ಬಿಗ್ ಬಾಸ್ ಮನೆಯ ರಂಗು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರತಿ ವಾರ ಆಟದಲ್ಲಿ ಹೊಸ ಟ್ವೀಸ್ಟ್ ಮೂಲಕ ನೋಡುಗರ ಕುತೂಹಲ ಕೆರಳಿಸುತ್ತಿದೆ. ಇನ್ನು ಒಂದಲ್ಲಾ ಒಂದು ವಿಚಾರವಾಗಿ ಮನೆಯ ಹೈಲೈಟ್ ಆಗುತ್ತಿದ್ದ ಸೋನು ಶ್ರೀನಿವಾಸ್ ಗೌಡಗೆ ರಾಕೇಶ್ ಅಡಿಗ ತಿರುಗೇಟು ನೀಡಿದ್ದಾರೆ.
ದೊಡ್ಮನೆಯಲ್ಲಿ ಮನರಂಜನೆಯ ವಿಚಾರದಲ್ಲಿ ಸೋನು ಅಟ್ರಾಕ್ಷನ್ ಆಗಿದ್ದರು. ಟಾಸ್ಕ್ ಮತ್ತು ಅಡುಗೆ ವಿಚಾರದಲ್ಲೂ ಸೈ ಎನಿಸಿಕೊಂಡಿದ್ದರು. ಇದೀಗ ಸೋನು ಅಳಿವು ಮತ್ತು ಉಳಿವಿನ ಪ್ರಶ್ನೆ ಎದುರಾಗಿದೆ. ಇಡೀ ವಾರದ ಪರ್ಫಾಮೆನ್ಸ್ ನೋಡಿ ಇದೀಗ ಸೋನು ಕಳಪೆ ಬೋರ್ಡ್ ನೀಡಿದ್ದಾರೆ. ಪ್ರತಿ ವಾರ ಬೆಸ್ಟ್ ಪರ್ಫಾಮೆನ್ಸ್ ಮತ್ತು ಕಳಪೆ ಪ್ರದರ್ಶನ ನೀಡಿದವರನ್ನ ಗುರುತಿಸಲಾಗುತ್ತದೆ. ಅದೇ ರೀತಿ ಮನೆ ಮಂದಿಯ ಅಭಿಪ್ರಾಯದ ಮೇರೆಗೆ ನಾಲ್ಕನೇ ವಾರದ ಪರ್ಫಾಮರ್ ಆಗಿ ಜಯಶ್ರೀ ಗುರುತಿಸಿಕೊಂಡರೆ, ಕಳಪೆ ಪ್ರದರ್ಶನಕ್ಕೆ ಸೋನು ನೀಡಿದ್ದಾರೆ. ಇದನ್ನೂ ಓದಿ:ರಿಯಲ್ ಪ್ರೇಮಿಗಳು ‘ಬಿಗ್ ಬಾಸ್’ ಮನೆಯಲ್ಲಿ ಬೇರೆ ಬೇರೆ ಆಗ್ತಾರಾ?: ದೂರಾಗುವ ಕುರಿತು ಮಾತನಾಡಿದ ನಂದಿನಿ
ಇನ್ನು ಬಿಗ್ ಬಾಸ್ ಮನೆಯಲ್ಲಿ ತಮ್ಮ ಮಾತೇ ಸೋನುಗೆ ಕುತ್ತಾಗಿದೆ. ಸಾಕಷ್ಟು ಅವರು ನಾವೇನು ಮನೆ ಕೆಲಸ ಮಾಡೋದಕ್ಕೆ ಬಂದಿದ್ದೀವಾ ಎಂದು ಹೇಳಿದ್ದರು. ಅದನ್ನೇ ರಾಕೇಶ್ ಅಡಿಗ ಕೂಡ ಹೇಳಿದ್ದಾರೆ. ಸೋನು ಕಳಪೆ ಪ್ರದರ್ಶನದ ಬಗ್ಗೆ ರಾಕೇಶ್ ಮಾತನಾಡಿದ್ದಾರೆ.
ನನ್ನ ಲೈಫ್ನಲ್ಲಿ ಇವಾಗ ಬುದ್ದಿ ಕಲಿತುಕೊಂಡೆ. ಜೊತೆಯಲ್ಲಿ ಇದ್ದವರಿಂದಲೇ ಮೋಸವಾಗಿದೆ ಎಂಬ ಮಾತನ್ನ ಸೋನು ಹೇಳಿ ಕಣ್ಣೀರಿಟ್ಟಿದ್ದಾರೆ. ಬಿಗ್ ಬಾಸ್ ಹೇಳಿದ್ದಾರಾ ಮನೆ ಕೆಲಸ ಮಾಡಿ ಅಂತಾ, ಯಾವೋನು ಹೇಳಿದ್ದಾರೆ ಮನೆ ಕೆಲಸ ಮಾಡಿ ಅಂತಾ ಕರಕೊಂಡು ಬನ್ನಿ ಅಂತಾ ಸೋನು ರಾಕೇಶ್ ವಿರುದ್ಧ ಫುಲ್ ಗರಂ ಆಗಿದ್ದಾರೆ. ಮನರಂಜನೆಯ ವಿಚಾರದಲ್ಲಿ ಸೋನುಗೆ ಓಟು ನೀಡಿದ್ದ ಮನೆಯವರಿಂದಲೇ ಇದೀಗ ಎದುರೇಟು ಸಿಕ್ಕಿದೆ. ಕಳಪೆ ಪ್ರದರ್ಶನಕ್ಕೆ ಬಿಗ್ ಬಾಸ್ ಮನೆಯಲ್ಲಿ ಸೋನು ಜೈಲು ಸೇರಿದ್ದಾರೆ.