Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Districts

ಅಂಧ ಗಾಯಕಿಯರಿಗೆ ನಿರ್ಮಾಣವಾಗುತ್ತಿದೆ ಚಂದದ ಮನೆ

Public TV
Last updated: February 14, 2020 12:52 pm
Public TV
Share
3 Min Read
tmk blind sisters 13
SHARE

ತುಮಕೂರು: ತಮ್ಮ ಸುಮಧುರ ಕಂಠ ಸಿರಿಯ ಮೂಲಕ ನಾಡಿನ ಜನರ ಮನಸ್ಸು ಗೆದ್ದ ಮಧುಗಿರಿ ತಾಲೂಕಿನ ಅಂಧ ಸಹೋದರಿಯರಿಗೆ ಈಗ ಚೆಂದದ ಮನೆಯ ಭಾಗ್ಯ ಒದಗಿ ಬಂದಿದೆ.

ನವರಸನಾಯಕ ಜಗ್ಗೇಶ್ ಅಂಧ ಸಹೋದರಿಯರಿಗೆ ಮನೆ ಕಟ್ಟಿಕೊಡುವ ವಾಗ್ದಾನ ಮಾಡಿದ್ದರು. ಅದರಂತೆ ಈಗ ಮಧುಗಿರಿ ತಾಲೂಕಿನ ಡಿ.ವಿ ಹಳ್ಳಿಯಲ್ಲಿ ಮನೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಕೊರಟಗೆರೆ ತಾಲೂಕಿನ ಜಗ್ಗೇಶ್ ಅಭಿಮಾನಿ ಬಳಗ ಮನೆ ನಿರ್ಮಾಣದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದು, ಗಾಯಕಿಯರ 28 ವರ್ಷದ ಹಳೆಯ ಮನೆಯನ್ನು ಕೆಡವಿ ಹೊಸ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈಗಾಗಲೇ ಇದ್ದ ಹಳೆ ಮನೆ ಇಟ್ಟಿಗೆ ಗೋಡೆ, ಕಬ್ಬಿಣದ ಬೀಮ್ ಮೇಲೆ ಚಪ್ಪಡಿ ಕಲ್ಲು ಇಟ್ಟು ನಿರ್ಮಾಣ ಮಾಡಲಾಗಿತ್ತು. ಮನೆ ಮುಂದೆ ತೆಂಗಿನ ಗರಿಯಿಂದ ಚಾವಣಿ ಮಾಡಲಾಗಿತ್ತು. ಇವೆಲ್ಲವನ್ನೂ ಕೆಡವಿ ಹೊಸದಾಗಿ ಕಟ್ಟಲಾಗುತ್ತಿದೆ. ಇದನ್ನೂ ಓದಿ: ಅಂಧ ಸೋದರಿಯರಿಗೆ ಬೆಳಕಾದ ಜಗ್ಗೇಶ್

tmk blind sisters 20

ಹೊರಗಿನ ಹಜಾರ ಸೇರಿದಂತೆ ಒಟ್ಟು 7 ಚದರ ಅಡಿ ವಿಸ್ತೀರ್ಣದಲ್ಲಿ ಮನೆ ನಿರ್ಮಾಣ ಮಾಡಲು ಪ್ಲಾನ್ ಮಾಡಲಾಗಿದೆ. ಅಡುಗೆ ಮನೆ, ಹಾಲ್, ಒಂದು ಕೋಣೆ ಮತ್ತು ಹೊರಗಿರುವ ಹಜಾರ ನಿರ್ಮಿಸಲು ಚಿಂತಿಸಲಾಗಿದೆ. ಮನೆ ನಿರ್ಮಾಣಕ್ಕೆ ಸುಮಾರು 5 ಲಕ್ಷ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಜಗ್ಗೇಶ್ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಮಲ್ಲೇಶ್, ತಾಲೂಕ್ ಅಧ್ಯಕ್ಷ ಶಿವಶಂಕರ್ ಹಾಗೂ ಕೆ.ಎನ್ ರವಿಕುಮಾರ್ ಅವರ ಉಸ್ತುವಾರಿಯಲ್ಲಿ ಮನೆ ನಿರ್ಮಾಣ ಕೆಲಸ ಬಿರುಸಿನಿಂದ ಸಾಗಿದೆ. ಅಭಿಮಾನಿ ಬಳಗದ ಕಾರ್ಯಕರ್ತರೇ ಶ್ರಮದಾನದ ಮೂಲಕ ಮನೆ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಎರಡು ತಿಂಗಳಲ್ಲಿ ಹೊಸ ಮನೆ ನಿರ್ಮಾಣವಾಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.

