ಚಿತ್ರದುರ್ಗ: ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಕೋರ್ಟ್ (Court) ವಿಧಿಸಿದ್ದ ದಂಡ (Fine) ಕಟ್ಟಲಾಗದೇ ಬೈಕ್ (Bike) ಸವಾರ ಜೈಲು (Jail) ಪಾಲಾಗಿರುವ ಘಟನೆ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ.
ಚಿತ್ರದುರ್ಗ ಮಾರುಕಟ್ಟೆಯಲ್ಲಿ ಹಮಾಲಿ ಕೆಲಸ ಮಾಡುವ ಕಾರ್ಮಿಕ ರವಿಕುಮಾರ್ ದಂಡ ಕಟ್ಟಲಾಗದ ವ್ಯಕ್ತಿ. ಈತ ಫೆ. 2ರಂದು ಮದ್ಯಪಾನ ಮಾಡಿ ವಾಹನ ಚಲಿಸಿದ್ದ. ಹೀಗಾಗಿ ಸಂಚಾರ ಠಾಣೆ ಪೊಲೀಸರು ಆತನ ವಿರುದ್ಧ ನಿಯಮದಂತೆ ಅಪಾಯಕಾರಿ ಚಾಲನೆ ಹಾಗೂ ಹೆಲ್ಮೆಟ್ ಧರಿಸದೇ ನಿಯಮ ಉಲ್ಲಂಘನೆ ಕೇಸ್ ದಾಖಲಿಸಿದ್ದರು.
ಚಿತ್ರದುರ್ಗದ ಮೆದೇಹಳ್ಳಿ ರಸ್ತೆಯಲ್ಲಿ ಬೈಕ್ ಸವಾರ ರವಿಕುಮಾರನನ್ನು ವಶಕ್ಕೆ ಪಡೆದು, ಸಂಚಾರಿ ಠಾಣೆ ಪೊಲೀಸರು ಕೇಸ್ ದಾಖಲಿಸಿದ್ದರು. ನಂತರ ಚಿತ್ರದುರ್ಗ ಸಿಜೆಎಂ ಮತ್ತು ಜೆಎಂಎಫ್ಸಿ ಕೋರ್ಟ್ನಿಂದ ಒಟ್ಟು 20,500 ರೂ. ದಂಡ ವಿಧಿಸಲಾಗಿತ್ತು. ಆದರೆ ಕಾರ್ಮಿಕ ರವಿಕುಮಾರ್ ದಂಡ ಕಟ್ಟಲಾಗಲು ಅಶಕ್ತನಾಗಿದ್ದ ಹಿನ್ನೆಲೆಯಲ್ಲಿ ಶೇ.50ರಷ್ಟು ರಿಯಾಯಿತಿ ನೀಡಿ 10,250ರೂ.ಗೆ ಇಳಿಸಲು ಕೋರ್ಟ್ ಆದೇಶಿಸಿತ್ತು. ಇದನ್ನೂ ಓದಿ: ಮದುವೆಗೂ ಮುಂಚೆ ಕಂಡೀಷನ್ಸ್ ಅಪ್ಲೈ- ಬೆಂಗಳೂರಿನ ವಧು, ವರರ ನಯಾ ಟ್ರೆಂಡ್
ಆದರೆ ಆರೋಪಿ ರವಿಕುಮಾರ್ಗೆ ದಂಡ ಕಟ್ಟಲಾಗದೇ ಜೈಲುಪಾಲಾಗಿದ್ದಾನೆ. ಸದ್ಯ ನಾಯಾಂಗ ಬಂಧನದಲ್ಲಿರುವ ಕಾರ್ಮಿಕ (ಹಮಾಲಿ) ರವಿಕುಮಾರ್ ಡ್ರಿಂಕ್ ಡ್ರೈವ್ ಕೇಸ್ನಲ್ಲಿ ಜೈಲು ಸೇರಿರುವುದು ಮದ್ಯಪಾನ ಮಾಡಿ ವಾಹನ ಚಲಾಯಿಸುವವರಲ್ಲಿ ನಡುಕ ಹುಟ್ಟಿಸಿದೆ. ಇದನ್ನೂ ಓದಿ: ಟಿಕೆಟ್ ಕೋಲಾಹಲ- ಹಾಸನ ಜೆಡಿಎಸ್ನಲ್ಲಿ ಪಕ್ಷಾಂತರ ಪರ್ವ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k