ಚಿಕ್ಕಬಳ್ಳಾಪುರ: ಅನುಮಾನಸ್ಪದವಾಗಿ ಸಾವಿರಾರು ರೂಪಾಯಿ ಮಾಲ್ಯದ ತಂಬಾಕು ಪ್ಯಾಕೆಟ್ಗಳನ್ನು ರಸ್ತೆ ಬದಿಯಲ್ಲಿನ ಹಳ್ಳಕ್ಕೆ ಎಸೆದು, ಬೆಂಕಿ ಹಚ್ಚಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೊಡಿಗೇಹಳ್ಳಿ ಬಳಿ ಕಂಡುಬಂದಿದೆ.
ಕೊಡಿಗೇಹಳ್ಳಿ ಸಮೀಪದ ನಿರ್ಮಾಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿನ ಗುಂಡಿಯಲ್ಲಿ, ಸುಮಾರು ಮೂರು ದೊಡ್ಡ ದೊಡ್ಡ ಚೀಲಗಳಲ್ಲಿ ತುಂಬಿದ ವಿವಿಧ ಕಂಪನಿಗಳ ಸಾವಿರಾರು ಮೌಲ್ಯದ ತಂಬಾಕು ಪ್ಯಾಕೆಟ್ಗಳನ್ನು ಎಸೆದು ಬೆಂಕಿ ಹಚ್ಚಲಾಗಿದೆ. ಆದರೆ ಬೆಂಕಿ ಪೂರ್ಣ ಪ್ರಮಾಣದಲ್ಲಿ ಹರಡದೆ ಪ್ಯಾಕೆಟ್ಗಳು ಅರ್ಧಂಬರ್ಧ ಸುಟ್ಟು ಹೋಗಿವೆ. ಇದನ್ನೂ ಓದಿ: ರಾಖಿ ಕಟ್ಟಲು ಹೋಗುತ್ತಿದ್ದ ಬಾಲಕಿ ಮೇಲೆ ಗ್ಯಾಂಗ್ ರೇಪ್
ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿಯೇ ಖಾಸಗಿ ವಿದ್ಯಾಸಂಸ್ಥೆಯೊಂದಿದ್ದು, ಇಷ್ಟು ದೊಡ್ಡ ಮಟ್ಟದ ತಂಬಾಕು ಪ್ಯಾಕೆಟ್ಗಳನ್ನು ರಸ್ತೆ ಬದಿ ಎಸೆದು, ಬೆಂಕಿ ಹಚ್ಚಲು ಕಾರಣವೇನು ಎಂಬ ಅನುಮಾನ ಸ್ಥಳೀಯರನ್ನು ಕಾಡುತ್ತಿದೆ. ಇದನ್ನೂ ಓದಿ: ಪ್ರೀತಿಯ ಸುಳಿಗೆ ಸಿಕ್ಕಿಬಿದ್ದ ಬಾಲೆ – ಮದುವೆಯಾಗಲು ಪ್ರಿಯಕರ ಒಪ್ಪದ್ದಕ್ಕೆ ಆತ್ಮಹತ್ಯೆ
Live Tv
[brid partner=56869869 player=32851 video=960834 autoplay=true]