ಕುಡಿದ ಮತ್ತಿನಲ್ಲಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ

Public TV
2 Min Read
Yadagiri 1

ಯಾದಗಿರಿ: ಕುಡಿದ ಮತ್ತಿನಲ್ಲಿ ಸ್ನೇಹತನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ಘಟನೆ ಯಾದಗಿರಿಯ ಸೈದಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಸಾಬಯ್ಯ(30) ಮೃತನಾಗಿದ್ದಾನೆ. ಈತ ಯಾದಗಿರಿ ತಾಲೂಕಿನ ನಾಗಾಲಪುರ ಗ್ರಾಮದ ನಿವಾಸಿಯಾಗಿದ್ದನು. ಸ್ನೇಹಿತನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ರಾತ್ರಿ ವ್ಯಕ್ತಿಯ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ.

POLICE JEEP

ಪ್ರಕರಣದ ಹಿನ್ನೆಲೆ: ಕಳೆದ ನಾಲ್ಕು ವರ್ಷಗಳಿಂದ ಸಾಬಯ್ಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದಿರುವ ಡಿಪಿ ಜೈನ್ ಕಂಪನಿಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು. ಸಾಬಯ್ಯಗೆ ಕಳೆದ ಐದು ವರ್ಷಗಳ ಹಿಂದೆ ಮದುವೆ ಕೂಡ ಆಗಿದ್ದು, ಮೂವರು ಮುದ್ದಾದ ಮಕ್ಕಳಿದ್ದಾರೆ. ಮೂರನೇ ಮಗನ ತೊಟ್ಟಿಲು ಕಾರ್ಯಕ್ರಮವನ್ನ ಮುಂದಿನ ಸೋಮವಾರ ಇಟ್ಟುಕೊಂಡಿದ್ದ. ಇನ್ನು ಸಾಬಯ್ಯ ಮತ್ತು ಸ್ನೇಹಿತ ಜನ್ನಪ್ಪ ಇಬ್ಬರು ಸೇರಿ ನಿನ್ನೆ ಮದ್ಯಹ್ನದಿಂದಲೇ ಎಣ್ಣೇ ಪಾರ್ಟಿ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಪೆಟ್ರೋಲ್ 100.63, ಡೀಸೆಲ್ 85.03ರೂ. – ಸರ್ಕಾರದಿಂದ ಅಧಿಕೃತ ಅಧಿಸೂಚನೆ

Yadagiri 1 1

ನಿನ್ನೆ ಸಾಬಯ್ಯ ಜನ್ನಪ್ಪನ ಕರೆದುಕೊಂಡು ತನ್ನ ಸಂಬಂಧಿಕರ ಊರುಗಳಿಗೆ ಸಹ ಹೋಗಿ ಬಂದಿದ್ದಾನೆ. ಇದಾದ ಬಳಿ ನಿನ್ನೆ ಸಂಜೆ ಸೈದಾಪುರ ಪಟ್ಟಣದಲ್ಲಿ ಎಣ್ಣೆ ಖರೀದಿ ಮಾಡಿಕೊಂಡು ಹೋಗಿ ಸೈದಾಪುರದಿಂದ ಸ್ವಲ್ಪ ದೂರ ಹೋಗಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಹತ್ತಿ ಜಮೀನಿನಲ್ಲಿ ಇಬ್ಬರು ಸೇರಿ ಪಾರ್ಟಿ ಮಾಡಿದ್ದಾರೆ. ಪಾರ್ಟಿ ಮಾಡುವ ಇಬ್ಬರ ಮದ್ಯ ಜಗಳ ಕೂಡ ಆಗಿದೆ ಅಂತ ಹೇಳಲಾಗುತ್ತಿದೆ. ಜನ್ನಪ್ಪ ಮದ್ಯದ ನಶೆಯಲ್ಲಿ ತನ್ನ ಸ್ನೇಹಿತ ಸಾಬಯ್ಯಯನ್ನ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ:  ಪೆಟ್ರೋಲ್ ಬೆಲೆ ಇಳಿಸಿದ್ದು ಭಯದಿಂದ: ಪ್ರಿಯಾಂಕಾ ಗಾಂಧಿ

police web

ಪಾರ್ಟಿ ಮಾಡುವಾಗ ಪದೇ ಪದೇ ನಾನಾ ಎಣ್ಣೆ ಕೊಡಿಸಬೇಕಾ ನಿಂಗೆ ಅಂತ ಸಾಬಯ್ಯ ಜಗಳ ಮಾಡಿದ್ದಾನಂತೆ. ಆದರೆ ಇಬ್ಬರಿಗೂ ನಶೆಯಾಗಿದ್ದ ಅಲ್ಲೆ ರಾತ್ರಿ ವೇಳೆ ಮಲಗಿದ್ದಾರೆ. ಆದರೆ ಜನ್ನಪ್ಪನಿಗೆ ಎಚ್ಚರ ಆದ ಮೇಲೆ ಮದ್ಯದ ನಶೆಯಲ್ಲಿ ಗುಂಡು ಕಲ್ಲು ಎತ್ತಿ ಸಾಬಯ್ಯ ತಲೆ ಮೇಲೆ ಮೂರು ಬಾರಿ ಹಾಕಿದ್ದಾನೆ ಅಂತ ಹೇಳಲಾಗುತ್ತಿದೆ. ಆದರೆ ಸಾಬಯ್ಯ ಸಂಬಂಧಿಕರ ಪ್ರಕಾರ ಯಾರ ಜೊತೆಗೂ ಜಗಳ ಮಾಡಿಕೊಳ್ಳದ ವ್ಯಕ್ತಿ ಅವನಿಗೆ ಯಾರು ಕೊಲೆ ಮಾಡಿದ್ದಾರೆ ಎಲ್ಲರನ್ನ ಬಂಧಿಸಬೇಕು. ಒಬ್ಬನೇ ಸಾಬಯ್ಯನನ್ನ ಕೊಲೆ ಮಾಡಲು ಸಾಧ್ಯವಿಲ್ಲ ಹೀಗಾಗಿ ಈ ಕೊಲೆ ಹಿಂದೆ ನಾಲ್ಕೈದು ಮಂದಿಯ ಕೈವಾಡವಿದೆ ಅಂತ ಆರೋಪಿಸುತ್ತಿದ್ದಾರೆ. ಈ ಬಗ್ಗೆ ಸೈದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *