ಬೆಂಗಳೂರು: ಕೊರೊನಾ ಕೇಸ್ ಕಡಿಮೆ ಇದ್ದಾಗ ಲಾಕ್ ಡೌನ್. ಕೊರೊನಾ ಜಾಸ್ತಿ ಆದ ಬಳಿಕ ಲಾಕ್ ಡೌನ್ ಫ್ರೀ ಬಿಟ್ಟಿದ್ದಾರೆ. ದೇಶದ ಎಲ್ಲ ವರ್ಗದ ಜನರಿಗೆ ತೊಂದರೆ ಮಾಡುವ ಕೆಲಸ ಕೇಂದ್ರ ಮಾಡಿದೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ಹೊರಹಾಕಿದ್ದಾರೆ.
ನಗರದಲ್ಲಿಮದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಎಐಸಿಸಿಯಿಂದ ಕೆಲ ವಿಚಾರಗಳ ಪ್ರಸ್ತಾಪ ಮಾಡಲು ಆದೇಶ ಇದೆ. ಕೋವಿಡ್ 19 ಹಿನ್ನೆಲೆ ಮಾಧ್ಯಮಗಳ ಮುಂದೆ ಮಾತನಾಡುವುದು ಬೇಡ ಅಂದುಕೊಂಡಿದ್ದೆ. ಆದರೆ ಹೈಕಮಾಂಡ್ ಸೂಚನೆ ಮೇರೆಗೆ ಇಂದು ನಿಮ್ಮ ದರ್ಶನ ಮಾಡಿದ್ದೇನೆ. ಕೋವಿಡ್ 19 ನಿಂದ ಇಡೀ ದೇಶ ಅಲ್ಲೋಲ ಕಲ್ಲೋಲವಾಗಿದೆ. ಕೂಲಿ ಕಾರ್ಮಿಕರು ತಮ್ಮ ಸಮುದಾಯ ವೃತ್ತಿ ಆದರಿಸಿದವರು ಬಹಳ ತೊಂದರೆಯಲ್ಲಿ ಇದ್ದಾರೆ. ಸಣ್ಣ ಕೈಗಾರಿಕೆಗಳು ಮತ್ತು ಅಸಂಘಟಿತ ಕಾರ್ಮಿಕರಿಗೆ ಭಾರೀ ತೊಂದರೆ ಆಗಿದೆ ಎಂದರು.
ವಲಸಿಗ ಕಾರ್ಮಿಕರು ದೇಶದಲ್ಲಿ 11 ಕೋಟಿ ಜನ ಸಮಸ್ಯೆಯಲ್ಲಿ ಸಿಕ್ಕಿದ್ದಾರೆ. ಅವರ ಜೀವನ ಅಸ್ತವ್ಯಸ್ತ ಆಗಿದೆ. ರೈತರು ಮತ್ತು ರೈತ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಹಕನ ಬಳಿ ಹಣ ಇದ್ದರೆ ಖರೀದಿ ಮಾಡುವ ಶಕ್ತಿ ಬರುತ್ತೆ. ಮಾರುಕಟ್ಟೆಯಲ್ಲಿ ಬೇಡಿಕೆ ಬರುತ್ತೆ. ಆದರೆ ಜನರ ಬಳಿ ಹಣ ಇಲ್ಲದೇ ಬೇಡಿಕೆ ಕುಸಿತ ಕಂಡಿದೆ ಎಂದು ತಿಳಿಸಿದರು.
13 ಸಾವಿರ ಪ್ಯಾಸೆಂಜರ್ ರೈಲು ದೇಶದಲ್ಲಿ ಓಡಾಟ ಮಾಡ್ತಿದ್ದವು. 2.30 ಕೋಟಿ ಜನ ದಿನನಿತ್ಯ ಓಡಾಟ ಮಾಡ್ತಿದ್ರು. 5-6 ಕೋಟಿ ಜನ ವಲಸಿಗ ಕಾರ್ಮಿಕರು ಇದ್ದರು. ಪ್ಯಾಸೆಂಜರ್ ರೈಲಿನಲ್ಲಿ ನಾಲ್ಕು ದಿನದಲ್ಲಿ ಕಳುಹಿಸಿ ಕೊಡಬಹುದಿತ್ತು. ಲಾಕ್ ಡೌನ್ ಗೂ ಮೊದಲು ಅವರನ್ನ ಅವರ ಸ್ಥಳಗಳಿಗೆ ತಲುಪಿಸಬಹುದಿತ್ತು. ಹಾಗೇ ಮಾಡಿದರೆ ಬೀದಿಯಲ್ಲಿ ಸಾವು, ರಸ್ತೆಯಲ್ಲಿ ಹೆರಿಗೆ ಆಗುವುದು ಕಾಣುತ್ತಿರಲಿಲ್ಲ. ರೈಲ್ವೆ ಹಳಿಗಳ ಮೇಲೆ ಮಲಗಿ ಸಾವು ಆಗುತ್ತಿರಲಿಲ್ಲ. ಅನ್ನ ಮತ್ತು ನೀರಿಲ್ಲದೇ ಸಾಯುತ್ತಿರಲಿಲ್ಲ ಎಂದು ಕೇಂದ್ರ ಸರ್ಕಾರದ ನಡೆ ವಿರುದ್ಧ ಖರ್ಗೆ ಅಸಮಾಧಾನ ಹೊರಹಾಕಿದರು.
ಮಹಾರಾಷ್ಟ್ರದ್ದು ಮುಖ್ಯವಾಗಿ ಬಾಂಬೆ ನಗರ ವ್ಯವಸ್ಥೆ ಬೇರೆ ಇದೆ. ದೇಶದ ಎಲ್ಲಾ ಜನ ಬರುತ್ತಾರೆ. ಕರ್ನಾಟಕ ಜನ ಅಲ್ಲಿ ಶಾಸಕರಾಗಿದ್ದರು. ಅಲ್ಲಿ ಅಧಿಕ ಜನ ಇದ್ದಾರೆ. ಅಲ್ಲಿ ಶಿಫ್ಟ್ ನಲ್ಲಿ ಕೆಲಸ ಮಾಡುವವರು ಹೆಚ್ಚು. ಹಾಗೆ ನಾವು ಅದಕ್ಕೆ 150 ಟ್ರೈನ್ ಕೇಳಿದ್ವಿ. ಬರೀ 50 ಟ್ರೈನ್ ಕೊಟ್ಟರು. ಅಲ್ಲಿ ಕರ್ನಾಟಕದವರು ಹೆಚ್ಚು ಇದ್ದಾರೆ. ಅಲ್ಲಿ ಎಲ್ಲಾ ಪಕ್ಷದವರು, ಎನ್ಜಿಓ ಗಳು ಕೆಲಸ ಮಾಡುತ್ತಿವೆ. ಇವರುಗಳ ಕಿವಿ, ಕಣ್ಣು ಮುಚ್ಚಿವೆ. ಆದರೆ ಬಾಯಿ ಮಾತ್ರ ಓಪನ್ ಇದೆ ಎಂದು ಗರಂ ಆದರು.
ಗುಜರಾತಿನಲ್ಲಿ ಅಮೆರಿಕದ ಅಧ್ಯಕ್ಷರನ್ನು ಕರೆಸಿ ಶೋ ಮಾಡಿದ್ರು. ಆಮೇಲೆ ಲಾಕ್ ಡೌನ್ ಮಾಡಿದರು. ಸರ್ಕಾರದವರು ಶೋ ಮಾಡುತ್ತಾರೆ ಆದರೆ ಕೆಲಸ ಮಾಡುವುದಿಲ್ಲ. ಇಂದು ರಾಜಕೀಯ ಮಾಡಬಾರದು ಅಂತ ಸುಮ್ಮನೆ ಇದ್ದೇವೆ. 3 ಸಾವಿರ ಟ್ರೈನ್ ಇವೆ. ಅವನ್ನು ಸಮರ್ಥವಾಗಿ ಬಳಸುತ್ತಿಲ್ಲ. ವಲಸೆ ಕಾರ್ಮಿಕರ ಹಿತವನ್ನು ಕಾಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು.