Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • Live TV
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Corona

ನಾಳೆಯಿಂದ ಹೊಸ ಲಾಕ್‍ಡೌನ್ – ಪ್ಲಾನ್ ಹೇಗಿರಬಹುದು? ಯಾವುದಕ್ಕೆ ವಿನಾಯಿತಿ?

Public TV
Last updated: May 17, 2020 10:18 am
Public TV
Share
3 Min Read
modi lockdown 4
SHARE

– ಇಂದು ಕೇಂದ್ರದಿಂದ ಬರಲಿದೆ ಹೊಸ ಮಾರ್ಗಸೂಚಿ
– ಸಾರ್ವಜನಿಕ ಸಾರಿಗೆ ಪೂರ್ಣ ಪ್ರಮಾಣದಲ್ಲಿ ಆರಂಭ?

ನವದೆಹಲಿ: ಕೋವಿಡ್ 19 ಲಾಕ್‍ಡೌನ್ 3.0 ಇಂದು ಅಂತ್ಯವಾಗಲಿದ್ದು, ಸೋಮವಾರದಿಂದ ಹೊಸ ಲಾಕ್‍ಡೌನ್ 4.0 ಜಾರಿಯಾಗುತ್ತಿದೆ. ಎಲ್ಲ ರಾಜ್ಯಗಳ ಅಭಿಪ್ರಾಯ ಸಂಗ್ರಹಿಸಿರುವ ಕೇಂದ್ರ ಇಂದು ಹೊಸ ಮಾರ್ಗಸೂಚಿ ಪ್ರಕಟ ಮಾಡಲಿದೆ.

ಹೊಸ ಲಾಕ್‍ಡೌನ್ ಹೊಸ ರೀತಿಯಲ್ಲಿ ಇರಲಿದೆ ಅಂತ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಸುಳಿವು ನೀಡಿದ್ದು, ಕೇಂದ್ರ ಸರ್ಕಾರದ ಲೆಕ್ಕಾಚಾರ ಹೇಗಿರಲಿದೆ ಎನ್ನುವುದೇ  ಕುತೂಹಲ. ಯಾಕಂದ್ರೆ, ಈಗಾಗಲೇ 3 ಲಾಕ್‍ಡೌನ್‍ಗಳಲ್ಲೂ ಬೇಕಾಬಿಟ್ಟಿ ಓಡಾಡ್ತಿದ್ದಾರೆ. ಜೊತೆಗೆ, ಲಾಕ್‍ಡೌನ್ 3ರಲ್ಲಿ ಮತ್ತಷ್ಟು ಸಡಿಲ ಮಾಡಿರುವ ಕಾರಣ ಕೊರೋನಾ ವೈರಸ್ ಸಂಖ್ಯೆಯೋ ಮೂರ್ನಾಲ್ಕು ಪಟ್ಟು ವೇಗವಾಗಿ ಏರಿಕೆ ಕಾಣುತ್ತಿದೆ.

Lockdown 2 1

ಬಿಗಿ ಕ್ರಮ ಕೈಗೊಳ್ಳುತ್ತಿದ್ದರೂ ಕಾರ್ಮಿಕರ ವಲಸೆ ನಿಂತಿಲ್ಲ. ತಮ್ಮೂರುಗಳನ್ನು ತಲುಪಲು ಹರಸಾಹಸವೇ ಮಾಡಿ ಸಂಚಾರ ಮಾಡುತ್ತಿರುವ ಪ್ರವಾಸಿ ಕಾರ್ಮಿಕರು ಸಾವಿಗೀಡಾಗ್ತಿದ್ದಾರೆ. ಈ ಎಲ್ಲಾ ವಿಷಯಗಳನ್ನು ಗಂಭೀರವಾಗಿ ಕೇಂದ್ರ ಸರ್ಕಾರ ಪರಿಗಣಿಸಿದೆ. ಹೀಗಾಗಿ, ಲಾಕ್‍ಡೌನ್ 4.0 ಲೆಕ್ಕಾಚಾರಗಳು, ಪ್ಲಾನ್‍ಗಳೇ ವಿಭಿನ್ನವಾಗಿರೋದ್ರಲ್ಲಿ ಎರಡು ಮಾತಿಲ್ಲ.

ಲಾಕ್‍ಡೌನ್ 4.0 ಪ್ಲಾನ್ ಏನು?
ಪ್ಲಾನ್ 1: ಇನ್ನೆರೆಡು ವಾರ ಲಾಕ್‍ಡೌನ್ ವಿಸ್ತರಣೆ – ಮೇ 31ವರೆಗೆ ವಿಸ್ತರಣೆ..?
ಪ್ಲಾನ್ 2: ಕಂಟೈನ್ಮೆಂಟ್ ಝೋನ್‍ಗಷ್ಟೇ ಲಾಕ್‍ಡೌನ್ (ರೆಡ್‍ಝೋನ್‍ಗಳಿಗೂ ಲಾಕ್‍ಡೌನ್ ವಿನಾಯ್ತಿ ಸಾಧ್ಯತೆ)
ಪ್ಲಾನ್ 3: ರಾತ್ರಿಯ ಕರ್ಫ್ಯೂ ಅವಧಿ ವಿಸ್ತರಣೆ ಸಾಧ್ಯತೆ (ರಾತ್ರಿ 7 ಗಂಟೆ ಬದಲಿಗೆ ರಾತ್ರಿ 10ರಿಂದ ಬೆಳಗ್ಗೆ 7ವರೆಗೆ ವಿಸ್ತರಣೆ ಸಾಧ್ಯತೆ)
ಪ್ಲಾನ್ 4: ಝೋನ್‍ಗಳ ನಿರ್ಧಾರ ಅಧಿಕಾರ ರಾಜ್ಯಗಳಿಗೆ ಸಾಧ್ಯತೆ
ಪ್ಲಾನ್ 5: ವಲಸೆ ಕಾರ್ಮಿಕರ ಹಿತದೃಷ್ಟಿಗಾಗಿ ಮತ್ತಷ್ಟು ಶ್ರಮಿಕ್ ರೈಲು

rajdhani

ಯಾವುದಕ್ಕೆ ವಿನಾಯಿತಿ?
ಈ ಪ್ಲಾನ್ ಹೊರತು ಪಡಿಸಿ, ಸೋಮವಾರದಿಂದ ಶುರುವಾಗಲಿರೋ ಹೊಸ ಲಾಕ್‍ಡೌನ್‍ನಲ್ಲಿ ಈಗಾಗಲೇ ಚಾಲ್ತಿಯಲ್ಲಿರೋ ವಿನಾಯ್ತಿಗಳೂ ಸೇರಿದಂತೆ ಮತ್ತಷ್ಟು ಸಡಿಲಿಕೆ ಮಾಡೋ ಸಾಧ್ಯತೆ ಇದೆ. ಯಾಕೆಂದರೆ ಪ್ರಧಾನಿ ಜೊತೆ ನಡೆದ ವಿಡಿಯೋ ಸಂವಾದದಲ್ಲಿ ಆರ್ಥಿಕತೆ ದೃಷ್ಟಿಯಿಂದ ಲಾಕ್‍ಡೌನ್ ತೆರವಿಗೆ ಮನವಿ ಮಾಡಿದ್ದರು. ಕೇವಲ ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಲಾಕ್‍ಡೌನ್ ಬಿಗಿಗೊಳಿಸಿ ಉಳಿದೆಡೆ ರಿಲೀಫ್ ಕೊಡುವಂತೆ ಕೇಳಿಕೊಂಡಿದ್ದರು.

ಲಾಕ್‍ಡೌನ್ ಮುಂದುವರಿಸಲು ಬಿಹಾರ, ಉತ್ತರ ಪ್ರದೇಶ, ಅಸ್ಸಾಂ, ಒಡಿಶಾ, ಮಹಾರಾಷ್ಟ್ರ, ಗುಜರಾತ್ ಮನವಿ ಮಾಡಿದರೆ, ಆಂಧ್ರ, ಮಣಿಪುರ, ಅರುಣಾಚಲ ಪ್ರದೇಶ ಲಾಕ್‍ಡೌನ್ ತೆರವು ಮಾಡುವಂತೆ ಮನವಿ ಮಾಡಿದ್ದವು. ಲಾಕ್‍ಡೌನ್ ಮುಂದುವರಿಸಿ ಆದರೆ ಕಂಟೈನ್ಮೆಂಟ್ ಆಧಾರದ ಮೇಲೆ ಮುಂದುವರಿಸುವಂತೆ ದೆಹಲಿ, ಕರ್ನಾಟಕ, ಪಂಜಾಬ್, ತಮಿಳುನಾಡು, ಉತ್ತರಾಖಂಡ ಸರ್ಕಾರಗಳು ಮೋದಿಗೆ ಕೇಳಿಕೊಂಡಿದ್ದವು.

Lockdown 15

ಮುಖ್ಯಮಂತ್ರಿಗಳ ಈ ಸಲಹೆ ಜೊತೆಗೆ, ಖುದ್ದು ಪ್ರಧಾನಿ ಮೋದಿ, ಈ ಕೊರೋನಾ ವೈರಸ್ ಅಷ್ಟು ಬೇಗ ದೂರ ಆಗಲ್ಲ. ಹಾಗಾಗಿ, ಕೊರೋನಾ ಜೊತೆಗೆ ಬದುಕೋದನ್ನು ಕಲಿಬೇಕು ಅಂತ ಮೊನ್ನೆಯ ಭಾಷಣದಲ್ಲಿ ಹೇಳಿದ್ದರು.

ಹೊಸ ಲಾಕ್‍ಡೌನ್ ನಿರೀಕ್ಷೆಗಳು ಏನು?
* ಖಾಸಗಿ, ಸರ್ಕಾರಿ ಬಸ್‍ಗಳ ಓಡಾಟ
* ದೇಶಿಯ ವಿಮಾನ, ಕೆಲ ರೈಲುಗಳ ಸಂಚಾರ ಆರಂಭ (ನಾಳೆಯಿಂದಲೇ ಪೂರ್ಣ ಪ್ರಮಾಣದಲ್ಲಿ ಸಂಚಾರವಿಲ್ಲ)
* ಆಟೋ, ಕ್ಯಾಬ್‍ಗಳ ಸಂಚಾರ
* ಆಪ್ ಆಧಾರಿತ ಆಟೋ, ಕ್ಯಾಬ್ ಸೇವೆ
* ರೆಡ್‍ಝೋನ್‍ಗಳಲ್ಲಿ ಸಲೂನ್, ಬ್ಯೂಟಿ ಪಾರ್ಲರ್, ಸ್ಪಾಗೆ ಅನುಮತಿ

Migrants Workers Karnataka Majestick Bus Stand Lockdown Relief 27
* ಜಿಮ್, ಫಿಟ್ನೆಸ್ ಸೆಂಟರ್,  ಗಾಲ್ಫ್ ಕ್ಲಬ್ ಓಪನ್
* ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ಸಿಬ್ಬಂದಿ ಪ್ರಮಾಣ ಹೆಚ್ಚಳ
* ಎಲ್ಲಾ ಮಾದರಿಯ ಅಂಗಡಿ-ಮುಂಗಟ್ಟು ತೆರೆಯಲು ಅವಕಾಶ (ಸಮಯ ನಿಗಧಿಯೊಂದಿಗೆ ಅನುಮತಿ)
* ಸಮ-ಬೆಸ ಆಧಾರದ ಮೇಲೆ ಮಾರುಕಟ್ಟೆ ತೆರೆಯಲು ಅವಕಾಶ (ರಾಜ್ಯ ಸರ್ಕಾರದ ನಿರ್ಣಯಕ್ಕೆ ಬಿಡಬಹುದು)
* ಇ-ಕಾಮರ್ಸ್ ಮೂಲಕ ತುರ್ತು ಅವಶ್ಯಕವಲ್ಲದ ವಸ್ತುಗಳ ಮಾರಾಟ
* ಬೈಕ್‍ನಲ್ಲಿ ಒಬ್ಬರು, ಕಾರಿನಲ್ಲಿ ಡ್ರೈವರ್ ಬಿಟ್ಟು ಇಬ್ಬರ ಪ್ರಯಾಣ ನಿಯಮ ವಿಸ್ತರಣೆ
* ಎಲ್ಲ ಮಾದರಿಯ ಕೈಗಾರಿಕೆ, ಹಾರ್ಡ್‍ವೇರ್ ಉದ್ಯಮಕ್ಕೆ ಅವಕಾಶ (ಮುನ್ನೆಚ್ಚರಿಕೆ ನಿಯಮಗಳ ಪಾಲನೆ ಕಡ್ಡಾಯ )

corona bike lockdown
* ನಗರ ಭಾಗದಲ್ಲಿ ಕಟ್ಟಡ ನಿರ್ಮಾಣ ಆರಂಭಿಸಬಹುದು (ಕಾರ್ಮಿಕ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಡಬೇಕು ಹಾಗೂ ಹೊರಗಡೆಯಿಂದ ಕಾರ್ಮಿಕರನ್ನು ಕರೆತರಬಾರದು)
* ಕೊರಿಯರ್ ಪೋಸ್ಟಲ್ ಸೇವೆ ವಿಸ್ತರಣೆ
* ಸರ್ಕಾರಿ, ಖಾಸಗಿ ಸಂಸ್ಥೆಗಳಲ್ಲಿ ಶೇ.33 ರಿಂದ 50ಕ್ಕೆ ಉದ್ಯೋಗಿಗಳ ಹೆಚ್ಚಳ ಮಾಡುವುದು
* 10 ವರ್ಷದೊಳಗಿನ ಮಕ್ಕಳು, 60ವರ್ಷ ಮೇಲ್ಪಟ್ಟ ವೃದ್ಧರು ಮನೆಯಿಂದ ಆಚೆ ಬರುವಂತಿಲ್ಲ (ವೈದ್ಯಕೀಯ ಅನಿವಾರ್ಯತೆ ಹೊರತುಪಡಿಸಿ)
* ಖಾಸಗಿ ಆಸ್ಪತ್ರೆಗಳ ಓಪಿಡಿ ಕಾರ್ಯ ನಿರ್ವಹಣೆಗೆ ಅವಕಾಶ

theatre 1

ಯಾವುದಕ್ಕೆ ನಿರ್ಬಂಧ ಮುಂದುವರಿಕೆ?
* ಥಿಯೇಟರ್, ಶಾಪಿಂಗ್ ಮಾಲ್, ಕಾಂಪ್ಲೆಕ್ಸ್
* ದೇಗುಲ, ಜಾತ್ರೆ, ಸಂತೆ, ಉತ್ಸವ ಧಾರ್ಮಿಕ, ರಾಜಕೀಯ, ಸಾಂಸ್ಕೃತಿಕ ಕಾರ್ಯಕ್ರಮ
*  ಎಲ್ಲ ರೈಲುಗಳ ಓಡಾಟ, ನಮ್ಮ ಮೆಟ್ರೋ ರೈಲು ಓಡಾಟಕ್ಕೂ ಅನುಮತಿ ಅನುಮಾನ
* ಹೋಟೆಲ್‍ಗಳಲ್ಲಿ ಪಾರ್ಸೆಲ್‍ಗಷ್ಟೇ ಅವಕಾಶ ಮುಂದುವರಿಕೆ
* ಜೂನ್ ಬಳಿಕವಷ್ಟೇ ಶಾಲಾ-ಕಾಲೇಜು ಆರಂಭ

TAGGED:CoronaCovid19indiakarnatakaLockdownmodiಕರ್ನಾಟಕಕೊರೊನಾ ವೈರಸ್ಕೋವಿಡ್ 19ಭಾರತಲಾಕ್‍ಡೌನ್ಸಾರ್ವಜನಿಕ ಸಾರಿಗೆ
Share This Article
Facebook Whatsapp Whatsapp Telegram

Cinema Updates

Kantara
ಕಾಂತಾರ ಚಾಪ್ಟರ್-1 | ದೈವದ ನೇಮೋತ್ಸವ ಚಿತ್ರೀಕರಣಕ್ಕೂ ಮುನ್ನವೇ ಸಹ ಕಲಾವಿದ ಸಾವು
5 hours ago
Kantara 3
ʻಕಾಂತಾರ ಚಾಪ್ಟರ್-1ʼಗೆ ಸಾಲು ಸಾಲು ವಿಘ್ನ – ಒಂದೇ ತಿಂಗಳಲ್ಲಿ ಮೂರು ಸಾವು!
5 hours ago
Kantara Death copy
ಕಾಂತಾರ ಚಾಪ್ಟರ್-1 ಚಿತ್ರದ ಸಹ ಕಲಾವಿದ ವಿಜು ಹೃದಯಾಘಾತದಿಂದ ಸಾವು
6 hours ago
India House Movie
`ದಿ ಇಂಡಿಯಾ ಹೌಸ್ʼ ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ನೀರಿನ ಟ್ಯಾಂಕರ್‌ ಸ್ಫೋಟ – ಹಲವರಿಗೆ ಗಾಯ
7 hours ago

You Might Also Like

Boeing 787 air india dreamliner
Latest

ಏರ್‌ ಇಂಡಿಯಾ ವಿಮಾನ ಪತನ – ಏನಿದು ಬ್ಲ್ಯಾಕ್‌ಬಾಕ್ಸ್‌? ಬೆಂಕಿಯಲ್ಲಿ ಸುಟ್ಟು ಹೋಗಲ್ಲ ಯಾಕೆ?

Public TV
By Public TV
21 minutes ago
Plane Crash Modi tweet
Latest

ಏರ್ ಇಂಡಿಯಾ ವಿಮಾನ ದುರಂತದಿಂದ ದಿಗ್ಭ್ರಮೆಗೊಂಡಿದ್ದೇನೆ: ಮೋದಿ

Public TV
By Public TV
31 minutes ago
Bengaluru Chinnaswamy Stadium Stampede Case RCBs Marketing Head Nikhil Sosale Arrested in Airport
Bengaluru City

ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ – ಆರ್‌ಸಿಬಿ ಮಾರ್ಕೆಟಿಂಗ್‌ ಹೆಡ್‌ ಸೇರಿ ನಾಲ್ವರಿಗೆ ಷರತ್ತುಬದ್ಧ ಜಾಮೀನು

Public TV
By Public TV
55 minutes ago
Ahmedabad Air India Plane Crash
Crime

ಬಿಜೆ ಮೆಡಿಕಲ್ ಆಸ್ಪತ್ರೆಗೆ ಬಡಿದ ಏರ್ ಇಂಡಿಯಾ ವಿಮಾನ – 7 ವಿದ್ಯಾರ್ಥಿಗಳ ಸಾವು ಶಂಕೆ

Public TV
By Public TV
59 minutes ago
Air India Bird Hit Ahmedabad Plane Crash
Latest

ಹಕ್ಕಿ ಡಿಕ್ಕಿಯಿಂದ ಟೇಕಾಫ್‌ ವೇಗ ಕಳೆದುಕೊಂಡು ವಿಮಾನ ಪತನ – ತಜ್ಞರು ಹೇಳೋದು ಏನು?

Public TV
By Public TV
1 hour ago
gujarat cm vijay rupani
Latest

ವಿಮಾನ ಪತನ – ಗುಜರಾತ್‌ ಮಾಜಿ ಸಿಎಂ ವಿಜಯ್‌ ರೂಪಾನಿ ಸಾವು

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?