ಚೆನ್ನೈ: ನಾಯಕ ರುತುರಾಜ್, ಕಾರ್ತಿಕ್ ಶರ್ಮಾ ಅರ್ಧಶತಕಗಳ ಜೊತೆಯಾಟ ನೆರವಿನಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡವು 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಮತ್ತೆ 6ನೇ ಸ್ಥಾನಕ್ಕೇರಿದ್ದು, ಪ್ಲೇ ಆಫ್ ರೇಸ್ನಲ್ಲಿ ಉಳಿದುಕೊಂಡಿದೆ. ಆದ್ರೆ ಹೀನಾಯವಾಗಿ ಸೋತ ಹಾರ್ದಿಕ್ ಪಾಂಡ್ಯ ಪಡೆಗೆ ಪ್ಲೇ ಆಫ್ ಹಾದಿ ಬಹುತೇಕ ಬಂದಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಸಾಧಾರಣ ಗುರಿ ಬೆನ್ನಟ್ಟಿದ ಚೆನ್ನೈ 11 ಎಸೆತಗಳಿರುವಾಗಲೇ 2 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿ ಗೆಲುವು ಸಾಧಿಸಿದೆ. ಇದನ್ನೂ ಓದಿ: ಧೋನಿಯಂತೆ 5 ಐಪಿಎಲ್ ಟ್ರೋಫಿ ಗೆಲ್ಲುವುದು ನನ್ನ ಗುರಿ: ಕೆಎಲ್ ರಾಹುಲ್

ಚೇಸಿಂಗ್ ಶುರು ಮಾಡಿದ ಚೆನ್ನೈ ಉತ್ತಮ ಆರಂಭ ನೀಡಿದರೂ 1.6 ಓವರ್ನಲ್ಲೇ ಮೊದಲ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಹಿಂದಿನ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಸಂಜು ಸ್ಯಾಮನ್ಸ್ ಈ ಮ್ಯಾಚ್ನಲ್ಲಿ 11 ರನ್ಗೆ ಔಟಾದರು. ಆದರೂ ಛಲ ಬಿಡದೇ ರುತುರಾಜ್ ಗಾಯಕ್ವಾಡ್ ನಾಯಕನ ಆಟವಾಡಿ ತಂಡವನ್ನು ಮುನ್ನಡೆಸಿದರು. ಸಾಥ್ ನೀಡಿದ ಕಾರ್ತಿಕ್ ಶರ್ಮಾನೊಂದಿಗೆ ಬರೋಬ್ಬರಿ 98 ರನ್ಗಳ ಜೊತೆಯಾಟವಾಡಿದರು.
ರುತುರಾಜ್ ಗಾಯಕ್ವಾಡ್ 48 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸ್ ಬಾರಿಸಿ 67 ರನ್ಗಳಿಸಿದರು. ಕಾರ್ತಿಕ್ ಶರ್ಮಾ 40 ಎಸೆತಗಳಲ್ಲಿ 54 ರನ್, ಉರ್ವಿಲ್ ಪಟೇಲ್ 12 ಎಸೆತಗಳಲ್ಲಿ 24 ರನ್ ಬಾರಿಸಿದರು. ಮುಂಬೈ ಪರ ಬೌಲಿಂಗ್ ಮಾಡಿದ ಬುಮ್ರಾ, ಗಜನ್ಫರ್ ತಲಾ ಒಂದೊಂದು ವಿಕೆಟ್ ಕಿತ್ತರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಮುಂಬೈ 1.2 ಓವರ್ನಲ್ಲಿ ಮೊದಲ ವಿಕೆಟ್ ಕಳೆದುಕೊಂಡು ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ನಮನ್ ಧೀರ್ ಅರ್ಧಶತಕ, ರಿಕಲ್ಟನ್ ಜೊತೆಯಾಟದಿಂದ 155 ರನ್ಗಳ ಗೆಲುವಿನ ಗುರಿ ನೀಡಲು ನೆರವಾದರು. ರಯಾನ್ ರಿಕಲ್ಟನ್ 24 ಎಸೆತಗಳಲ್ಲಿ 37 ರನ್, ನಮನ್ ಧೀರ್ 37 ಎಸೆತಗಳಲ್ಲಿ 57 ರನ್, ಸೂರ್ಯಕುಮಾರ್ ಯಾದವ್ 12 ಎಸೆತಗಳಲ್ಲಿ 21 ರನ್, ಹಾರ್ದಿಕ್ ಪಾಂಡ್ಯ 23 ಎಸೆತಗಳಲ್ಲಿ 18 ರನ್ ಗಳಿಸಿದರು. ಚೆನ್ನೈ ಪರ ಬೌಲಿಂಗ್ ಮಾಡಿದ ಕಾಂಬೋಜ್ 3 ವಿಕೆಟ್ ಕಿತ್ತರು. ನೂರ್ ಅಹ್ಮದ್ 2 ಹಾಗೂ ರಾಮಕೃಷ್ಣ, ಜೇಮೀ ತಲಾ ಒಂದು ವಿಕೆಟ್ ಪಡೆದುಕೊಂಡರು.ಇದನ್ನೂ ಓದಿ: ಕನ್ನಡಿಗ ರಾಹುಲ್, ನಿಸ್ಸಂಕಾ ಬ್ಯಾಟಿಂಗ್ ಅಬ್ಬರಕ್ಕೆ ರಾಜಸ್ಥಾನ್ ತತ್ತರ – ಡೆಲ್ಲಿಗೆ 7 ವಿಕೆಟ್ಗಳ ಭರ್ಜರಿ ಜಯ

