Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕೈ ಶಾಸಕನಿಗೆ ಜನಾರ್ದನ ರೆಡ್ಡಿಯಿಂದ 100 ಕೋಟಿ ಆಫರ್ – ಆಡಿಯೋ ಕೇಳಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಕೈ ಶಾಸಕನಿಗೆ ಜನಾರ್ದನ ರೆಡ್ಡಿಯಿಂದ 100 ಕೋಟಿ ಆಫರ್ – ಆಡಿಯೋ ಕೇಳಿ

Bengaluru City

ಕೈ ಶಾಸಕನಿಗೆ ಜನಾರ್ದನ ರೆಡ್ಡಿಯಿಂದ 100 ಕೋಟಿ ಆಫರ್ – ಆಡಿಯೋ ಕೇಳಿ

Public TV
Last updated: May 18, 2018 7:26 pm
Public TV
Share
3 Min Read
REDDY AUDIO 1
SHARE

ಬೆಂಗಳೂರು: ಕರ್ನಾಟಕ ಪೊಲಿಟಿಕಲ್ ಲೀಗ್ ನಲ್ಲಿ ಕುದುರೆ ವ್ಯಾಪಾರ ಜೋರಾಗಿದ್ದು, ಬಿಜೆಪಿ ಪರವಾಗಿ ಸ್ವತಃ ಜನಾರ್ದನ ರೆಡ್ಡಿ ಅಖಾಡಕ್ಕೆ ಇಳಿದಿದ್ದಾರೆ.

ಕಾಂಗ್ರೆಸ್ ನಾಯಕರಾದ ವಿಎಸ್ ಉಗ್ರಪ್ಪ ಮತ್ತು ಪ್ರೊ ರಾಜೀವ್ ಗೌಡ ಜಂಟಿ ಸುದ್ದಿಗೋಷ್ಠಿ ನಡೆಸಿ ಜನಾರ್ದನ ರೆಡ್ಡಿ ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ಅವರಿಗೆ ಕರೆ ಮಾಡಿ ಆಫರ್ ನೀಡಿರುವ ಆಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಸೆಳೆಯಲು ನೂರು, ನೂರೈವತ್ತು ಕೋಟಿ ರೂ. ಆಮಿಷವೊಡ್ಡುತ್ತಿದ್ದಾರೆ. ಅಮಿತ್ ಶಾ ಕೂಡ ಆಮಿಷವೊಡ್ಡಿದ್ದಾರೆ. ನೂರು ಕೋಟಿ ರೂ. ಜೊತೆಗೆ ಕ್ಯಾಬಿನೆಟ್ ಸಚಿವ ಸ್ಥಾನದ ಆಮಿಷ ನೀಡಿದ್ದಾರೆ. ನಮ್ಮ ಶಾಸಕರ ಕುಟುಂಬದವರನ್ನ ಸಂಪರ್ಕಿಸಿ ಹಣ ನೀಡುವ ಕೆಲಸ ಮಾಡಿ, ಶಾಸಕರ ಮೇಲೆ ಒತ್ತಡ ತರುತ್ತಿದ್ದಾರೆ ಎಂದು ಉಗ್ರಪ್ಪ ಹೇಳಿದರು.

ಮಾತುಕತೆಯ ವೇಳೆ ಜನಾರ್ದನ ರೆಡ್ಡಿ ನೇರವಾಗಿ ಅಮಿತ್ ಶಾ ಅವರೊಂದಿಗೆ ಕೂತು ಮಾತನಾಡಲು ಅವಕಾಶ ಮಾಡಿಕೊಡುವುದಾಗಿ ತಿಳಿಸಿದ್ದು, ಒನ್ ಟು ಓನ್ ನಾನೇ ಅಮಿತ್ ಶಾ ಬಳಿ ಮಾತನಾಡಿಸುತ್ತೇನೆ. ಈಗಿರುವ ಆಸ್ತಿಯ ನೂರರಷ್ಟು ಆಸ್ತಿಯನ್ನು ಮಾಡಿಕೊಳ್ಳಬಹುದು. ನಿನಗೆ ಒಳ್ಳೆಯ ಸಮಯ ಬಂದಿದೆ ಎಂದು ಆಫರ್ ನೀಡಿದ್ದಾರೆ.

ರೆಡ್ಡಿ ಅಮಿಷಕ್ಕೆ ಒಳಗಾಗದ ಬಸನಗೌಡ ಅವರು, ಕಾಂಗ್ರೆಸ್ ಕಷ್ಟದ ಸಮಯದಲ್ಲಿ ನನ್ನ ಕೈ ಹಿಡಿದಿದೆ. ಆದರೆ ನಿಮ್ಮ ಮೇಲೆ ಗೌರವವಿದೆ. ಆದರೆ ತಾನು ಪಕ್ಷಕ್ಕೆ ಮೋಸ ಮಾಡಲು ಸಾಧ್ಯವಿಲ್ಲ ಎಂದು ಉತ್ತರಿಸಿದ್ದಾರೆ.

ಕಾಂಗ್ರೆಸ್ ಸುದ್ದಿಗೋಷ್ಠಿ ವೇಳೆ ಅಮಿತ್ ಶಾ ಅವರು ಸಹ ನಮ್ಮ ಶಾಸಕರಿಗೆ ಆಮಿಷ ನೀಡಿದ್ದಾರೆ. ಈ ವಿಡಿಯೋ ಸಹ ನಮ್ಮ ಬಳಿ ಇದೆ. ಅದನ್ನು ಸದ್ಯದಲ್ಲೇ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.

REDDY AUDIO 2

ಮಾತುಕತೆಯಲ್ಲಿ ಏನಿತ್ತು?

ಜನಾರ್ದನ ರೆಡ್ಡಿ ಪಿಎ – ಹಲೋ
ಬಸವನಗೌಡ – ಹಲೋ..
ಜನಾರ್ದನ ರೆಡ್ಡಿ ಪಿಎ – ಹಲೋ, ಫ್ರೀ ಆದ್ರೆ ಸರ್, ಜನಾರ್ದನ್ ರೆಡ್ಡಿ ಸರ್ ಹತ್ತಿರ ಮಾತನಾಡಬೇಕು ಅಂದ್ರು?
ಬಸವನಗೌಡ – ಕೊಡಿ ಕೊಡಿ..

ಜನಾರ್ದನ್ ರೆಡ್ಡಿ – ಬಸವನಗೌಡ,
ಬಸವನಗೌಡ -ಸರ್ ಹೇಳಿ ಸರ್ ಹೇಳಿ, ನಮಸ್ಕಾರ
ಜನಾರ್ದನ ರೆಡ್ಡಿ – ಫ್ರೀ ಇದಿಯಾ..?

ಬಸವನಗೌಡ – ಹೇಳಿ ಸರ್ ನಮಸ್ಕಾರ, ಫ್ರೀ ಇದ್ದೇನೆ.. ಹೇಳಿ
ಜನಾರ್ದನ ರೆಡ್ಡಿ – ಏನೇ ಇದ್ರು, ಕೆಟ್ಟ ಘಳಿಗೆಯನ್ನ ಮರೆತು ಹೋಗಿಬಿಡಿ. ನಾನ್ ನಿನಗೆ ಅರ್ಧ ರಾತ್ರಿಯಲ್ಲಿ ಹೇಳ್ತಾ ಇದ್ದೇನೆ. ನಿನ್ನ ಟೈಂ ಚೆನ್ನಾಗಿ ಶುರುವಾಗಿದೆ. ಮತ್ತೆ ನಿನ್ನ ಹತ್ತಿರ ನೇರವಾಗಿ ದೊಡ್ಡವ್ರು, ರಾಷ್ಟ್ರೀಯ ಅಧ್ಯಕ್ಷರು ಮಾತನಾಡುತ್ತಾರೆ. ನಿಮಗೆ ಏನ್ ಪದವಿ ಬೇಕು, ಏನ್ ಬೇಕು, ಒನ್ ಟು ಒನ್ ಕುತುಕೊಂಡು ಮಾತನಾಡಿ ಮುಂದಿನ ಹೆಜ್ಜೆ ಇಡೋಣ.

ಬಸವನಗೌಡ – ಇಲ್ಲ ಸರ್ ಇಲ್ಲ. ಯಾಕಂದ್ರೆ ಪರಿಸ್ಥಿತಿ ಚೆನ್ನಾಗಿಲ್ಲದಾಗ ಅವರು ನನ್ ಕೈ ಹಿಡಿದು ಮಾಡಿದ್ದಾರೆ.

ಜನಾರ್ದನ ರೆಡ್ಡಿ – ನಾನ್ ನಿನಗೆ ಒಂದೇ ಪಾಯಿಂಟ್ ಹೇಳ್ತೇನೆ, ಬಿಎಸ್‍ಆರ್ ಕಾಂಗ್ರೆಸ್ ಪಕ್ಷ ಮಾಡೋವಾಗ ತುಂಬ ಕೆಟ್ಟ ಸಂದರ್ಭದಲ್ಲಿ ಶ್ರೀರಾಮುಲು ಪಾರ್ಟಿ ಮಾಡಿದ್ದು, ತುಂಬ ವಿರೋಧದ ನಡುವೆ ಮಾಡಿದ್ದು, ನೀವೆಲ್ಲ ನಂಬಿಕೊಂಡು ಆಸ್ತಿ ಕಳೆದುಕೊಂಡಿದ್ದೀರಿ ಅನ್ನೋದ್ರಲ್ಲ ಎರಡನೇ ಮಾತೇ ಇಲ್ಲ.

ಜನಾರ್ದನ ರೆಡ್ಡಿ – ನಾನ್ ಹೇಳ್ತೇನೆ, ನೀನು ಅದಕ್ಕಿಂತ ನೂರಷ್ಟು ಬೆಳೆಯಬೇಕು. ಶಿವನಗೌಡ ನಾಯ್ಕ್ ಅವತ್ತು ನಾನ್ ಮಾತ್ ಕೇಳಿ ಬಂದು ಮಂತ್ರಿ ಆಗಿ ಉದ್ದಾರ ಆಗಿದ್ದು, ಇವತ್ತು ಎಂಎಲ್‍ಎಗೆ ಉಳಿದುಕೊಂಡು ತನ್ನಷ್ಟಕ್ಕೆ ತಾನು ಎಂಎಲ್‍ಎಗೆ ದುಡಿದುಕೊಂಡು ಶಕ್ತಿವಂತನಾಗಿದ್ದಾನಾ ಇಲ್ವಾ?

ಜನಾರ್ದನ ರೆಡ್ಡಿ – ನನ್ನಿಂದನೇ ಆಗಿದ್ದಲ್ವಾ? ರಾಜುಗೌಡ ನನ್ನಿಂದನೇ ಅಲ್ವಾ ಆಗಿದ್ದು?

ಬಸವನಗೌಡ – ಹು.. ಹೌದು..

ಜನಾರ್ದನ ರೆಡ್ಡಿ – ನಿನಗೆ ತಿಳಿಸುವುದು ಇಷ್ಟೇ. ನಮ್ಮ ಬ್ಯಾಡ್ ಟೈಂನಲ್ಲಿ ನಿಂದು ಮ್ಯಾಚ್ ಆಗಿಲ್ಲ. ನನಗೆ ನಿಂಗೆ. ಇವತ್ತು ಶಿವನಗೌಡ ನಾಯ್ಕ್ ಗೆದ್ದು ಪ್ರಯೋಜನವಿಲ್ಲ. ಇವತ್ತು ನೀನ್ ಮಂತ್ರಿ ಆಗ್ತಿಯಾ.

ಜನಾರ್ದನ ರೆಡ್ಡಿ – ನಾನು ಹೇಳೋದು ಇನ್ನೊಂದಲ್ಲ.ನೇರವಾಗಿ ದೊಡ್ಡವರ ಹತ್ತಿರನೇ ಒನ್ ಟು ಒನ್ ಕುರಿಸಿ ಮಾತನಾಡಿಸುತ್ತೇನೆ. ನಾನೇ ಸ್ವತಃ ಮಾತನಾಡಿಸುತ್ತೇನೆ. ಏನ್ ದೇಶದಲ್ಲಿ ಅವರು ಆಡಳಿತ ಮಾಡುತ್ತಿದ್ದಾರೆ. ಆ ಮಾತು ಉಳಿಸಿಕೊಳ್ಳದಕ್ಕೆ ಆಗುತ್ತಾ ಇರೋದು. ನಾನು ಹೇಳುತ್ತೇನೆ. ನಿನ್ನ ಆಸ್ತಿ ಮಾಡಿಕೊಳ್ತಿಯಲ್ಲ. ಅದಕ್ಕಿಂತ ನೂರರಷ್ಟು ಮಾಡಿಕೊಳ್ತಿಯ ಬಸವನಗೌಡ.

ಬಸವನಗೌಡ – ಇಲ್ಲ ಸರ್ ಸಾರಿ. ಏಕೆಂದರೆ ಲಾಸ್ಟ್ ಪರಿಸ್ಥಿತಿಯಲ್ಲಿ ಕರೆದುಕೊಂಡು ಹೋಗಿ ಟಿಕೆಟ್ ಕೊಡಿಸಿ, ಎಲೆಕ್ಷನ್ ಅವರೇ ಮಾಡಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರಿಗೆ ದ್ರೋಹ ಮಾಡುವುದು ಅರ್ಥವಿಲ್ಲ. ನಿಮ್ಮ ಮೇಲೆ ಗೌರವವಿದೆ. ಕ್ಷಮಿಸಿ.

TAGGED:Amit ShahbengalurubjpcongressJanardhan ReddyMLA'sPublic TVಅಮಿತ್ ಶಾಕಾಂಗ್ರೆಸ್ಜನಾರ್ದನ ರೆಡ್ಡಿಪಬ್ಲಿಕ್ ಟಿವಿಬಿಜೆಪಿಬೆಂಗಳೂರುಶಾಸಕರು
Share This Article
Facebook Whatsapp Whatsapp Telegram

Cinema news

nikhil kumaraswamy actor chetan
ಡಾ.ರಾಜ್‌ಕುಮಾರ್ ಎಂದರೆ ಆರು ಕೋಟಿ ಕನ್ನಡಿಗರ ಭಾವನೆ: ನಟ ಚೇತನ್‌ಗೆ ನಿಖಿಲ್ ಕುಮಾರಸ್ವಾಮಿ ಕಿಡಿ
Bengaluru City Cinema Latest Sandalwood Top Stories
Sanjay Dutt
ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – ಕ್ಷಮೆಯಾಚಿಸಿದ ಸಂಜಯ್ ದತ್, ಬುಡಕಟ್ಟು ಜನಾಂಗದ 50 ಹುಡುಗಿಯರ ಶಿಕ್ಷಣಕ್ಕೆ ಹಣದ ಭರವಸೆ
Bollywood Cinema Latest National Sandalwood Top Stories
ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories
chetan 13 5
ರಾಜ್‌ಕುಮಾರ್‌ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿಯೇ? – ನಟ‌ ಚೇತನ್ ವಿರುದ್ಧ ಡಾಕ್ಟರ್ ರಾಜ್‌ ಅಭಿಮಾನಿಗಳಿಂದ ದೂರು
Bengaluru City Cinema Latest Sandalwood Top Stories

You Might Also Like

siddaramaiah dk shivakumar car
Bengaluru City

ಒಂದೇ ಕಾರ್‌ನಲ್ಲಿ ಸಿಎಂ-ಡಿಸಿಎಂ ಪ್ರಯಾಣ; ಇಬ್ಬರು ನಾಯಕರಿಂದ ಅಚ್ಚರಿ ನಡೆ

Public TV
By Public TV
15 minutes ago
SN Narayanaswamy Bangarpet MLA
Bengaluru City

ಮೇ 15ರೊಳಗೆ ಸಂಪುಟ ಪುನರ್ ರಚನೆಯ ಸುದ್ದಿ ಸಿಗಲಿದೆ: ಬಂಗಾರಪೇಟೆ ನಾರಾಯಣಸ್ವಾಮಿ

Public TV
By Public TV
33 minutes ago
Madhu Bangarappa 1
Bagalkot

SSLC ಪರೀಕ್ಷೆಯಲ್ಲಿ 45 ಸಾವಿರ ವಿದ್ಯಾರ್ಥಿಗಳು ಫೇಲ್: ಮಧು ಬಂಗಾರಪ್ಪ

Public TV
By Public TV
34 minutes ago
R Ashok 1
Bengaluru City

ಸರ್ಕಾರ ಗುಂಡಿ ಮುಚ್ಚಿದ ಹಣವನ್ನು ಗುಂಡಿಗೆ ಹಾಕಿದೆ – ಅಶೋಕ್‌ ವಾಗ್ದಾಳಿ

Public TV
By Public TV
51 minutes ago
Suhas Sudhakar H.D Kumaraswamy
Chitradurga

ಹೆಚ್‌ಡಿಕೆ ʻಹೆಬ್ಬೆಟ್ಟು’ ಹೇಳಿಕೆಯಿಂದ ನೋವಾಗಿದೆ – ಬೇಸರ ಹೊರಹಾಕಿದ ಡಿ.ಸುಧಾಕರ್ ಪುತ್ರ

Public TV
By Public TV
51 minutes ago
DK Shivakumar Iqbal Hussain
Districts

ಮೇ 15ಕ್ಕೆ ಡಿಕೆಶಿ ಸಿಎಂ ಆಗೋದು ಫಿಕ್ಸ್, ಇದೇ ನನ್ನ ಅಂತಿಮ ದಿನಾಂಕ: ಇಕ್ಬಾಲ್ ಹುಸೇನ್

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?