ಕೋಲಾರ: ಎರಡು ಅರ್ಚಕ ಕುಟುಂಬಗಳ ನಡುವೆ ಇರುವ ಪ್ರತಿಷ್ಠೆಯಿಂದ ಗೌರಿಗಂಗಾಧರೇಶ್ವರ ಸ್ವಾಮಿ (Gowri Gangadhareshwara Swami Temple) ಬ್ರಹ್ಮರಥೋತ್ಸವಕ್ಕೆ (Brahma Rathotsava) ತಡೆಯಾಜ್ಞೆ ತಂದಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ (Kolara) ತಾಲೂಕು ತೇರಹಳ್ಳಿ ಗ್ರಾಮದ ಪುರಾತನ ಗೌರಿಗಂಗಾಧರೇಶ್ವರ ಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವ ಮಾರ್ಚ್ 17 ರಂದು ನಡೆಯಬೇಕಿತ್ತು. ಆದರೆ ಅರ್ಚಕರ ಕುಟುಂಬಗಳ ನಡುವಿನ ವಿವಾದದ ನಡೆದ ಕಾರಣ ಹೈಕೋರ್ಟ್ (High Court) ತಡೆಯಾಜ್ಞೆ ನೀಡಿದ್ದು ಬ್ರಹ್ಮರಥೋತ್ಸವವನ್ನು ಮುಂದೂಡಲಾಗಿದೆ. ಇದನ್ನೂ ಓದಿ: ಆಪರೇಷನ್ಗೆ ಸಿದ್ದರಿದ್ವಿ ಒಳ್ಳೆಯ ಹುಲಿಗಳು ಇದ್ದವು, ನಮ್ಮವರೇ ಕೆಲವರು ಒಪ್ಪಲಿಲ್ಲ: ಡಿಕೆಶಿ
ಅರ್ಚಕರಾದ ಮಂಜುನಾಥ್ ದೀಕ್ಷಿತ್ ಹಾಗೂ ಚಂದ್ರಶೇಖರ ದೀಕ್ಷಿತ್ ನಡುವೆ ರಥೋತ್ಸವ ಮಾಡುವ ವಿಚಾರದಲ್ಲಿ ಮೊದಲಿನಿಂದಲೂ ವಿವಾದ ಇತ್ತು. ಆದರೆ ಮುಜರಾಯಿ ತಹಶಿಲ್ದಾರ್ ಮಾರ್ಚ್ 17 ರಂದು ಬ್ರಹ್ಮರಥೋತ್ಸವಕ್ಕೆ ಅನುಮತಿ ನೀಡಿದ್ದರು.
ಆಗಮ ಶಾಸ್ತ್ರದ ಪ್ರಕಾರ ಒಂದೇ ವರ್ಷದಲ್ಲಿ ಎರಡು ಬಾರಿ ಬ್ರಹ್ಮರಥೋತ್ಸವ ಮಾಡಬಾರದೆಂದು ಕೋರಿ ಮಂಜುನಾಥ್ ದೀಕ್ಷಿತ್ ಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ತಡೆಯಾಜ್ಞೆ ಹಿನ್ನಲೆ ನಿಗದಿ ಮಾಡಿದ್ದ ಬ್ರಹ್ಮರಥೋತ್ಸವ ರದ್ದು ಮಾಡಿ ತಹಶೀಲ್ದಾರ್ ಆದೇಶ ಮಾಡಿದ್ದಾರೆ. ಇದನ್ನೂ ಓದಿ: WPL 2024: ಅಂಪೈರ್ ಎಡವಟ್ಟು – ಫಿಕ್ಸಿಂಗ್ ಹಣೆಪಟ್ಟಿ ಕಟ್ಟಿಕೊಂಡ ಮುಂಬೈ ಇಂಡಿಯನ್ಸ್
ಸದ್ಯ ಗ್ರಾಮಸ್ಥರ ಮನವೊಲಿಸಿ ಮುಜರಾಯಿ ಅಧಿಕಾರಿಗಳು ಬ್ರಹ್ಮರಥೋತ್ಸವವ ದಿನಾಂಕವನ್ನು ಮುಂದೂಡಿದ್ದಾರೆ.