವಸ್ಥೆಗೆ ದೊಡ್ಡ ಅಪಾಯವಾಗಿದೆ. ಇದನ್ನೂ ಓದಿ: ಬಾಂಗ್ಲಾದ ಮೊಂಗ್ಲಾ ಬಂದರು ನಿರ್ವಹಣೆಯ ಹಕ್ಕು ಪಡೆದ ಭಾರತ – ಏನಿದರ ಮಹತ್ವ?

ಜಲಮೂಲದ ಆಮ್ಲಜನಕಕ್ಕೆ ಇರುವ ಅಪಾಯವೇನು? ಕಾರಣವೇನು? ಇದರಿಂದ ಜಲಚರಗಳಿಗೆ ಎದುರಾಗುವ ತೊಂದರೆಯೇನು? ಹೊಸ ಅಧ್ಯಯನ ಏನು ಹೇಳುತ್ತದೆ? ಎಂಬ ಕುರಿತು ಇಲ್ಲಿದೆ ಮಾಹಿತಿ.

Earths Water Is Rapidly Losing Oxygen 1

ಕ್ಷೀಣಿಸುತ್ತಿದೆ ಆಮ್ಲಜನಕ!
ವಿಶ್ವದ ಜಲಮೂಲಗಳಲ್ಲಿ ಕರಗಿರುವ ಆಮ್ಲಜನಕವು ವೇಗವಾಗಿ ಕ್ಷೀಣಿಸುತ್ತಿದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಇದು ಭೂಮಿಯ ಜೀವಾಧಾರಕ ವ್ಯವಸ್ಥೆಗೆ ದೊಡ್ಡ ಅಪಾಯವಾಗಿದೆ. ಇದರಿಂದ ಜಲಚರಗಳಿಗೆ ಮೂಲಭೂತ ಸಮಸ್ಯೆಯಾಗಲಿದೆ ಎಂದು ಸೈನ್ಸ್ ಅಲರ್ಟ್ ವರದಿ ಮಾಡಿದೆ.

ಆಕ್ಸಿಜನ್ ಕ್ಷೀಣಿಸಲು ಕಾರಣವೇನು?
ಮಾನವನ ಅಭಿವೃದ್ಧಿ ಚಿಂತನೆಗಳು ಭೂಮಿ, ಪರಿಸರ ಮತ್ತು ಜೀವರಾಶಿಗಳಿಗೆ ಅಪಾಯವನ್ನು ತಂದೊಡ್ಡಿದೆ. ಜಲಮೂಲದಲ್ಲಿ ಆಮ್ಲಜನಕ ಕ್ಷೀಣಿಸಲು ಹವಾಮಾನ ಬದಲಾವಣೆ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆ ಪ್ರಮುಖ ಕಾರಣವಾಗಿದೆ ಎಂದು ಯುನೈಟೆಡ್ ಸ್ಟೇಟ್ಸ್ನ ವಿಜ್ಞಾನಿಗಳ ತಂಡವು ಉಲ್ಲೇಖಿಸಿದೆ. ಇದನ್ನೂ ಓದಿ: Paris Olympics 2024 | ಕ್ರೀಡೆಗಳ ಮಹಾಸಂಗಮ; ಒಲಿಂಪಿಯಾ ಬೆಟ್ಟದಲ್ಲಿ ಹುಟ್ಟಿದ ಕ್ರೀಡೆ ವಿಶ್ವವಿಖ್ಯಾತಿಯಾಗಿದ್ದು ಹೇಗೆ?

* ಬಿಸಿಯಾಗುತ್ತಿರುವ ನೀರು: ಹೆಚ್ಚಿನ ತಾಪಮಾನವು ನೀರು ಹಿಡಿದಿಟ್ಟುಕೊಳ್ಳುವ ಆಮ್ಲಜನಕದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಹೆಚ್ಚಿದ ಹಸಿರುಮನೆ ಅನಿಲ ಹೊರಸೂಸುವಿಕೆಯು ಗಾಳಿ ಮತ್ತು ನೀರಿನ ತಾಪಮಾನವನ್ನು ಹೆಚ್ಚಿಸುತ್ತಿದೆ. ಇದು ಆಮ್ಲಜನಕದ ಧಾರಣದಲ್ಲಿ ಇಳಿಕೆಗೆ ಕಾರಣವಾಗುತ್ತದೆ.

life below water

* ಜೈವಿಕ ಚಟುವಟಿಕೆ: ಜಲಚರಗಳು ಆಮ್ಲಜನಕವನ್ನು ಮರುಪೂರಣಗೊಳಿಸುವುದಕ್ಕಿಂತ ವೇಗವಾಗಿ ಖಾಲಿ ಮಾಡಬಹುದು. ರಸಗೊಬ್ಬರಗಳು, ಕೊಳಚೆನೀರು ಮತ್ತು ಕೈಗಾರಿಕಾ ತ್ಯಾಜ್ಯದಿಂದ ಹೆಚ್ಚುವರಿ ಪೋಷಕಾಂಶಗಳಿಂದ ಆಗುವ ಪಾಚಿಯ ಹೂವುಗಳು ಮತ್ತು ಬ್ಯಾಕ್ಟೀರಿಯಾದ ಬೆಳವಣಿಗೆಯು ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕವನ್ನು ಸೇವಿಸುತ್ತದೆ. ಆಮ್ಲಜನಕದ ಮಟ್ಟವು ಗಮನಾರ್ಹವಾಗಿ ಕಡಿಮೆಯಾದಾಗ, ಸೂಕ್ಷ್ಮಜೀವಿಗಳ ಉಸಿರುಗಟ್ಟಿಸುತ್ತದೆ. ಅಲ್ಲಿ ಆಮ್ಲಜನಕದ ಕೊರತೆಯು ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಅಡ್ಡಿಪಡಿಸುತ್ತದೆ.

ಪರಿಣಾಮ ಏನು?
ನೀರಿನ ಪದರಗಳ ನಡುವಿನ ಹೆಚ್ಚಿದ ಸಾಂದ್ರತೆಯ ವ್ಯತ್ಯಾಸಗಳು, ನೀರಿನ ಮೇಲ್ಮೈ ವೇಗವಾಗಿ ಬೆಚ್ಚಗಾಗುವಂತೆ ಮಾಡುತ್ತದೆ. ಇದರಿಂದ ಮಂಜುಗಡ್ಡೆ ಕರಗುತ್ತದೆ. ಆಗ ಲವಣಾಂಶ ಕಡಿಮೆಯಾಗಿ ಆಮ್ಲಜನಕಯುಕ್ತ ನೀರಿನ ಚಲನೆಯನ್ನು ಆಳವಾದ ಪದರಗಳಿಗೆ ದುರ್ಬಲಗೊಳಿಸುತ್ತದೆ. ಜಲವಾಸಿ ಪರಿಸರದ ಆಮ್ಲಜನಕೀಕರಣದ ಮೇಲೆ ಪರಿಣಾಮ ಬೀರುತ್ತದೆ. ಆಮ್ಲಜನಕೀಕರಣದ ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸುತ್ತದೆ. ಜಲಮೂಲಗಳಲ್ಲಿ ಆಮ್ಲಜನಕ ಕೊರತೆಯು ಜಲಚರಗಳು ಉಸಿರುಗಟ್ಟಿ ಸಾಯಲು ಕಾರಣವಾಗುತ್ತದೆ. ಇದನ್ನೂ ಓದಿ: ಹಾವಿನ ವಿಷವೇ ಈತನಿಗೆ ಆಹಾರ – ʻಸ್ನೇಕ್‌ ಮ್ಯಾನ್‌ʼ ಜೀವನ ಕಥೆಯೇ ರೋಚಕ!

ಪ್ಲಾನೆಟರಿ ಬೌಂಡರಿ ಪಟ್ಟಿಗೆ ಸೇರುತ್ತಾ?
ಜಲಮೂಲಗಳಲ್ಲಿ ಆಮ್ಲಜನಕ ಕ್ಷೀಣಿಸುತ್ತಿರುವುದನ್ನು ‘ಪ್ಲಾನೆಟರಿ ಬೌಂಡರೀಸ್’ ಪಟ್ಟಿಗೆ ಸೇರಿಸಲು ಸಂಶೋಧಕರ ತಂಡವು ಬಯಸಿದೆ. ‘ಪ್ಲಾನೆಟರಿ ಬೌಂಡರಿ’ ಅಂದರೆ, ಮಾನವನ ಅಭಿವೃದ್ಧಿ ಚಟುವಟಿಕೆಗಳಿಂದ ಭೂಮಿಯ ವ್ಯವಸ್ಥೆ ಮೇಲೆ ಉಂಟಾಗುತ್ತಿರುವ ಪರಿಣಾಮಗಳ ಮಿತಿಗಳನ್ನು ವಿವರಿಸುವ ಚೌಕಟ್ಟಾಗಿದೆ.

