ಬೀದರ್: ಪೌರತ್ವ ಕಾಯ್ದೆ ವಿರೊಧಿಸಿ ಇಂದು ಕಲಬುರಗಿಯಲ್ಲಿ ಬೃಹತ್ ಸಮಾವೇಶ ನಡೆಯುತ್ತಿದೆ. ಪ್ರತಿಭಟನೆಯಲ್ಲಿ ಲಕ್ಷಾಂತರ ಜನ ಭಾಗಿಯಾಗಲಿದ್ದಾರೆ. ಹೀಗಾಗಿ ಈ ಸಮಾವೇಶದಲ್ಲಿ ಭಾಗಿಯಾಗಲು ಯುವಕರ ತಂಡವೊಂದು ಬಸವಕಲ್ಯಾಣದಿಂದ ಕಲಬುರಗಿಗೆ ಪಾದಯಾತ್ರೆ ಬೆಳೆಸಿದೆ.
ಯುವಕರು ಬಸವಕಲ್ಯಾಣ ಪಟ್ಟಣದ ಮಹಾತ್ಮಾಗಾಂಧಿ ವೃತ್ತದಲ್ಲಿ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಯಾತ್ರೆ ಆರಂಭಿಸಿದರು. ಸಾವಿರಾರು ಜನ ಯುವಕರು ಈ ಪಾದಯಾತ್ರೆಯಲ್ಲಿ ಭಾಗಿಯಾದರು. ಬಸವಕಲ್ಯಾಣ ನಗರದಿಂದ ಬಂಗ್ಲಾ, ಮುಡಬಿ ಮಾರ್ಗವಾಗಿ ಕಲಬುರಗಿಗೆ ತೆರಳಿದರು.
ರಾಷ್ಟ್ರ ಧ್ವಜ ಕೈ ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಹೆಜ್ಜೆ ಹಾಕಿದರು. ಶರಣರ ನಾಡು ಕಲಬುರಗಿಯಲ್ಲಿ ನಡೆಯುತ್ತಿರುವ ಬೃಹತ್ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿಗಳು, ಸಂಸದರು, ಶಾಸಕರು, ಸ್ವಾಮೀಜಿಗಳು ಸೇರಿ ಲಕ್ಷಾಂತರ ಜನ ಭಾಗಿಯಾಗಲಿದ್ದಾರೆ.
ಪಾದಯಾತ್ರೆ ಮಾಡಿದ ಯುವಕರ ತಂಡದಲ್ಲಿ ಅಸ್ಲಾಮ್ ಜನಾಬ್, ಮೌಲಾನ ಅಕ್ಬರಲೀ, ಖಲೀಲ್ ಅಹ್ಮದ್, ಮಿನಾಜ್ ನವಾಬ್, ಖುತ್ಬುದ್ದೀನ್, ವಸಿ ಅದೋನಿ, ಮೋಸಿನ್ ಚಾಬುಕ್ ಇದ್ದರು.