ಬಳ್ಳಾರಿ: ಚೈತ್ರಾ ಕುಂದಾಪುರ (Chaithra Kundapura) ಡೀಲ್ ಪ್ರಕರಣದ 3ನೇ ಆರೋಪಿಯಾಗಿರುವ, ಅಭಿನವ ಹಾಲಶ್ರೀ ಈವರೆಗೂ ಪತ್ತೆಯಾಗಿಲ್ಲ. ಇತ್ತ ಮಠದ ಭಕ್ತರಲ್ಲೂ ಆತಂಕ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಹಾಲಸ್ವಾಮಿ ಮಠದ (Halashri Mutt) ಕಿರಿಯ ಹಾಲಶ್ರೀಗಳು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.
ಹಿರೇಹಡಗಲಿ ಮಠಕ್ಕೆ ನೂರಾರು ವರ್ಷಗಳ ಪರಂಪರೆ ಇದೆ. ಜನಸಾಮಾನ್ಯರಿಗೆ ಇರುವ ಮಠ ಇದಾಗಿದೆ, ಜಾತಿ ವರ್ಗದ ಕಳೆ ಕಿತ್ತು ಸಾಮರಸ್ಯ ಬಿತ್ತಿದೆ. ನೂರಾರು ಧಾರ್ಮಿಕ ಕಾರ್ಯಗಳನ್ನ ಮಾಡಿಕೊಂಡು ಬಂದಿದೆ. ಸದ್ಯ ಮಾಧ್ಯಮಗಳಲ್ಲಿ ಸುದ್ದಿ ನೋಡಿ ಆಘಾತ ಆಗಿದೆ. ಆ ಪ್ರಕರಣಕ್ಕೂ ಶ್ರೀಮಠಕ್ಕೂ ಸಂಬಂಧ ಇಲ್ಲ. ಪಾರದರ್ಶಕ ತನಿಖೆ ಮಾಡಿ, ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ ಎಂದು ಮನವಿ ಮಾಡಿದ್ದಾರೆ.
ಅಭಿನವ ಹಾಲಶ್ರೀಗಳ (Abhinava Halashri) ಮೇಲಿನ ಆರೋಪಗಳಿಗೆ ಪ್ರತಿಕ್ರಿಯಿಸಿ, ಪ್ರಕರಣ ಇನ್ನೂ ತನಿಕೆ ಹಂತದಲ್ಲಿದೆ, ಭಕ್ತರು ವಿಚಲಿತರಾಗೋದು ಬೇಡ. ಸಹನೆಯಿಂದ ಎಲ್ಲ ಎದುರಿಸೋಣ. ಇದು ಪುತ್ರ ವರ್ಗ ಮಠ, ನಾಲ್ಕು ಪೂಜ್ಯರಿದ್ದಾರೆ. ಪ್ರತಿ ವರ್ಷ ಒಬ್ಬೊಬ್ಬರು ಮಠದ ಜವಾಬ್ದಾರಿ ಹೊರುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉದ್ಯಮಿಗೆ ವಂಚನೆ ಪ್ರಕರಣ – ಹಾಲಶ್ರೀ ಬಂಧನಕ್ಕೆ ಬಲೆ ಬೀಸಿದ ಸಿಸಿಬಿ
ಕೆಲವರು ನಮ್ಮ ಅಭಿಪ್ರಾಯ ಪಡೆಯದೇ ಮಠದ ವಿರುದ್ಧ ಹೇಳಿಕೆ ಕೊಟ್ಟಿದ್ದಾರೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ನಾವು ಕೂಡ ಕಾನೂನಿನ ಮೇಲೆ ನಂಬಿಕೆ ಇಟ್ಟವರು. ಅವರು ಎಲ್ಲಿ ಹೋಗುತ್ತಿದ್ದರು, ಏನು ಮಾಡುತ್ತಿದ್ದರು? ಎಂಬುದೇ ನಮಗೆ ಗೊತಿಲ್ಲ. ಆದ್ರೆ ಅವರು ಸಾಮಾಜಿಕ ಕೆಲಸ ಮಾಡುತ್ತಿದ್ದರು ಎಂಬುದು ನಮ್ಮ ನಂಬಿಕೆ ಎಂದು ಹೇಳಿದ್ದಾರೆ.
ವಂಚನೆ ಪ್ರಕರಣ ಬೇರೆ-ಬೇರೆ ತಿರುವು ಪಡೆಯುತ್ತಿದೆ. ಕಾನೂನಿನಡಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ, ಸ್ವಾಮೀಜಿಯನ್ನ ಕರೆದುಕೊಂಡು ಉಪಯೋಗ ಮಾಡಿಕೊಂಡಿದ್ದಾರೆ. ಉಪಯೋಗಿಸಿಕೊಂಡವರು ಯಾರೂ ಇಲ್ಲ, ಎಲ್ಲಿದ್ದಾರೆ ಇವರ ಜೊತೆ ಓಡಾಡಿದವರು, ಒಬ್ಬರೇ ಓಡಾಟ ಮಾಡುತ್ತಿದ್ರು, ಏನ್ ಮಾಡುತ್ತಿದ್ರೋ ಗೊತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ: ನಾನು ಬದುಕುಳಿಯಲ್ಲ.. ಮಗುವನ್ನು ಚೆನ್ನಾಗಿ ನೋಡಿಕೊ: ಪತ್ನಿಗೆ ವೀಡಿಯೋ ಕಾಲ್ ಮಾಡಿ ಹಿರಿಯ ಪೊಲೀಸ್ ಆಡಿದ ಕೊನೆ ಮಾತು
ಈ ಹಿಂದೆಯೂ ಹಲವು ಬಾರಿ ಹಾಲಶ್ರೀಗಳಿಗೆ ಕೆಲ ಕಾರ್ಯಕ್ರಮಗಳಿಗೆ ಹೋಗೋದು ಬೇಡ ಅಂತಾ ಹೇಳಿದ್ವಿ. ಸ್ವಾಮೀಜಿಗಳು ರಾಜಕೀಯವಾಗಿ ಹೋಗಬಾರದಿತ್ತು. ತಪ್ಪು ಮಾಡಿಲ್ಲ ಅಂದ್ರೆ ಹೆದರುವ ಅವಶ್ಯಕತೆಯಿಲ್ಲ. ಅವರು ನಿರ್ದೋಷಿಯಾಗಿ ಬರಬೇಕು ಎಂಬುದೊಂದೇ ಮಠದ ಭಕ್ತರ ಆಶಯ ಎಂದು ತಿಳಿಸಿದ್ದಾರೆ.
Web Stories