tmk blind sisters 21

ಅಂಧ ಗಾಯಕಿಯರ ಹಿನ್ನೆಲೆ:
ಮಧುಗಿರಿ ತಾಲೂಕಿನ ಡಿ.ವಿ.ಹಳ್ಳಿಯ ಮೂವರು ಸಹೋದರಿಯರಾದ ಗೌರಮ್ಮ, ಮಂಜಮ್ಮ ಹಾಗೂ ರತ್ನಮ್ಮ ಈ ಜಗತ್ತನ್ನು ಕಣ್ಣು ಬಿಟ್ಟು ನೋಡಿಲ್ಲ. ಅಕ್ಷರ ಜ್ಞಾನ ಕೂಡ ಇವರಿಗೆ ಇಲ್ಲ. ದೇವರು ಕೊಟ್ಟ ವರ ಎಂಬಂತೆ ಸುಮಧುರ ಕಂಠವೊಂದೇ ಇವರಿಗೆ ಆಧಾರ. ಆ ಕಂಠಸಿರಿಯಿಂದ ಅಂಧ ಸಹೋದರಿಯರು ಇಂದು ನಾಡಿನ ಗಮನ ಸೆಳೆದಿದ್ದಾರೆ. ಮಧುಗಿರಿ ಪಟ್ಟಣದ ದಂಡಿನ ಮಾರಮ್ಮ ದೇವಸ್ಥಾನದ ಎದುರು ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಸುಸ್ರಾವ್ಯವಾದ ಹಾಡು ಹೇಳುವುದೇ ಇವರ ಕಾಯಕ. ಸುಮಾರು 20 ವರ್ಷಗಳಿಂದ ಹಾಡನ್ನು ಹಾಡಿ ಒಂದಿಷ್ಟು ಸಂಪಾದನೆ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.

tmk blind sisters 22

ಊರಿನಲ್ಲಿ ಮದುವೆ ಸಮಾರಂಭಗಳಲ್ಲಿ ಧ್ವನಿವರ್ಧಕಗಳಿಂದ ಬರುವ ಹಾಡು, ಅಕ್ಕಪಕ್ಕದ ಮನೆಯ ರೇಡಿಯೋದಿಂದ ಕೇಳಿ ಬರುವ ಚಿತ್ರಗೀತೆಗಳು, ಟೆಪ್ ರೆಕಾರ್ಡ್‌ಗಳಿಂದ ಮೂಡಿಬರುವ ಹಾಡನ್ನು ಕೇಳಿ ಕೇಳಿ ಹಾಡುವುದನ್ನು ಕರಗತ ಮಾಡಿಕೊಂಡಿದ್ದಾರೆ. ಇವರ ಹಾಡನ್ನು ಕೇಳಿದರೆ ಎಂಥವರೂ ತಲೆದೂಗಬೇಕು. ಯಾವುದೇ ವೃತ್ತಿಪರ ಹಾಡುಗಾರಗಿಂತಲೂ ಕಡಿಮೆ ಇಲ್ಲ ಇವರ ಕಂಠಸಿರಿ. ಕಳೆದ 18-20 ವರ್ಷಗಳಿಂದ ನಿರಂತರವಾಗಿ ದಂಡಿನಮಾರಮ್ಮ ದೇವಸ್ಥಾನದಲ್ಲಿ ವಾರಕ್ಕೆರಡು ಬಾರಿ ಹಾಡುತ್ತಾ ಬಂದಿದ್ದಾರೆ. ಇವರ ಹಾಡಿಗೆ ಮರುಳಾದ ಭಕ್ತಾದಿಗಳು ಒಂದಿಷ್ಟು ಕಾಣಿಕೆಯನ್ನು ನೀಡುತ್ತಾರೆ. ಈ ಕಾಣಿಕೆ ರೂಪದ ಸಂಪಾದನೆಯೆ ಇವರ ಜೀವನದ ನಿರ್ವಹಣೆಗೆ ಸಹಾಯಕಾರಿ.

tmk blind sisters 1 e1581663778421

ಕುಟುಂಬದ ಹಿನ್ನೆಲೆ:
ಅಂಧ ಸಹೋದರಿಯರ ತಾಯಿ ಸಿದ್ದಮ್ಮ ಟಿಬಿ ಕಾಯಿಲೆಯಿಂದ ತೀರಿ ಹೋಗಿ 20 ವರ್ಷವಾಯಿತು. ಮೂವರು ಅಂಧ ಮಕ್ಕಳು ಹುಟ್ಟುತ್ತಿದ್ದಂತೆ ತಾಯಿ ತೀರಿ ಹೋಗಿದ್ದಾರೆ. ತಂದೆ ಅಶ್ವತ್ಥಪ್ಪ ದಂಪತಿಗೆ ನಾಲ್ಕು ಹೆಣ್ಣು ಮಕ್ಕಳು ಒಬ್ಬ ಗಂಡು ಮಗ ಇದ್ದ. ನಾಲ್ಕು ಹೆಣ್ಣು ಮಕ್ಕಳಲ್ಲಿ ಮೂವರು ಅಂಧರು. ಇನ್ನೊಬ್ಬರು ಸಹಜವಾಗಿದ್ದಾರೆ. ಇದ್ದ ಒಬ್ಬ ಗಂಡು ಮಗ ಕೂಡ ಕಾಯಿಲೆಯಿಂದ ತೀರಿ ಹೋಗಿದ್ದಾನೆ. ಮೂವರು ಅಂಧ ಸಹೋದರಿಯರಲ್ಲಿ ಹಿರಿಯ ಸಹೋದರಿ ಗೌರಮ್ಮ ಕ್ರೈಸ್ತ ಸಂಪ್ರದಾಯದ ಹಾಡನ್ನು ಹಾಡುತ್ತಾರೆ. ಹಾಗಾಗಿ ಅವರು ಸರಿಗಮಪಕ್ಕೆ ಹೋಗಿಲ್ಲ. ಕುಟುಂಬದಲ್ಲಿ ತಾಯಿ ಮತ್ತು ತಮ್ಮ ತೀರಿಹೋದಾಗ ಮಕ್ಕಳು ಅನಾಥರಾಗುತ್ತಾರೆ. ಅಜ್ಜಿ ತಿಮ್ಮಕ್ಕನ ಆರೈಕೆಯಲ್ಲಿ ಮಕ್ಕಳು ಬೆಳೆಯುತ್ತಾರೆ. ಈಗ ತಂದೆ ಅಸ್ವತ್ಥಪ್ಪ ಹಾಗೂ ಅಜ್ಜಿ ತಿಮ್ಮಕ್ಕಗೂ ದುಡಿಯಲು ಶಕ್ತಿಯಿಲ್ಲ. ಮೂವರು ಹೆಣ್ಣುಮಕ್ಕಳ ಹಾಡಿನ ಸಂಪಾದನೆಯಿಂದ ಬಂದ ಹಣವೇ ಸಂಸಾರಕ್ಕೆ ಆಧಾರ.

tmk blind sisters 2

ದೇವಸ್ಥಾನದಲ್ಲಿ ಈ ಮೂವರು ಸಹೋದರಿಯರು ಹಾಡೋದನ್ನು ನೋಡಿ ಮಧುಗಿರಿ ತಾಲೂಕ್ ಡಳಿತ ದೇವಸ್ಥಾನದ ಎದುರಿಗೆ ಒಂದು ಪೆಟ್ಟಿಗೆ ಅಂಗಡಿಯ ವ್ಯವಸ್ಥೆ ಮಾಡಿಕೊಟ್ಟಿದೆ. ಆ ಪೆಟ್ಟಿಗೆಯಲ್ಲೇ ಇವರುಗಳು ಕುಳಿತು ಹಾಡುತ್ತಿದ್ದಾರೆ. ಕಳೆದ 28 ವರ್ಷದ ಹಿಂದೆ ಸರ್ಕಾರದಿಂದ ಮಂಜೂರಾದ ಪುಟ್ಟ ಗುಡಿಸಲು ಇದ್ದು ಅದು ಶೀಥೀಲಗೊಂಡಿತ್ತು. ಇದನ್ನು ಅರಿತ ನಟ ಜಗ್ಗೇಶ್ ಮನೆ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.

TAGGED:blinc sistershouse constructionjaggeshPublic TVtumkuruಅಂಧ ಸಹೋದರಿಯರುಜಗ್ಗೇಶ್ತುಮಕೂರುನಿರ್ಮಾಣಪಬ್ಲಿಕ್ ಟಿವಿಮನೆಸ್ಯಾಂಡಲ್‍ವುಡ್
Share This Article
Facebook Whatsapp Whatsapp Telegram
Leave a Comment

Leave a Reply

Your email address will not be published. Required fields are marked *

Cinema News

darshan 28 years cinema journey
ದರ್ಶನ್ ಸಿನಿ ಜರ್ನಿಗೆ 28 ವರ್ಷ: ‘ಡಿ’ ಫ್ಯಾನ್ಸ್ ಸಂಭ್ರಮ
Cinema Latest Sandalwood Top Stories
Shoba Karandlaje
ವಿಷ್ಣು ಸಮಾಧಿ ಸ್ಥಳವನ್ನು ಕಲಾಗ್ರಾಮವನ್ನಾಗಿ ಮಾಡಿ – ಸಿಎಂಗೆ ಶೋಭಾ ಕರಂದ್ಲಾಜೆ ಪತ್ರ
Bengaluru City Cinema Karnataka Latest Sandalwood States Top Stories
upendra1
ವಿಷ್ಣು ಸರ್‌ ನನ್ನಂಥ ಅಭಿಮಾನಿಗಳ ಹೃದಯದಲ್ಲಿ ಎಂದೆಂದಿಗೂ ಶಾಶ್ವತ – ನಟ ಉಪೇಂದ್ರ
Cinema Latest Sandalwood Top Stories
the devil first single
‘ಇದ್ರೆ ನೆಮ್ಮದಿಯಾಗ್ ಇರ್ಬೇಕು’ ಎಂದ ದರ್ಶನ್!
Cinema Latest Sandalwood Top Stories
Dhruva Sarja 1
ಧ್ರುವ ಸರ್ಜಾ ಮಕ್ಕಳ ರಕ್ಷಾಬಂಧನ ಆಚರಣೆ
Cinema Latest Sandalwood

You Might Also Like

Turkey Earthquake
Latest

ಟರ್ಕಿಯಲ್ಲಿ 6.1 ತೀವ್ರತೆಯ ಭೂಕಂಪ – ಓರ್ವ ಸಾವು, 29 ಮಂದಿಗೆ ಗಾಯ

Public TV
By Public TV
20 minutes ago
Raghavendra Swamy Madhyaradhane
Latest

ರಾಯರು ಸಶರೀರರಾಗಿ ವೃಂದಾವನಸ್ಥರಾಗಿ ಇಂದಿಗೆ 354 ವರ್ಷ: ಮಂತ್ರಾಲಯದಲ್ಲಿ ಮಧ್ಯಾರಾಧನೆ ಸಂಭ್ರಮ

Public TV
By Public TV
1 hour ago
tirupati
Latest

ತಿರುಪತಿಯಲ್ಲಿ ಹುಂಡಿ ಹಣ ಎಣಿಕೆ – ಒಂದು ತಿಂಗಳಲ್ಲೇ 129.45 ಕೋಟಿ ಸಂಗ್ರಹ

Public TV
By Public TV
2 hours ago
Vidhana Soudha
Bengaluru City

ಇಂದಿನಿಂದ ಮಳೆಗಾಲದ ಅಧಿವೇಶನ ಪ್ರಾರಂಭ

Public TV
By Public TV
2 hours ago
Bengaluru Yellow Metro 1
Bengaluru City

ಬಹುನಿರೀಕ್ಷಿತ ಯೆಲ್ಲೋ ಲೈನ್ ಮೆಟ್ರೋ ಇಂದಿನಿಂದ ಸಾರ್ವಜನಿಕ ಸಂಚಾರಕ್ಕೆ ಮುಕ್ತ

Public TV
By Public TV
2 hours ago
Priyank Kharge 1
Latest

ಪ್ರಿಯಾಂಕ್ ಖರ್ಗೆ V/s ಆರ್‌.ಅಶೋಕ್‌ ಮಧ್ಯೆ ಟ್ವೀಟ್ ವಾರ್‌ – ವೈಯಕ್ತಿಕ ಮಟ್ಟಕ್ಕೆ ತಿರುಗಿದ ಫೈಟ್‌

Public TV
By Public TV
10 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?