9 ಪ್ಲಾನೆಟರಿ ಬೌಂಡರಿ ಯಾವುವು?
ಪ್ಲಾನೆಟರಿ ಬೌಂಡರಿ ಪಟ್ಟಿಯಲ್ಲಿ ಹವಾಮಾನ ಬದಲಾವಣೆ, ಸಾಗರ ಆಮ್ಲೀಕರಣ, ವಾಯುಮಂಡಲದ ಓಝೋನ್ ಸವಕಳಿ, ಜಾಗತಿಕ ರಂಜಕ ಮತ್ತು ಸಾರಜನಕ ಚಕ್ರಗಳಲ್ಲಿ ಹಸ್ತಕ್ಷೇಪ, ಜೀವವೈವಿಧ್ಯದ ನಷ್ಟದ ಪ್ರಮಾಣ, ಜಾಗತಿಕ ಸಿಹಿನೀರಿನ ಬಳಕೆ, ಭೂ-ವ್ಯವಸ್ಥೆಯ ಬದಲಾವಣೆ, ಏರೋಸಾಲ್ ಲೋಡಿಂಗ್ ಮತ್ತು ರಾಸಾಯನಿಕ ಮಾಲಿನ್ಯ ಸೇರಿವೆ.

TAGGED:earthOxygenwaterಆಮ್ಲಜನಕನೀರುಭೂಮಿ
Share This Article
Facebook Whatsapp Whatsapp Telegram

Cinema news

3 Idiots
10 ವರ್ಷಗಳ ಬಳಿಕವೂ ಅದೇ ಪಾತ್ರಗಳೊಂದಿಗೆ ಬರಲಿದೆ 3 Idiots ಸೀಕ್ವೆಲ್
Bollywood Cinema Latest Top Stories
nikhil kumaraswamy actor chetan
ಡಾ.ರಾಜ್‌ಕುಮಾರ್ ಎಂದರೆ ಆರು ಕೋಟಿ ಕನ್ನಡಿಗರ ಭಾವನೆ: ನಟ ಚೇತನ್‌ಗೆ ನಿಖಿಲ್ ಕುಮಾರಸ್ವಾಮಿ ಕಿಡಿ
Bengaluru City Cinema Latest Sandalwood Top Stories
Sanjay Dutt
ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – ಕ್ಷಮೆಯಾಚಿಸಿದ ಸಂಜಯ್ ದತ್, ಬುಡಕಟ್ಟು ಜನಾಂಗದ 50 ಹುಡುಗಿಯರ ಶಿಕ್ಷಣಕ್ಕೆ ಹಣದ ಭರವಸೆ
Bollywood Cinema Latest National Sandalwood Top Stories
ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories

You Might Also Like

Apekshaben Sonis victory
Latest

100% ಮುಸ್ಲಿಂ ಮತದಾರರ ವಾರ್ಡ್‌ನಲ್ಲಿ ಸ್ವತಂತ್ರ ಹಿಂದೂ ಅಭ್ಯರ್ಥಿಗೆ ಗೆಲುವು

Public TV
By Public TV
2 minutes ago
Dharwad Suicide
Dharwad

ಧಾರವಾಡ | ಮರ್ಯಾದೆಗೆ ಅಂಜಿ ವಿದ್ಯಾರ್ಥಿ ನೇಣಿಗೆ ಶರಣು

Public TV
By Public TV
20 minutes ago
gundlupet inspector safari
Chamarajanagar

ನಿರ್ಬಂಧಿತ ಅರಣ್ಯಪ್ರದೇಶದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಬಿಂದಾಸ್ ಸವಾರಿ

Public TV
By Public TV
2 hours ago
supreme Court 1
Court

ಪ್ರತಿಯೊಂದು ಧಾರ್ಮಿಕ ಸಂಸ್ಥೆಗಳಲ್ಲಿ ನಿಯಮಗಳಿರಬೇಕು, ಅರಾಜಕತೆ ಇರಬಾರದು – ಶಬರಿಮಲೆ ಕೇಸ್‌ನಲ್ಲಿ ಸುಪ್ರೀಂ ಅಭಿಪ್ರಾಯ

Public TV
By Public TV
3 hours ago
Vidhana Soudha
Bengaluru City

ನೇಮಕಾತಿಗಳಲ್ಲಿ ಒಳಮೀಸಲಾತಿ ಜಾರಿಗೊಳಿಸಿ ಸರ್ಕಾರ ಆದೇಶ

Public TV
By Public TV
3 hours ago
drone camera captures footage of people gambling in bhadravati forest 19 detained
Crime

ಪೊಲೀಸರ ಕಣ್ತಪ್ಪಿಸಿ ಕಾಡಲ್ಲಿ ಜೂಜು – ಡ್ರೋನ್‌ ಕಣ್ಣಲ್ಲಿ ಸಿಕ್ಕಿಬಿದ್ದ ಗ್ಯಾಂಗ್‌, 19 ಮಂದಿ ವಶಕ್ಕೆ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?