Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಇಡಿ ವಾದ ಸಿನಿಮಾ ಕಥೆಯಂತಿದೆ – ಸೆ.25ಕ್ಕೆ ಆದೇಶ ಪ್ರಕಟ

Public TV
Last updated: September 21, 2019 2:59 pm
Public TV
Share
5 Min Read
DK Shivakumar 2 1
SHARE

ನವದೆಹಲಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಜಾಮೀನು ಅರ್ಜಿಯ ಆದೇಶವನ್ನು ಸೆ.25ರಂದು ಪ್ರಕಟವಾಗಲಿದೆ.

ಇಂದು ಬೆಳಗ್ಗೆ 11 ಗಂಟೆಯಿಂದ ಸುದೀರ್ಘವಾದ ವಾದ, ಪ್ರತಿವಾದ ಆಲಿಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್ ಸೆ.25 ರಂದು ಮಧ್ಯಾಹ್ನ 3.30ಕ್ಕೆ ಆದೇಶ ಪ್ರಕಟಿಸುವುದಾಗಿ ತಿಳಿಸಿದರು. ಡಿಕೆ ಶಿವಕುಮಾರ್ ಪರ ವಕೀಲ ಅಭಿಷೇಕ್ ಮನುಸಿಂಘ್ವಿ ವಾದ ಮಂಡಿಸಿ ಇಡಿ ವಾದ ವಾದ ಕೇವಲ ಊಹಾತ್ಮಕ, ಸಿನಿಮಾ ಸ್ಟೋರಿಯಂತಿದೆ. ಹೀಗಾಗಿ ಜಾಮೀನು ಮಂಜೂರು ಮಾಡಿ ಎಂದು ಕೇಳಿಕೊಂಡರು.

ಸಿಂಘ್ವಿ ಅವರ ವಾದ ಹೇಗಿತ್ತು? ಇಡಿ ಪೂರ್ವಾಗ್ರಹ ಪೀಡಿತವಾಗಿ ನಮ್ಮ ಕಕ್ಷಿದಾರರ ಮೇಲೆ ಆರೋಪವಾಗಿದ್ದು, ಇಡಿ ವಾದವೆಲ್ಲ ಊಹಾತ್ಮಕವಾಗಿದೆ. ಬೇಕಂತಲೇ ನನ್ನ ಕಕ್ಷಿದಾರರಿಗೆ ಹಿಂದೆ ನೀಡಲಾಗುತ್ತಿದೆ. ಎಲ್ಲವನ್ನು ಇವರೇ ಹೇಳಿದ್ರೆ ಟ್ರಯಲ್ ಅವಶ್ಯಕತೆ ಏನು? ವಶದಲ್ಲಿರುವ ಆರೋಪಿಯ ವಿಚಾರಣೆ ಸುಲಭ. ಕೇವಲ 4 ದಿನ ವಿಚಾರಣೆ ನಡೆಸಿದ್ದಾರೆ ಎಂದು 18 ದಿನ ಏನು ಮಾಡಿದರು. ಇಡಿ ಅಧಿಕಾರಿಗಳು 162 ಗಂಟೆ ವಿಚಾರಣೆ ಮಾಡಿದ್ದು, 22 ಗಂಟೆಗ ಆಸ್ಪತ್ರೆಯಲ್ಲಿದ್ದರು. ಅಪರಾಧ ಮಾಡಿಲ್ಲ ಅಂದ್ರೆ ಸತ್ಯ ಹೇಗೆ ಬರುತ್ತದೆ? ಇಡಿ ಕೇಳಿದ ಸುಳ್ಳಿಗೆ ಆರೋಪಿ ಸತ್ಯ ಎಂದು ಒಪ್ಪಿಕೊಳ್ಳಬೇಕಾ? ಇಡಿ ಊಹಾತ್ಮಕದಿಂದ ಹೊರ ಬಂದು ಕಥೆ ಹೇಳುವದನ್ನು ನಿಲ್ಲಿಸಬೇಕು. ಇಡಿ ಸುಳ್ಳನ್ನು ಆರೋಪಿ ಸತ್ಯ ಎಂದು ಒಪ್ಪಿಕೊಳ್ಳಬೇಕಾ. ಇಡಿ ವಿಚಾರಣೆ ವೇಳೆ ವಿಫಲವಾಗಿದೆ. ಅರ್ಥ ಕಕ್ಷಿದಾರರಿಗೆ ಜಾಮೀನು ನೀಡಬೇಕು. 18 ದಿನ ನೇರವಾಗಿ ವಿಚಾರಣೆ ನಡೆಸಬೇಕಿದೆ. ಡಿಕೆಶಿ ದೇಶ ಬಿಟ್ಟು ಪರಾರಿಯಾಗುವಂತಹ ವ್ಯಕ್ತಿಯೂ ಅಲ್ಲ. ಅಕ್ರಮವನ್ನು ವಿಚಾರಣೆ ವೇಳೆ ಸಾಬೀತು ಮಾಡಲು ವಿಫಲವಾಗಿದೆ. ಹೇಳಿಕೆಗಳು ಬದಲಾಗಿದ್ರೆ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಿ. ಇಡಿ ಆರೋಪ ಕೇವಲ ಮೌಖಿಕವಾಗಿದ್ದು, ಇಡಿ ವಾದ ಸಿನಿಮಾ ಕಥೆಯಾಗಿದೆ. ಇದನ್ನೂ ಓದಿ: ಸೆ.25ಕ್ಕೆ ಆದೇಶ ಪ್ರಕಟ- ಜಾಮೀನು ಆದೇಶ ಕಾಯ್ದಿರಿಸಿದ ಕೋರ್ಟ್

dkshivakumar A

ಸಂಬಂಧ ಇಲ್ಲದ್ದು ಮತ್ತು ಇಡಿ ಹೇಳಿದಕ್ಕೆ ತಲೆಯಾಡಿಸಿ ಒಪ್ಪಿಕೊಳ್ಳಬೇಕಾ? 120 ಬಿ ಘೋಷಿತ ಅಪರಾಧ ಎಂದು ಇಡಿ ಹೇಳುತ್ತದೆ. ಹಾಗಾದರೆ ಬೇರೆಯವರ ಹಣಕ್ಕೆ ಡಿಕೆಶಿಯವರೇ ಮಾಲೀಕರು ಅಂದ್ರೆ ಹೇಗಾಗುತ್ತದೆ. ಡಿಕೆಶಿ ಯಾವ ದಾಖಲೆಗಳನ್ನು ನಕಲು ಮಾಡಿಲ್ಲ, ಸಾಕ್ಷಿಗಳನ್ನು ತಿರುಚಿಲ್ಲ. ಮೌಖಿಕ ಅರೋಪಗಳಿಗೂ ಬೆಲೆ ಇಲ್ಲ. ಡಿಕೆಶಿ ಅತ್ಯಾಚಾರಿ ಅಲ್ಲ, ಭಯೋತ್ಪಾದಕರು ಅಲ್ಲ. ಅಂತಹ ಕ್ರಿಮಿನಲ್ ಗಳಿಗೆ ಬಳಸುವ ಸೆಕ್ಷನ್ ಗಳನ್ನು ಡಿಕೆ ಶಿವಕುಮಾರ್ ಅವರಿಗೆ ಬಳಸಲಾಗಿದೆ. ಇದರಿಂದ ಡಿ.ಕೆ.ಶಿವಕುಮಾರ್ ಅವರಿಗೆ ನೋವು ಆಗಿದೆ. ಆರೋಪಿಯೂ ನಿರಪರಾಧಿಯಾಗಿದ್ದು, ಜಾಮೀನು ನೀಡಬೇಕು.

ಎಲ್ಲ ದಾಖಲೆಗಳು ಇಡಿ ಬಳಿಯಲ್ಲಿವೆ ಎಂದು ಹೇಳುತ್ತಾರೆ. ಡಿಕೆ ಶಿವಕುಮಾರ್ ದಾಖಲೆಗಳನ್ನು ತಿದ್ದಲು ಹೇಗೆ ಸಾಧ್ಯ. ಹಣ್ಣನ್ನು ನೋಡಿ ನಾಯಿ ಬಾಲ ಅಲ್ಲಾಡಿಸಯುವಂತೆ ಈ ಪ್ರಕರಣ ಆಗಿದೆ. ಮರದ ಮೇಲೆ ಹಣ್ಣು ನೇತಾಡುತ್ತಿದೆ. ಕೆಳಗೆ ನಾಯಿ ನಿಂತಿದ್ದು, ಇದೊಂದು ತ್ರಿಶಂಕು ಪರಿಸ್ಥಿತಿ. ಇಡಿ ಮಾಡುತ್ತಿರುವ ಮೌಖಿಕ, ಊಹಾತ್ಮಕ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ.

DKSHI Daughter Aishwarya Shivakumar 1

2017ರಲ್ಲಿ 1960-70ರ ಆಸ್ತಿಯ ಖರೀದಿಯನ್ನು ಕೆದಕಲಾಗುತ್ತಿದೆ. ಅವರ ತಂದೆಯವರ ಆಸ್ತಿಗೆ ಡಿ.ಕೆ.ಶಿವಕುಮಾರ್ ಹೇಗೆ ಉತ್ತರ ನೀಡಬೇಕು. 2017ರಲ್ಲಿ ಐಟಿ ಪ್ರಕರಣ ದಾಖಲು ಮಾಡಿಕೊಂಡು 2019ರಲ್ಲಿ ಸಮನ್ಸ್ ನೀಡುತ್ತದೆ. ಇಡಿಗೆ ತನಿಖೆ ಮಾಡಲು ಎರಡು ವರ್ಷ ಬೇಕಾಯ್ತಾ? ಎಂದು ಪ್ರಶ್ನೆ ಮಾಡಿದರು. ಇಡಿಗೆ ತನಿಖೆ ಮಾಡಲು ಎರಡು ವರ್ಷ  ಬೇಕಾ? ಇದರಿಂದ ಇಡಿ ಪೂರ್ವಾಗ್ರಹ ಪೀಡಿತ ಎಂಬುದು ಗೊತ್ತಾಗುತ್ತದೆ. ಇಡಿ ಅಧಿಕಾರಿಗಳು ಎರಡು ವರ್ಷ ಏನು ಮಾಡಿದ್ರು, 18 ದಿನ ಏನು ವಿಚಾರಣೆ ಮಾಡಿದರು ಎಂಬುದನ್ನು ಉತ್ತರಿಸಬೇಕು. ಇದು ಪ್ರಜಾಪ್ರಭುತ್ವದ ಅಂಗ ಎಂಬ ಅನುಮಾನ ಮೂಡುತ್ತಿದೆ.

