– ಪ್ರಕರಣದ ಆರೋಪಿಗಳಿಂದ್ಲೇ ಕೃತ್ಯ
– ಸಹಾಯ ಮಾಡೋದಾಗಿ ಹೇಳಿ ರೇಪ್ಗೈದ್ರು
ಲಕ್ನೋ: ಅತ್ಯಾಚಾರ ಸಂತ್ರಸ್ತೆಯ ಮೇಲೆ ಐವರು ಆರೋಪಿಗಳೇ ಗ್ಯಾಂಗ್ ರೇಪ್ ಎಸಗಿರುವ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.
ಐವರು ಆರೋಪಿಗಳನ್ನು ದಿಲೀಪ್ ಯಾದವ್, ವನರಾಜ್ ಸಿಂಗ್, ಸತೀಶ್ ಹಾಗೂ ವಿಶ್ವನಾರಾಯಣ್ ಎಂದು ಗುರುತಿಸಲಾಗಿದೆ. ಸಂತ್ರಸ್ತೆಯ ಮೇಲೆ 2017ರಲ್ಲಿ ಉನ್ನಾವೋ ಜಿಲ್ಲೆಯಲ್ಲಿ ಅತ್ಯಾಚಾರ ನಡೆದಿತ್ತು. ಇದೀಗ ತನ್ನ ಹಿಂದಿನ ಪ್ರಕರಣದ ಕುರಿತು ಸಹಾಯ ಮಾಡುವ ನೆಪದಲ್ಲಿ ಮತ್ತೆ ಅತ್ಯಾಚಾರಕ್ಕೊಳಗಾಗಿರುವುದಾಗಿ ಮಹಿಳೆ ದೂರಿದ್ದಾಳೆ.
ಆರೋಪಿಗಳು ಸಂತ್ರಸ್ತೆಗೆ ಸಹಾಯ ಮಾಡುವ ನೆಪದಲ್ಲಿ ಬೆದರಿಸಿ ನಿರಂತರವಾಗಿ ಅತ್ಯಾಚಾರವೆಸಗಿದ್ದಾರೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಪ್ರಕರಣ ಸಂಬಂಧ ಸಂತ್ರಸ್ತೆ ಗುರುವಾರ ಬಂಗಾರ್ ಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಐವರು ಆರೋಪಿಗಳನ್ನು ಬಂಧಿಸಲಾಗಿದೆ.
ಸಂತ್ರಸ್ತೆಗೆ 2012ರಲ್ಲಿ ಮದುವೆಯಾಗಿದೆ. ಆ ಬಳಿಕ ಆಕೆ, 2017ರಲ್ಲಿ ತನ್ನ ಪತಿ, ಗೆಳೆಯರ ಜೊತೆ ಸೇರಿ ನನ್ನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಅಂತ ಆರೋಪ ಮಾಡಿದ್ದರು ಎಂದು ಉನ್ನಾವೂ ಎಸ್ಪಿ ವಿಕ್ರಾಂತ್ ವೀರ್ ತಿಳಿಸಿದ್ದಾರೆ. ಘಟನೆಯ ಬಳಿಕ ಪತಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಆ ನಂತರ ಅಂದರೆ 2018ರಲ್ಲಿ ಐವರು ಆರೋಪಿಗಳನ್ನು ನಾನು ಭೇಟಿಯಾದೆ. ಆಗ ಅವರು 20 ದಿನದಲ್ಲಿ ನಿನಗೆ ನ್ಯಾಯ ಕೊಡಿಸುವ ಮೂಲಕ ಸಹಾಯ ಮಾಡುವುದಾಗಿ ಪ್ರಾಮಿಸ್ ಮಾಡಿದರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಇಷ್ಟು ಮಾತ್ರವಲ್ಲದೆ ಆರೋಪಿಗಳು ಮಹಿಳೆಯ ಕೈಯಿಂದ 6 ಸಾವಿರ ರೂ. ಕೂಡ ಪೀಕಿದ್ದಾರೆ. ಆರೋಪಿಯೊಬ್ಬ ಖಾಲಿ ಪೇಪರ್ ಗೆ ಮಹಿಳೆಯ ಹೆಬ್ಬೆಟ್ಟು ಹಾಕಿಸಿಕೊಂಡಿದ್ದಾರೆ. ಆ ಬಳಿಕದಿಂದ ಬ್ಲ್ಯಾಕ್ ಮೇಲೆ ಮಾಡಿಕೊಂಡು ಮಹಿಳೆಯ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿದ್ದಾರೆ.