ಚಿಕ್ಕಮಗಳೂರು: ಅಯೋಧ್ಯೆಯ (Ayodhya) ಬಾಲಕರಾಮನಿಗೆ ಮಲೆನಾಡಿನ ರೈತರು ವಿಶೇಷ ಬೇಡಿಕೆ ಪತ್ರದೊಂದಿಗೆ ಅಡಿಕೆ ಹಿಂಗಾರ (Betel Nut Flower) ಸಮರ್ಪಣೆಗೆ ಮುಂದಾಗಿದ್ದಾರೆ.
ಮಲೆನಾಡಿನಲ್ಲಿ ಅಡಿಕೆಗೆ ಹಳದಿ ಎಲೆ ರೋಗದ ಸಮಸ್ಯೆ ಇದೆ. ಕಸ್ತೂರಿ ರಂಗನ್ ವರದಿಯ ಭೀತಿ, ಬಫರ್ ಜೋನ್ ಹಾಗೂ ಮೀಸಲು ಅರಣ್ಯದ ಹೆಸರಲ್ಲಿ ಆಳುವ ವರ್ಗದ ಕಾನೂನಿನ ಕುಣಿಕೆಗೆ ಬೆಲೆ ತೆರುವಂತಾಗಿದೆ. ಕೃಷಿಯನ್ನೇ ನಂಬಿ ಜೀವನ ನಡೆಸುವವರ ಜೀವನ ಉಳಿಯಲಿ ಎಂಬ ಪ್ರಾರ್ಥನೆಯ ಪತ್ರದೊಂದಿಗೆ ಮಲೆನಾಡಿನ ಅಡಿಕೆ ಹಿಂಗಾರ ಸರ್ಮಪಿಸಲು ಮಲೆನಾಡಿನ ಶ್ರೀರಾಮನ ಭಕ್ತರು ಮುಂದಾಗಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಜನಸಾಗರ- ರಾಮಲಲ್ಲಾನ ದರ್ಶನಕ್ಕೆ ಓಡೋಡಿ ಬರುತ್ತಿರೋ ಭಕ್ತರು
ಬಾಳೆಹೊನ್ನೂರಿನ (Balehonnur) ಖಾಂಡ್ಯ ಮಾಕರ್ಂಡೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದು, ಅಯೋಧ್ಯೆಗೆ ಶ್ರೀರಾಮನ ಭಕ್ತರು ತೆರಳಲು ತಯಾರಿ ನಡೆಸಿದ್ದಾರೆ. ಸೋಮವಾರ ಅಥವಾ ಮಂಗಳವಾರ ರಾಮಲಲ್ಲನಿಗೆ ಅಡಿಕೆ ಹಿಂಗಾರ ಸಮರ್ಪಣೆಯಾಗಲಿದೆ. ಇದನ್ನೂ ಓದಿ: ಸಿಎಂ ಆಗಿದ್ದೀರಿ, ಪಿಎಂ ಕೂಡ ಆಗಿದ್ದೀರಿ.. ಈಗ ಆರಾಮಾಗಿರಿ ಅಂತ ಹಿರಿಯ ನಾಯಕರು ಹೇಳಿದ್ದರು: ಮೋದಿ