ರಾಜ್ಯದಲ್ಲಿ ಇಂದು ಎರಡೂವರೆ ಸಾವಿರ ದಾಟಿದ ಕೊರೊನಾ – 10 ಮಂದಿ ಬಲಿ

Public TV
2 Min Read
CORONA VIRUS

– ಬೆಂಗ್ಳೂರು ಬಳಿಕ ಉಡುಪಿಯಲ್ಲಿ ಅತ್ಯಧಿಕ ಪ್ರಕರಣ ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೊನಾ ಪ್ರಕರಣಗಳ ಸಂಖ್ಯೆ ಬರೋಬ್ಬರಿ ಎರಡೂವರೆ ಸಾವಿರ ದಾಟಿದ್ದು, ಇಂದು ಒಂದೇ ದಿನ 10 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.

ರಾಜ್ಯದಲ್ಲಿ ಇಂದು ಬರೋಬ್ಬರಿ 2,523 ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲೇ ಪ್ರಕರಣಗಳ ಸಂಖ್ಯೆ ಒಂದೂವರೆ ಸಾವಿರ ದಾಟಿದೆ. ಸಿಲಿಕಾನ್ ಸಿಟಿಯಲ್ಲಿ 6 ಜನ ಕೊರೊನಾದಿಂದ ಮೃತಪಟ್ಟಿದ್ದಾರೆ. ಒಟ್ಟು 150 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬೆಂಗಳೂರು ನಗರ, ಕಲಬುರಗಿ, ಬೀದರ್, ಮಂಡ್ಯದಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಖ್ಯೆ ಏರಿಕೆಯಾಗಿದೆ.

CORONA 3 2

ರಾಜ್ಯದಲ್ಲಿ 18,207 ಸಕ್ರಿಯ ಪ್ರಕರಣಗಳಿದ್ದು, 150 ಮಂದಿ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 9,78,478ಕ್ಕೆ ಏರಿಕೆಯಾಗಿದೆ. ಇಂದು 1192 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.2.32ರಷ್ಟು ಮತ್ತು ಮರಣ ಪ್ರಮಾಣ ಶೇ.0.39ರಷ್ಟಿದೆ. ಹಾವೇರಿಯಲ್ಲಿ 1 ಪ್ರಕರಣವಷ್ಟೇ ಬೆಳಕಿಗೆ ಬಂದಿದೆ. ಬೆಂಗಳೂರು ನಗರ ಬಳಿಕ ಉಡುಪಿಯಲ್ಲಿ ಅತ್ಯಧಿಕ ಕೊರೊನಾ ಪ್ರಕರಣಗಳು ದಾಖಲಾಗಿವೆ.

CORONA 9

ಉಡುಪಿ ಜಿಲ್ಲೆಯಲ್ಲಿ ಇಂದು 145 ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಎಂಐಟಿ ಕ್ಯಾಂಪಸ್ ನಲ್ಲಿ 111 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಈ ಮೂಲಕ ಎಂಐಟಿ ಕಾಲೇಜು ಪಾಸಿಟಿವ್ ಪ್ರಕರಣಗಳ ಸಂಖ್ಯೆ 522ಕ್ಕೆ ಏರಿಕೆಯಾಗಿದೆ. ಸದ್ಯ ಜಿಲ್ಲೆಯಲ್ಲಿ 613 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವ್ ಸಂಖ್ಯೆ 24580ಕ್ಕೆ ಏರಿಕೆಯಾಗಿದೆ ಎಂದು ಡಿಎಚ್ ಒ ಡಾ. ಸುಧೀರ್ ಚಂದ್ರ ಸೂಡಾ ಮಾಹಿತಿ ನೀಡಿದ್ದಾರೆ.

CORONA 2 3

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 7, ಬಳ್ಳಾರಿ 15, ಬೆಳಗಾವಿ 29, ಬೆಂಗಳೂರು ಗ್ರಾಮಾಂತರ 37, ಬೆಂಗಳೂರು ನಗರ 1,623, ಬೀದರ್ 78, ಚಾಮರಾಜನಗರ 4, ಚಿಕ್ಕಬಳ್ಳಾಪುರ 14, ಚಿಕ್ಕಮಗಳೂರು 12, ಚಿತ್ರದುರ್ಗ 5, ದಕ್ಷಿಣ ಕನ್ನಡ 72, ದಾವಣಗೆರೆ 8, ಧಾರವಾಡ 24, ಗದಗ 9, ಹಾಸನ 48, ಹಾವೇರಿ 1, ಕಲಬುರಗಿ 100, ಕೊಡಗು 11, ಕೋಲಾರ 15, ಕೊಪ್ಪಳ 4, ಮಂಡ್ಯ 43, ಮೈಸೂರು 89, ರಾಯಚೂರು 12, ರಾಮನಗರ 10, ಶಿವಮೊಗ್ಗ 22, ತುಮಕೂರು 29, ಉಡುಪಿ 145, ಉತ್ತರ ಕನ್ನಡ 13, ವಿಜಯಪುರ 35 ಮತ್ತು ಯಾದಗಿರಿಯಲ್ಲಿ 9 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Share This Article
Leave a Comment

Leave a Reply

Your email address will not be published. Required fields are marked *