ಬೆಂಗಳೂರು: ಬಿಜೆಪಿಯ (BJP) ಪ್ರಭಾವಿ ಮಾಜಿ ಶಾಸಕನನ್ನು (Ex-MLA) ‘ಕೈ’ ಪಾಳಯಕ್ಕೆ ಸೆಳೆಯಲು ಸೀಕ್ರೆಟ್ ಆಪರೇಷನ್ ಪ್ಲಾನ್ ಸಿದ್ಧವಾಗಿದೆ.
- Advertisement 2
ಕೈ ಆಪರೇಷನ್ ಸಿಲಿಕಾನ್ ಸಿಟಿಯಾಗಿದ್ದು, ಇದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ (DK Shivakumar) ಅವರ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಲೆಕ್ಕಾಚಾರದ ಆಪರೇಷನ್. ಅಪ್ಪಿ-ತಪ್ಪಿ ಕಾಂಗ್ರೆಸ್ಗೆ (Congress) ವಾಪಾಸಾದರೆ ಸಿದ್ದರಾಮಯ್ಯ (Siddaramaiah) ಮಾಜಿ ಶಿಷ್ಯನಿಗೆ ಕ್ಷೇತ್ರ ಕೈತಪ್ಪುವಂತೆ ಮಾಡುವುದು ಈ ಆಪರೇಷನ್ ಕಾಂಗ್ರೆಸ್ನ ಪ್ಲಾನ್. ಈ ಪ್ರಯತ್ನ ಯಶಸ್ವಿಯಾದರೆ ಬಿಜೆಪಿಯಲ್ಲಿರುವ ಸಿದ್ದರಾಮಯ್ಯ ಶಿಷ್ಯನನ್ನು ಅಲ್ಲೇ ಸೋಲಿಸುವ ಲೆಕ್ಕಾಚಾರ ಇದೆ. ಬಿಜೆಪಿಯಿಂದ ಕಾಂಗ್ರೆಸ್ಗೆ ಕರೆತಂದು ಟಿಕೆಟ್ ಕೊಡುವ ಡಿಕೆಶಿ ಪ್ರಯತ್ನಕ್ಕೆ ನವೆಂಬರ್ 2ನೇ ವಾರ ಕ್ಲೈಮ್ಯಾಕ್ಸ್ ಬೀಳಲಿದೆ. ಇದನ್ನೂ ಓದಿ: ದೈವಗಳು ಅಧರ್ಮಕ್ಕೆ ಬೆಂಬಲ ಕೊಡೋದಿಲ್ಲ ಅನ್ನೋದು ಸಿನಿಮಾದ ಸಂದೇಶ: ವೀರೇಂದ್ರ ಹೆಗ್ಗಡೆ
- Advertisement 3
- Advertisement 4
ಶತಾಯ ಗತಾಯ ಸಿಎಂ ಕುರ್ಚಿಯ ಕನಸು ಕಾಣುತ್ತಿರುವ ಡಿ.ಕೆ.ಶಿವಕುಮಾರ್ ಮುಂದಿನ ಚುನಾವಣೆಯಲ್ಲಿ ತಮ್ಮ ಬೆಂಬಲಿಗರ ಸಂಖ್ಯೆ ಹೆಚ್ಚಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ವಿರೋಧಿ ಪಾಳಯದ ಪ್ರಭಾವಿ ನಾಯಕರನ್ನು ಸೆಳೆದು ಟಿಕೆಟ್ ಕೊಡುವ ಲೆಕ್ಕಾಚಾರಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಬೆಂಗಳೂರಿನಲ್ಲಿ ಆಪರೇಷನ್ ಕಮಲಕ್ಕೆ ಒಳಗಾಗಿ ಸಚಿವರಾದ ಸಿದ್ದರಾಮಯ್ಯ ಆಪ್ತನ ಕ್ಷೇತ್ರದಲ್ಲಿ ಬಿಜೆಪಿ ಮಾಜಿ ಶಾಸಕನಿಗೆ ಡಿಕೆಶಿ ಗಾಳ ಹಾಕಿದ್ದಾರೆ. ಉಪ ಚುನಾವಣೆಯಲ್ಲಿ ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಸುಮ್ಮನಿದ್ದ ಆ ಮಾಜಿ ಶಾಸಕ ಈ ಬಾರಿ ಚುನಾವಣಾ ಅಖಾಡಕ್ಕೆ ಇಳಿಯಲೇಬೇಕು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಆ ಮಾಜಿ ಶಾಸಕನ ಕುಟುಂಬದಲ್ಲಿ ಮದುವೆ ಕಾರ್ಯಕ್ರಮ ಇರುವುದರಿಂದ ನವೆಂಬರ್ 2ನೇ ವಾರದಲ್ಲಿ ಮಾತುಕತೆ ನಡೆಸುವ ಭರವಸೆ ನೀಡಿದ್ದಾರೆ ಎಂದು ಆಪ್ತ ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ಭೀಕರ ರಸ್ತೆ ಅಪಘಾತ – ಟ್ರಕ್ಗೆ ಗುದ್ದಿದ ಬಸ್ 14 ಸಾವು, 40 ಮಂದಿಗೆ ಗಾಯ
ಕಾಂಗ್ರೆಸ್ ಟಿಕೆಟ್ ಪಡೆದು ಗೆದ್ದರೆ ತಮ್ಮ ಬೆಂಬಲಕ್ಕೆ ಒಬ್ಬ ಶಾಸಕ ನಿಂತಂತಾಯ್ತು. ಅಲ್ಲದೆ ಕಾಂಗ್ರೆಸ್ಗೆ ವಾಪಾಸ್ ಬರುವ ಪ್ರಯತ್ನಕ್ಕೆ ಸಿದ್ದರಾಮಯ್ಯ ಮಾಜಿ ಆಪ್ತ ಪ್ರಯತ್ನಿಸಿದರೆ ಅದಕ್ಕೆ ತಡೆ ಹಾಕಿದಂತಾಯ್ತು. ಹೀಗೆ ಒಂದೆ ಕಲ್ಲಿಗೆ ಎರಡು ಹಕ್ಕಿ ಹೊಡೆಯಲು ಡಿಕೆಶಿ ಪ್ಲಾನ್ ಮಾಡಿದ್ದಾರೆ.