ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (Puneeth Rajkumar) ಅವರ ಜನ್ಮದಿನವನ್ನ (ಮಾ.17) ಫ್ಯಾನ್ಸ್ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಈ ದಿನ ಅಪ್ಪು (Appu) ಅಭಿಮಾನಿಗಳಿಗೆ (Fans) ವಿಶೇಷ ದಿನವಾಗಿದ್ದು, ಪುನೀತ್ ಮೇಲಿನ ಅಭಿಮಾನದಿಂದ ಅಭಿಮಾನಿಯೊಬ್ಬ ಅಪ್ಪು ಮೇಣದ ಪ್ರತಿಮೆ ಮಾಡಿಸಿದ್ದಾರೆ. ಅಪ್ಪು ಸಮಾಧಿ ಬಳಿ ಪುನೀತ್ ಕಲಾಕೃತಿಯನ್ನ ಇಡಲಾಗಿದೆ.
ಅಪ್ಪು ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಯೊಬ್ಬರು, ಪುನೀತ್ ತದ್ರೂಪಿ ಕಲಾಕೃತಿ ಕೊಟ್ಟಿರೋದು ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಕೆಂಪು ಸೋಫಾದಲ್ಲಿ ಆಸೀನರಾಗಿರುವ ಅವರ ಮೇಣದ ಪ್ರತಿಮೆ (Statue) ನೋಡಿದರೆ ಮತ್ತೊಮ್ಮೆ ಎದುರಿಗೆ ಬಂದಂತೆ ಭಾಸವಾಗುತ್ತದೆ. ಇದನ್ನೂ ಓದಿ: ಪವನ್ ಕಲ್ಯಾಣ್ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಆರ್.ಚಂದ್ರು
ಬೆಂಗಳೂರಿನ ಪೀಣ್ಯದ ಉದ್ಯಮಿ ಅದ್ವಿಕ್ ಅವರು ಅಪ್ಪು ಮೇಣದ ಕಲಾಕೃತಿಯನ್ನ ನೀಡಿದ್ದಾರೆ. ಖ್ಯಾತ ಶಿಲ್ಪ ಕಲಾವಿದರಾದ ಶ್ರೀಧರ್ ಮೂರ್ತಿ ಅವರು ಅಪ್ಪು ಕಲಾಕೃತಿಯನ್ನ ಸಿದ್ಧತೆ ಮಾಡಿದ್ದಾರೆ. 8 ತಿಂಗಳ ಶ್ರಮದಿಂದ ಕಲಾಕೃತಿ ಸಿದ್ಧತೆ ಮಾಡಲಾಗಿದೆ. ಜೀವಂತವಾಗಿ ಅಪ್ಪು ಸೋಫಾದಲ್ಲಿ ಕುಳಿತಿದ್ದಾರೇನೋ ಎನ್ನಿಸುವಷ್ಟು ನೈಜವಾಗಿದೆ. ಇನ್ನೂ ಪುನೀತ್ ಸಮಾಧಿ ಬಳಿ ಬಂದವರು ಕಲಾಕೃತಿ ನೋಡಿ ಕಣ್ತುಂಬಿಕೊಳ್ತಿದ್ದಾರೆ.