ಮಂಗಳಮುಖಿಯರಿಗೆ ಲಸಿಕೆಯೊಂದಿಗೆ ದಿನಸಿ ಕಿಟ್ ವಿತರಣೆ

Public TV
0 Min Read
food kit 1

ಬೆಂಗಳೂರು: ಮಂಗಳಮುಖಿಯರಿಗೆ ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ನೇತೃತ್ವದಲ್ಲಿ ಉಚಿತ ದಿನಸಿ ಕಿಟ್ ವಿತರಣೆ ಮಾಡಲಾಯ್ತು. ಇದೇ ವೇಳೆ ಹಲವು ಮಂಗಳಮುಖಿಯರಿಗೆ ಕೋವಿಡ್-19 ಲಸಿಕೆ ಸಹ ಹಾಕಿಸಲಾಯಿತು.

food kit 3 medium
ಬೆಳಗ್ಗೆ 9ಗಂಟೆಗೆ ನಗರದ ಟೌನ್ ಹಾಲ್ ಮುಂದೆ ಸುಮಾರು 1 ಸಾವಿರ ಮಂಗಳಮುಖಿಯರಿಗೆ ರೇಷನ್ ಕಿಟ್ ವಿತರಿಸುದರೊಂದಿಗೆ, ಕೆಲವರಿಗೆ ಕೋವಿಡ್ ಲಸಿಕೆಯನ್ನು ಪೊಲೀಸ್ ಸಿಬ್ಬಂದಿ ವರ್ಗದವರಿಂದ ಉಚಿತವಾಗಿ ಹಾಕಿಸಲಾಯಿತು. ಇದನ್ನೂ ಓದಿ: ಮಂಗಳಮುಖಿಯರಿಗೆ ಕಿಚ್ಚನ ನೆರವು

food kit 4 medium

ಶಾಸಕ ಉದಯ್ ಗರುಡಾಚಾರ್, ಐಪಿಎಸ್, ಟ್ರಾಫಿಕ್ ಜಾಯಿಂಟ್ ಕಮಿಷನರ್ ಡಾ. ರವಿಕಾಂತೆಗೌಡ, ಎಸಿಪಿಗಳಾದ ನಜ್ಮಾ ಫಾರೂಕಿ, ರಮೇಶಬಾಬು ಹಾಗೂ ಇತರೆ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *