ಧಾರವಾಡ: ಕೊರೊನಾ ಹಿನ್ನೆಲೆಯಲ್ಲಿ ನವರಾತ್ರಿ ಹಬ್ಬದ ಸಡಗರಕ್ಕೆ ಸ್ವಲ್ಪ ಹಿನ್ನೆಡೆಯಾಗಿದ್ದರೂ ಕೂಡ ದೇವತೆಗಳಿಗೆ ಅಲಂಕಾರ ಪೂಜೆಯ ಸಂಭ್ರಮದಲ್ಲಿ ಯಾವುದೇ ಕಡಿಮೆಯಾಗಿಲ್ಲ.
ಧಾರವಾಡ ನಗರದ ಹಳೆ ಕೋಟೆಯಲ್ಲಿರುವ ಪುರಾಣ ಪ್ರಸಿದ್ಧ ದುರ್ಗಾದೇವಿ ದೇವಸ್ಥಾನದಲ್ಲಿ ನಾಲ್ಕನೇ ದಿನದ ದಸರಾ ಪೂಜೆಯ ಪ್ರಯುಕ್ತ ಹತ್ತು ಸಾವಿರಕ್ಕೂ ಹೆಚ್ಚು ಬಣ್ಣ ಬಣ್ಣದ ಬಳೆಗಳಿಂದ ದೇವಿಗೆ ಅಲಂಕಾರ ಮಾಡಲಾಗಿದೆ. ಎಲ್ಲ ಬಣ್ಣದ ಗಾಜಿನ ಬಳೆಗಳನ್ನೇ ಬಳಸಿ ದೇವಿಯನ್ನು ಅಲಂಕರಿಸಲಾಗಿದೆ.
ಮುಖ್ಯವಾಗಿ ಕೊರೊನಾ ಹಿನ್ನೆಲೆ ಯಾವುದೇ ಹಬ್ಬ, ಕಾರ್ಯಕ್ರಮಗಳು ನಡೆಯದ ಕಾರಣ ಬಳೆ ವ್ಯಾಪಾರಿಗಳು ಸಂಕಷ್ಟದಲ್ಲಿದ್ದರು. ಆದರೆ ದೇವಿಗೆ ಸಾವಿರಾರೂ ಬಳೆಗಳನ್ನು ಬಳಸಿ ಅಲಂಕಾರ ಮಾಡುವ ಮೂಲಕ ದೇವಸ್ಥಾನ ಮಂಡಳಿಯವರು ಸಂಕಷ್ಟದಲ್ಲಿರುವ ಬಳೆಗಾರರ ಕೈ ಹಿಡಿಯುವ ಕಾರ್ಯ ಮಾಡಿದ್ದಾರೆ.