ಮನೆ ಕಟ್ಟಿಸಲು ಹಣ ಡ್ರಾ ಮಾಡಿದ ಶಿಕ್ಷಕನಿಗೆ 2 ಲಕ್ಷ ಪಂಗನಾಮ!

Public TV
1 Min Read
MONEY

ಚಾಮರಾಜನಗರ: ಶಿಕ್ಷಕರೊಬ್ಬರಿಗೆ ಸ್ಪ್ರೇ ಮಾಡಿ ತುರಿಕೆ ಬರುತ್ತಿದ್ದಂತೆ ಗಮನ ಬೇರೆಡೆ ಸೆಳೆದು ಹಾಡಹಗಲೇ 2 ಲಕ್ಷ ರೂಪಾಯಿ ಹಣವನ್ನು ಲಪಟಾಯಿಸಿರುವ ಘಟನೆ ಚಾಮರಾಜನಗರದ ಭುವನೇಶ್ವರಿ ವೃತ್ತದ ಸಮೀಪ ನಡೆದಿದೆ.

money

ಚಾಮರಾಜನಗರ ತಾಲೂಕಿನ ಕಾಳನಹುಂಡಿಯಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ನಗರದ ಹೌಸಿಂಗ್ ಬೋರ್ಡ್ ನಿವಾಸಿ ಶಿವಕುಮಾರ್ ಹಣ ಕಳೆದುಕೊಂಡವರು. ಇವರು ಮನೆ ಕಟ್ಟಿಸುವ ಸಲುವಾಗಿ ಇಟ್ಟಿದ್ದ ಒಂದು ಲಕ್ಷ ರೂ. ಹಣ ಸೇರಿದಂತೆ ಕೆನರಾ ಬ್ಯಾಂಕಿನಲ್ಲಿ ಒಂದು ಲಕ್ಷ ರೂ. ಹೌಸಿಂಗ್ ಲೋನ್ ಹಣ ಡ್ರಾ ಮಾಡಿಕೊಂಡು ಒಟ್ಟು 2 ಲಕ್ಷ ರೂಪಾಯಿ ಹಣವನ್ನು ಬ್ಯಾಗ್‍ಗೆ ಹಾಕಿಕೊಂಡು ಬಸ್‍ಗಾಗಿ ಕಾಯುತ್ತಿದ್ದನ್ನು ಗಮನಿಸಿದ ವ್ಯಕ್ತಿವೋರ್ವ ಸ್ಪ್ರೇ ಮಾಡಿದ್ದಾನೆ. ಇದನ್ನೂ ಓದಿ: ಬಿರಿಯಾನಿ ತಿನ್ನಲು ಹೋಗಿ 2 ಲಕ್ಷ ರೂ. ಕಳೆದುಕೊಂಡ ಆಟೋ ಚಾಲಕ

FotoJet 14

ಕೂಡಲೇ ಶಿವಕುಮಾರ್ ಅವರಿಗೆ ತುರಿಕೆ, ಉರಿ ಕಾಣಿಸಿಕೊಂಡಿದ್ದು ಬ್ಯಾಗ್ ಪಕ್ಕಕ್ಕಿಟ್ಟು ತಮ್ಮ ವಾಟರ್ ಬಾಟೆಲ್ ನಿಂದ ಕುತ್ತಿಗೆಗೆ ನೀರು ಹಾಕಿಕೊಳ್ಳುತ್ತಿರುವಾಗ ಮಧ್ಯ ವಯಸ್ಕ ವ್ಯಕ್ತಿವೋರ್ವ ಬ್ಯಾಗ್ ಲಪಟಾಯಿಸಿ ಪರಾರಿಯಾಗಿದ್ದಾನೆ. ಈ ಸಂಬಂಧ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದ್ದು ಭುವನೇಶ್ವರಿ ವೃತ್ತದ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *