ಬೆಂಗಳೂರು: ರಾಜ್ಯದಲ್ಲಿಂದು 6,997 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 38 ಸೋಂಕಿತರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5,40,847ಕ್ಕೆ ಏರಿಕೆಯಾಗಿದೆ.
ಇಂದು ಕೊರೊನಾದಿಂದ ಗುಣಮುಖರಾಗಿ 5,460 ಜನರು ಡಿಸ್ಚಾರ್ಜ್ ಆಗಿದ್ದು, 816 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಇದುವರೆಗೂ ಮಹಾಮಾರಿ 8,266 ಜನರನ್ನು ಬಲಿ ಪಡೆದುಕೊಂಡಿದೆ. ಇಂದು 56,398 ಜನರು ಕೊರೊನಾ ಪರೀಕ್ಷೆಗೆ ಒಳಗಾಗಿದ್ದಾರೆ. ಇದುವರೆಗೂ 43,94,840 ಜನರು ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 50, ಬಳ್ಳಾರಿ 192, ಬೆಳಗಾವಿ 191, ಬೆಂಗಳೂರು ಗ್ರಾಮಾಂತರ 128, ಬೆಂಗಳೂರು ನಗರ 3547, ಬೀದರ್ 63, ಚಾಮರಾಜನಗರ 32, ಚಿಕ್ಕಬಳ್ಳಾಪುರ 84, ಚಿಕ್ಕಮಗಳೂರು 252, ಚಿತ್ರದುರ್ಗ 89, ದಕ್ಷಿಣ ಕನ್ನಡ 186, ದಾವಣಗೆರೆ 138, ಧಾರವಾಡ 120, ಗದಗ 59, ಹಾಸನ 315, ಹಾವೇರಿ 32, ಕಲಬುರಗಿ 100, ಕೊಡಗು 33, ಕೋಲಾರ 44, ಕೊಪ್ಪಳ 88, ಮಂಡ್ಯ 203, ಮೈಸೂರು 341, ರಾಯಚೂರು 37, ರಾಮನಗರ 57, ಶಿವಮೊಗ್ಗ 187, ತುಮಕೂರು 90, ಉಡುಪಿ 102, ಉತ್ತರ ಕನ್ನಡ 115, ವಿಜಯಪುರ 82 ಮತ್ತು ಯಾದಗಿರಿಯಲ್ಲಿ 40 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.
ಒಟ್ಟು ರಾಜ್ಯದಲ್ಲಿ 816 ಜನ ಕೊರೊನಾ ಸೋಂಕಿತರು ಐಸಿಯುನಲ್ಲಿದ್ದು, ಅದರಲ್ಲಿ ಬೆಂಗಳೂರು ನಗರದಲ್ಲಿ 259, ಬಳ್ಳಾರಿಯಲ್ಲಿ 74, ಧಾರವಾಡದಲ್ಲಿ 93 ಮತ್ತು ಹಾಸನದಲ್ಲಿ 62 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೊತೆಗೆ ಇಂದು ಕೊರೊನಾ ಸೋಂಕಿನಿಂದ ಕೇಂದ್ರ ಸಚಿವ ಸುರೇಶ್ ಅಂಗಡಿ ಸಾವನ್ನಪ್ಪಿದ್ದಾರೆ.