ಸಾಕಷ್ಟು ಸೀರಿಯಲ್, ಬಿಗ್ ಬಾಸ್ (Bigg Boss Hindi) ಮೂಲಕ ಮೋಡಿ ಮಾಡಿದ್ದ ಯುವ ನಟಿ ವೈಶಾಲಿ ಠಕ್ಕರ್ (Vaishali Thakkar) (ಅ.16)ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ . ವೈಯಕ್ತಿಕ ಕಾರಣಗಳಿಂದ ಯುವ ನಟಿ ವೈಶಾಲಿ ನೇಣಿಗೆ ಶರಣಾಗಿದ್ದಾರೆ. ಶವದ ಪಕ್ಕದಲ್ಲೇ ಡೆತ್ ನೋಟ್ ಕೂಡ ಸಿಕ್ಕಿದ್ದು, ಇಂದೋರ್ನ ತೇಜಾಜಿ ನಗರ(Tejaji Nagar) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
`ಬಿಗ್ ಬಾಸ್’ ಖ್ಯಾತಿಯ ವೈಶಾಲಿ ಠಕ್ಕರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿದ್ದರು. ಇತ್ತೀಚೆಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಖುಷಿ ಖುಷಿಯಾಗಿ ಇರುವಂತಹ ರೀಲ್ಸ್ ಹಂಚಿಕೊಂಡಿದ್ದರು. ಅವರು ಈಗ ಆತ್ಮಹತ್ಯೆ(Suicide) ಮಾಡಿಕೊಂಡಿದ್ದಕ್ಕೆ ಕಾರಣ ಏನು ಎಂಬ ಪ್ರಶ್ನೆ ಮೂಡಿದೆ. ಪೊಲೀಸರ ತನಿಖೆ ಬಳಿಕ ಸತ್ಯ ಹೊರಬರಬೇಕಿದೆ. ವೈಶಾಲಿ ಸಾವು ಅವರ ಕುಟುಂಬಕ್ಕೆ, ಆಪ್ತರಿಗೆ ಆಘಾತವುಂಟು ಮಾಡಿದೆ. ನಟಿಯ ಸಾವಿಗೆ ಚಿತ್ರರಂಗ(Film Industry) ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ:ನಯನತಾರಾ- ವಿಘ್ನೇಶ್ ಶಿವನ್ ಬಾಡಿಗೆ ತಾಯ್ತನದ ಕೇಸ್ಗೆ ಬಿಗ್ ಟ್ವಿಸ್ಟ್
ಹಿಂದಿ ಕಿರುತೆರೆಯಲ್ಲಿ ವೈಶಾಲಿ ಅವರು ಸಾಕಷ್ಟು ಖ್ಯಾತಿ ಗಳಿಸಿದ್ದರು. `ಸಸುರಾಲ್ ಸಿಮರ್ ಕಾ’ ಧಾರಾವಾಹಿಯಲ್ಲಿ ಅವರು ಅಂಜಲಿ ಭಾರದ್ವಾಜ್ ಎಂಬ ಪಾತ್ರ ಮಾಡಿದ್ದರು. `ಯೇ ರಿಷ್ತಾ ಕ್ಯಾ ಕೆಹಲಾತಾ ಹೈ’, ʻರಕ್ಷಾ ಬಂಧನ್ʼ ಮುಂತಾದ ಧಾರಾವಾಹಿಗಳಲ್ಲಿ ವೈಶಾಲಿ ಠಕ್ಕರ್ ನಟಿಸಿದ್ದರು. `ಬಿಗ್ ಬಾಸ್'(Bigg Boss) ಮೂಲಕ ನಟಿ ಮೋಡಿ ಮಾಡಿದ್ದರು.