Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Corona

ವರನಿಗೆ ಕೊರೊನಾ ಸೋಂಕು- ಆಸ್ಪತ್ರೆ ವಾರ್ಡ್‍ನಲ್ಲೇ ವಿವಾಹವಾದ ಜೋಡಿ

Public TV
Last updated: April 25, 2021 10:34 pm
Public TV
Share
3 Min Read
corona marraige
SHARE

– ರಂಗು ರಂಗಿನ ಸೀರೆ, ಆಭರಣಗಳ ಬದಲು ಪಿಪಿಇ ಕಿಟ್ ಧರಿಸಿದ ವಧು
– ಸೋಂಕಿತರು, ಆಸ್ಪತ್ರೆ ಸಿಬ್ಬಂದಿಗೆ ವಿವಾಹ ಭೋಜನ

ತಿರುವನಂತಪುರಂ: ದೇಶಾದ್ಯಂತ ಕೊರೊನಾ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಇದರ ನಡುವೆಯೇ ಹಲವರು ಸರಳವಾಗಿ ವಿವಾಹವಾಗುತ್ತಿದ್ದಾರೆ. ಆದರೆ ಕೇರಳದಲ್ಲಿ ಜೋಡಿಯೊಂದು ಕೊರೊನಾ ವಾರ್ಡ್ ನಲ್ಲೇ ಮದುವೆಯಾಗುವ ಮೂಲಕ ಗಮನಸೆಳೆದಿದೆ.

ಕೇರಳದ ಆಲಪ್ಪುಳ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ವಿಭಿನ್ನ ವಿವಾಹಕ್ಕೆ ಸಾಕ್ಷಿಯಾಗಿದ್ದು, ಜೋಡಿಯೊಂದು ಕೊರೊನಾ ಸೋಂಕಿತರು ಹಾಗೂ ಆಸ್ಪತ್ರೆ ಸಿಬ್ಬಂದಿ ಮಧ್ಯೆ ಕೊರೊನಾ ವಾರ್ಡ್‍ನಲ್ಲೇ ವಿವಾಹವಾಗಿದೆ. ವಧು ವಿವಾಹದ ಸಂಭ್ರದಲ್ಲಿ ರಂಗು ರಂಗಿನ ಸೀರೆ, ಒಡವೆ ಸೇರಿದಂತೆ ವಿವಿಧ ರೀತಿಯ ಅಲಂಕಾರದ ಬದಲು ಪಿಪಿಇ ಕಿಟ್ ಧರಿಸಿ ವಿವಾಹ ಜೀವನಕ್ಕೆ ಕಾಲಿಸಿದ್ದಾರೆ.

corona marraige 2

ಶರತ್ ಮೋನ್ ಎಸ್ ಹಾಗೂ ಅಭಿರಾಮಿ ಅವರ ವಿವಾಹ ಏಪ್ರಿಲ್ 25ಕ್ಕೆ ಫಿಕ್ಸ್ ಆಗಿತ್ತು. ಎರಡೂ ಕಡೆಯ ಕುಟುಂಬಸ್ಥರು ವಿವಾಹದ ಸಿದ್ಧತೆಯಲ್ಲಿ ಫುಲ್ ಬ್ಯುಸಿಯಾಗಿದ್ದರು. ಈ ಸಂದರ್ಭದಲ್ಲಿ ಆಲಪ್ಪುಳ ಜಿಲ್ಲೆಯ ಓಣಂಪಲ್ಲಿಯ ವರ ಶರತ್ ಹಾಗೂ ಅವರ ತಾಯಿ ಜಿಜಿ ಶಶಿಧರನ್ ಅವರಿಗೆ ಕೊರೊನಾ ಸೋಂಕು ತಗುಲಿತು. ಆದ್ದರಿಂದ ಶರತ್ ಅವರೊಂದಿಗೆ ತಾಯಿ ಸಹ ಆಸ್ಪತ್ರೆಗೆ ದಾಖಲಾದರು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ನಿಶ್ಚಯವಾದ ದಿನಾಂಕದಂದೇ ವಿವಾಹವಾಗಲು ಜೋಡಿ ನಿರ್ಧರಿಸಿದ್ದು, ಏಪ್ರಿಲ್ 25ರಂದು ಎಲ್ಲ ಕೊರೊನಾ ನಿಯಮಗಳನ್ನು ಪಾಲಿಸುವ ಮೂಲಕವೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ವಧು ಅಭಿರಾಮಿ ಅವರು ಆಲಪ್ಪುಳದ ವಡಕ್ಕನಾರ್ಯಡ್ ನವರಾಗಿದ್ದು, ವಿವಾಹವಾಗಲು ರಂಗು ರಂಗಿನ ಸೀರೆ, ಒಡವೆಯ ಬದಲು ಕೇವಲ ಒಂದು ಜೊತೆ ಲಿವಿಯೊಲೆ ಮಾತ್ರ ಹಾಕಿಕೊಂಡು, ಪಿಪಿಇ ಕಿಟ್ ಧರಿಸಿ ಫುಲ್ ಪ್ಯಾಕ್ ಆಗಿ ಆಸ್ಪತ್ರೆಗೆ ತೆರಳಿದ್ದು, ವರ ಶರತ್ ಸಹ ಒಂದು ನೀಲಿ ಅಂಗಿ ಹಾಗೂ ಬಿಳಿ ಲುಂಗಿ ಮೇಲೆಯೇ ವಿವಾಹವಾಗಿದ್ದಾರೆ. ಶರತ್ ಅವರ ತಾಯಿಯ ಸಮ್ಮುಖದಲ್ಲಿ ಹಾರ ಬದಲಿಸಿಕೊಂಡು ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ.

corona marraige 3

ಶರತ್ ಕತಾರ್‍ನಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ವರ್ಷ ಸಹ ಅವರು ಕತಾರ್‍ನಿಂದ ಸಮಯಕ್ಕೆ ಸರಿಯಾಗಿ ಮರಳದ ಕಾರಣ ವಿವಾಹವನ್ನು ಮುಂದೂಡಲಾಗಿತ್ತು. ಹೀಗಾಗಿ ಎರಡನೇ ಬಾರಿಯೂ ವಿವಾಹವನ್ನು ಮುಂದೂಡುವುದು ಬೇಡ ಎಂದು ಕುಟುಂಬದವರು ನಿರ್ಧರಿಸಿ ವರನಿಗೆ ಕೊರೊನಾ ಸೋಂಕು ತಗಲಿದರೂ ಆಸ್ಪತ್ರೆಯಲ್ಲೇ ಮದುವೆ ಮಾಡಿಸಿದ್ದಾರೆ. ಹಿಂದೆಯೇ ಗುರುತಿಸಿದಂತೆ ಭಾನುವಾರ ಒಳ್ಳೆಯ ಮುಹೂರ್ತಕ್ಕೆ ತಾಳಿ ಕಟ್ಟಿಸಿದ್ದಾರೆ. ಮತ್ತೆ ಮುಂದೂಡಿದರೆ ತಡವಾಗುತ್ತದೆ ಎಂಬ ಆತಂಕದಿಂದ ಇದೇ ಮುಹೂರ್ತದಲ್ಲಿ ವಿವಾಹ ಮಾಡಲು ನಿರ್ಧರಿಸಿದೆವು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಶರತ್ ಅವರು ಮಾರ್ಚ್ 22ರಂದು ಕತಾರ್‍ನಿಂದ ಕೇರಳಕ್ಕೆ ಹಿಂದಿರುಗಿದ್ದು, 10 ದಿನಗಳ ಹೋಮ್ ಕ್ವಾರಂಟೈನ್ ಬಳಿಕ ಸಹ ಅವರ ವರದಿ ನೆಗೆಟಿವ್ ಬಂದಿತ್ತು. ಬಳಿಕ ಏಪ್ರಿಲ್ 21ರಂದು ವಿವಾಹಕ್ಕಾಗಿ ಎಲ್ಲ ತಯಾರಿ ಮಾಡಿಕೊಂಡ ಬಳಿಕ ಶರತ್ ಹಾಗೂ ಅವರ ತಾಯಿ ಜಿಜಿಯವರಿಗೆ ಉಸಿರಾಟದ ಸಮಸ್ಯೆ ಕಾಡಿದೆ. ಬಳಿಕ ಟೆಸ್ಟ್ ಮಾಡಿಸಿದಾಗ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಆಲಪ್ಪುಳ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆಗೆ ದಾಖಲಿಸಲಾಗಿದೆ. ವರದಿಗಳ ಪ್ರಕಾರ ಶರತ್ ಅವರಿಗೆ ಬೇರೆ ಯಾವುದೇ ತೊಂದರೆ ಇಲ್ಲ, ಗುಣಮುಖರಾದ ಬಳಿಕ ಒಂದು ವಾರದ ನಂತರ ಡಿಸ್ಚಾರ್ಜ್ ಆಗಲಿದ್ದಾರೆ ಎನ್ನಲಾಗಿದೆ.

corona marraige 5

ವರ, ವಧುವಿನ ಜೊತೆಗೆ ಜಿಜಿ ಹಾಗೂ ಅಭಿರಾಮಿ ಅವರ ಚಿಕ್ಕಪ್ಪ ಆಸ್ಪತ್ರೆ ವಾರ್ಡ್‍ನಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶರತ್ ಅವರ ತಂದೆ ಶಶಿಧರನ್ ಹಾಗೂ ಇಬ್ಬರು ಸಹೋದರಿಯರು ಹೋಮ್ ಕ್ವಾರಂಟೈನ್‍ನಲ್ಲಿದ್ದಾರೆ.

ಈ ಕುರಿತು ಕುಟುಂಬಸ್ಥರು ಪ್ರತಿಕ್ರಿಯಿಸಿದ್ದು, ನಿಗದಿತ ದಿನಾಂಕದಂದು ವಿವಾಹ ನಡೆಸಲು ಎನ್‍ಸಿಪಿ ನಾಯಕ ಥಾಮಸ್ ಕೆ, ಆಲಪ್ಪುಳ ಡಿಸಿ ಎ ಎಲೆಕ್ಸಾಂಡರ್, ಎಂಸಿಎಚ್ ಸುಪರಿಂಟೆಂಡೆಂಟ್ ಹಾಗೂ ಇತರರು ಸಹಾಯ ಮಾಡಿದ್ದಾರೆ ಎಂದು ತಿಳಿಸಿದರು.

corona marraige 4

ಕುಟುಂಬಸ್ಥರು ವಾರ್ಡ್‍ನಲ್ಲಿನ ಎಲ್ಲ ಕೊರೊನಾ ಸೋಂಕಿತರು ಹಾಗೂ ಆಸ್ಪತ್ರೆ ಸಿಬ್ಬಂದಿಗೆ ವಿವಾಹದ ಭೋಜನವನ್ನು ಸಹ ಹಾಕಿಸಿದ್ದಾರೆ. ವಿವಾಹದ ಬಳಿಕ ವಧು ಅಭಿರಾಮಿ ಮನೆಗೆ ಹಿಂದಿರುಗಿದ್ದು, ಕುಟುಂಬದ ಯಾವುದೇ ಸದಸ್ಯರು ವಿವಾಹದಲ್ಲಿ ಭಾಗವಹಿಸದ ಕಾರಣ ಸ್ವಲ್ಪ ದುಃಖವಾಯಿತು, ಆದರೆ ಅದಕ್ಕಿಂತ ಹೆಚ್ಚಾಗಿ ಖುಷಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.

TAGGED:Corona VirusCorona WardkeralaPublic TVweddingಕೇರಳಕೊರೊನಾ ವಾರ್ಡ್ಕೊರೊನಾ ವೈರಸ್ಪಬ್ಲಿಕ್ ಟಿವಿವಿವಾಹ
Share This Article
Facebook Whatsapp Whatsapp Telegram

You Might Also Like

Yash Dayal 2
Cricket

ಆರ್‌ಸಿಬಿ ಸ್ಟಾರ್‌ ವೇಗಿ ಯಶ್‌ ದಯಾಳ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ – FIR ದಾಖಲು

Public TV
By Public TV
1 hour ago
mandya ranganatittu
Districts

ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ರದ್ದು

Public TV
By Public TV
1 hour ago
Tiger 2
Chamarajanagar

5 ಹುಲಿಕೊಂದ ಹಂತಕರು ಲಾಕ್ – ಕೊನೆಗೂ ಹೊರಬಂತು ರಹಸ್ಯ, 3 ಆರೋಪಿಗಳಿಗೆ ನ್ಯಾಯಾಂಗ ಬಂಧನ

Public TV
By Public TV
1 hour ago
Car jeep collide on Datta Peetha road traffic jam for kilometers 2
Chikkamagaluru

ದತ್ತಪೀಠ ಮಾರ್ಗದಲ್ಲಿ ಕಾರು, ಜೀಪ್ ಡಿಕ್ಕಿ – ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್!

Public TV
By Public TV
1 hour ago
R.ASHOK
Bengaluru City

ಈ ಬಾರಿ ದಸರಾ ಸಿದ್ದರಾಮಯ್ಯ ಅಲ್ಲ ನೂತನ ಸಿಎಂ ಮಾಡ್ತಾರೆ: ಆರ್. ಅಶೋಕ್ ಭವಿಷ್ಯ

Public TV
By Public TV
2 hours ago
KRS
Belgaum

ರಾಜ್ಯದಲ್ಲಿ ಆರಿದ್ರಾ ಮಳೆಯಬ್ಬರ – 93 ವರ್ಷಗಳ ಬಳಿಕ ಜೂನ್‌ನಲ್ಲೇ KRS 123 ಅಡಿ ಭರ್ತಿ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?