ಕಾಂಗ್ರೆಸ್ ಮುಳುಗುವ ಹಡಗಿಗೆ ಹೊಸ ಕ್ಯಾಪ್ಟನ್ ಮಾಡಿದೆ: ಆರಗ ಜ್ಞಾನೇಂದ್ರ

Public TV
2 Min Read
ARAGAJANENDRA

ಬೆಂಗಳೂರು: ಮುಳುಗುವ ಹಡಗಿಗೆ ಕಾಂಗ್ರೆಸ್‌ನವರು (Congress) ಹೊಸ ಕ್ಯಾಪ್ಟನ್ ನೇಮಿಸಿ ಬದಲಾವಣೆ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಈ ವಯಸ್ಸಿನಲ್ಲಿ ಇಡೀ ದೇಶ ಸುತ್ತಿ ಹೇಗೆ ಪಕ್ಷ ಕಟ್ತಾರೋ ಗೊತ್ತಿಲ್ಲ. ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.

Rahul Gandhi Sonia Gandhi

ನಿನ್ನೆ ಕಾಂಗ್ರೆಸ್ ಸಮಾವೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುತ್ತೇವೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಅವರು ಇನ್ನೊಬ್ಬರಿಗೆ ಟೀಕೆ ಮಾಡೋದು ಯಶಸ್ಸು ಅಂತ ಅಂದುಕೊಂಡಿದ್ದಾರೆ. ಆದರೆ ಅದು ಯಾವುದು ಕೈಗೂಡುವುದಿಲ್ಲ. ಕಾಂಗ್ರೆಸ್ ಎಷ್ಟು ಭ್ರಷ್ಟಾಚಾರ ಮಾಡಿದೆ ಅಂತ ಜನರಿಗೆ ಗೊತ್ತಿದೆ. ಕಾಂಗ್ರೆಸ್ ಅವರು ಮುಳುಗುವ ಹಡಗಿಗೆ ಈಗ ಹೊಸ ಕ್ಯಾಪ್ಟನ್ ಬದಲಾವಣೆ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಗಾಂಧಿ ಕುಟುಂಬಕ್ಕೆ ಸದ್ಯಕಿಲ್ಲ ಮುಕ್ತಿ – ರಾಹುಲ್, ಸೋನಿಯಾಗೆ ಮತ್ತೆ ED ಸಮನ್ಸ್?

Mallikarjun Kharge 4

ಇಷ್ಟು ದಿನ ಆ ಕುಟುಂಬವೇ ಎಲ್ಲಾ ಮಾಡ್ತಿತ್ತು. ಪಕ್ಷ ಮುಳುಗೋ ಸಮಯದಲ್ಲಿ ಖರ್ಗೆಗೆ (Mallikarjun Kharge)  ಅಧಿಕಾರ ಕೊಟ್ಟಿದ್ದಾರೆ. ಖರ್ಗೆ  ಅವರ ಮೇಲೆ ನನಗೆ ಅಪಾರ ಗೌರವ ಇದೆ. ಆದ್ರೆ ಈ ವಯಸ್ಸಿನಲ್ಲಿ ಇಡೀ ದೇಶ ಸುತ್ತಿ ಹೇಗೆ ಪಕ್ಷ ಕಟ್ತಾರೋ ಗೊತ್ತಿಲ್ಲ. ಕಾಂಗ್ರೆಸ್‍ಗೆ ದೇಶ, ರಾಜ್ಯದಲ್ಲಿ ಭವಿಷ್ಯ ಇಲ್ಲ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ದಯವಿಟ್ಟು ಭಾವೋದ್ವೇಗದಿಂದ ಮಾತನಾಡಬೇಡಿ – ರೇಣುಕಾಚಾರ್ಯಗೆ ಆರಗ ಜ್ಞಾನೇಂದ್ರ ಮನವಿ

siddaramaiah 4

ಸಿದ್ದರಾಮಯ್ಯರಿಂದ (Siddaramaiah) ಕಾಂಗ್ರೆಸ್ ಅಧಿಕಾರಕ್ಕೆ ತರುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತು ಕೊಟ್ಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ನಾಯಕರು ಏನ್ ಮಾತಾಡ್ತಾರೆ ಅನ್ನೋದು ಮುಖ್ಯ ಅಲ್ಲ. ಜನ ಏನ್ ಮಾತಾಡ್ತಾರೆ ಅನ್ನೋದು ಮುಖ್ಯ. ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಏನೇನು ಮಾಡಿದ್ದಾರೆ ಅಂತ ಜನರಿಗೆ ಗೊತ್ತಿದೆ. ಕಾಂಗ್ರೆಸ್ ಅವ್ರು ನಂಬಿಕೆ ಭರವಸೆ ಕಳೆದುಕೊಂಡಿದ್ದಾರೆ. ಅವರು ಅಧಿಕಾರದಲ್ಲಿ ಇದ್ದಾಗ ಭ್ರಷ್ಟಾಚಾರ ಮಾಡಿದ್ದಾರೆ. ಈಗ ಏನ್ ಮಾತಾಡಿದ್ರು ಜನ ನಂಬುವ ಸ್ಥಿತಿಯಲ್ಲಿ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *