ಕನ್ನಡದ ಸಾಕಷ್ಟು ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ಪೂಜಾ ರಮೆಶ್(Pooja Ramesh) ಇದೀಗ ರಾಜಕೀಯದತ್ತ(Politics) ಮುಖ ಮಾಡಿದ್ದಾರೆ. ಚಿತ್ರರಂಗಕ್ಕೆ ಗುಡ್ ಬೈ ಹೇಳಿ, ರಾಜಕೀಯ ಅಖಾಡದಲ್ಲಿ ಮಿಂಚಲು ನಟಿ ಸಜ್ಜಾಗಿದ್ದಾರೆ.
View this post on Instagram
ಸ್ಯಾಂಡಲ್ವುಡ್ನಲ್ಲಿ(Sandalwood) ಪೇಪರ್ ದೋಣಿ, ನಿರುದ್ಯೋಗಿ, ಲಹರಿ, ತಾಂಡವ, ಮಹಾಕಾಳಿ, ಸಿನಿಮಾಗಳ ಗಮನ ಸೆಳೆದ ನಟಿ ಪೂಜಾ ರಮೇಶ್ ಇದೀಗ ರಾಜಕೀಯಕ್ಕೆ ಬರುವುದಾಗಿ ಸ್ವತಃ ಹೇಳಿಕೊಂಡಿದ್ದಾರೆ. ಕರಾವಳಿ ಮೂಲದ ನಟಿ ರಾಯಚೂರಿನಲ್ಲಿ ಸ್ಪರ್ಧೆಗೆ ನಿಲ್ಲುವುದಾಗಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ:ಪ್ರೀತಿಯಿಂದ ಆಯ್ಕೆ ಮಾಡಿದ ಸೋನು ಮಾತಿನಿಂದ ಜಯಶ್ರೀಗೆ ಬೇಸರ – ಎಲ್ಲರೂ ದಂಗಾಗುವಂತೆ ಕಿರುಚಿದ್ಯಾಕೆ ಜಯಶ್ರೀ
View this post on Instagram
ತಾವು ರಾಯಚೂರಿನಿಂದ ಚುನಾವಣೆಗೆ ನಿಲ್ಲುವುದಾಗಿ ಹೇಳಿದ್ದಾರೆ. ಯಾವ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಲಿದ್ದೇನೆ ಎಂಬುದನ್ನು ಮುಂದಿನ ದಿನಗಳಲ್ಲಿ ಘೋಷಿಸುವುದಾಗಿ ಪೂಜಾ ರಮೇಶ್ ಹೇಳಿದ್ದಾರೆ. ರಾಯಚೂರಿನಿಂದ ಸ್ಪರ್ಧಿಸುತ್ತಿರುವುದಕ್ಕೆ ಕಾರಣ ತಿಳಿಸಿರುವ ನಟಿ ಪೂಜಾ, ಇಲ್ಲಿ ಕೆಲ ಸಮಯದಿಂದಲೂ ನಾನು ಸಮಾಜಮುಖಿ ಕೆಲಸವನ್ನು ಮಾಡುತ್ತಾ ಬಂದಿದ್ದೇನೆ. ಈ ಭಾಗದ ಜನರೊಟ್ಟಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದೇನೆ. ಹಾಗಾಗಿ ನಾನು ಈ ರಾಯಚೂರಿನಿಂದ ಚುನಾವಣೆಗೆ ಸ್ಪರ್ಧಿಸಲಿದ್ದೇನೆ ಎಂದು ತಿಳಿಸಿದ್ದಾರೆ.
ಸದ್ಯ ಬಣ್ಣದ ಲೋಕಕ್ಕೆ ಬ್ರೇಕ್ ಹಾಕಿ, ಚುನಾವಣೆ ಅಖಾಡದಲ್ಲಿ ಇಳಿಯಲು ಪೂಜಾ ರಮೇಶ್ ರೆಡಿಯಾಗಿದ್ದಾರೆ. ಚಂದನವನದಲ್ಲಿ ಗುರುತಿಸಿಕೊಂಡಿರುವ ಹಾಗೆ, ರಾಜಕೀಯದಲ್ಲೂ ಗೆಲ್ಲುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.