ಕ್ರಿಮಿನಲ್ ಪ್ರಕರಣಗಳಿಗೆ ಪೂರ್ವ ಅನ್ವಯ ಗುಣಗಳಿರುವುದಿಲ್ಲ. ಪ್ರಕರಣ ನಡೆದಾಗಲೇ ತನಿಖೆ ನಡೆಸಿ ಶಿಕ್ಷೆ ನೀಡಬೇಕು. ತಪ್ಪು ನಡೆದಾಗ ಚಾಲ್ತಿಯಲ್ಲಿದ್ದ ಕಾಯ್ದೆ ಪ್ರಕಾರವೇ ಶಿಕ್ಷೆ, ದಂಡ ವಿಧಿಸಬೇಕೆ ಹೊರತು ಆ ಬಳಿಕ ಜಾರಿಗೆ ಬಂದ ಕಾಯ್ದೆ, ನಿಯಮದಡಿಯಲ್ಲ. ಒಂದು ಮರವೇ ಘೋಷಿತ ಅಪರಾಧಿಯಾದರೇ ಅದರ ಎಲ್ಲ ಟೊಂಗೆ ಹಣ್ಣುಗಳು ಅಕ್ರಮ ಫಲಗಳಾ? ಹಣ್ಣು ಮೇಲೆ ಕೆಳಗೆ ಮಧ್ಯ ಬುಡದಲ್ಲಿದ್ರು ಅಕ್ರಮವೇ? ಅದರೆ ಮರ ಎಲ್ಲಿದೆ ಎಂದು ತೋರಿಸಬೇಕು. ಇಡಿ ಈಗ ಇಲ್ಲದ ಮರದಿಂದ ಹಣ್ಣು ತಂದಿರುವ ಆರೋಪ ಮಾಡುತ್ತಿದೆ.

DKSHI Daughter Aishwarya Shivakumar 1 copy

ತಪ್ಪನ್ನು ಪತ್ತೆ ಮಾಡಲೇಬೇಕು ಎಂದು ಇಡಿ ಅಧಿಕಾರಿಗಳು ಪುರ್ವಾಗ್ರಹಪೀಡಿತವಾದಂತಿದೆ. ಎಲ್ಲವೂ ಕಪ್ಪು ಹಣ ಎಂಬುದು ತಪ್ಪು, ಕೆಲವು ವ್ಯವಹಾರ ನಗದಿನಲ್ಲಿ ನಡೆಯುತ್ತದೆ. 1960-70ರ ಕಾಲದಲ್ಲಿ ಡಿ.ಕೆ.ಶಿವಕುಮಾರ್ ತಂದೆ ನಡೆಸಿರುವ ವ್ಯವಹಾರಗಳಿಗೆ ದಾಖಲೆ ನೀಡಲು ಸಾಧ್ಯವಿಲ್ಲ. ಎಲ್ಲವೂ ಕಪ್ಪು ಹಣ ಅಲ್ಲ. ಐಟಿ ಅಡಿ ಶಿಕ್ಷೆಯಾಗುವ ಕೇಸ್ ಗೆ ದೇಶದ ಬುಡ ಅಲುಗಾಡುವ ಉದಾಹರಣೆಗೆ ಕೊಡಲಾಗುತ್ತಿದೆ. ಹಫ್ತಾ ವಸೂಲಿಯು ದರೋಡೆಯಡಿ ಪರಿಗಣಿತವಾಗುತ್ತದೆ. ಅದು ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಬರುತ್ತದೆ. ಹಣವನ್ನು ಒಬ್ಬರಿಂದ ಒಬ್ಬರಿಗೆ ನೀಡಿದರೆ ಅದು ವರ್ಗಾವಣೆ. ಜೇಬುಗಳ್ಳತನವನ್ನು ಹವಾಲಾ ಪ್ರಕರಣದಲ್ಲಿ ಸೇರಿಸುವ ಪ್ರಯತ್ನ ಮಾಡಲಾಗುತ್ತಿದೆ. ಕಿಸೆಕಳ್ಳತನಕ್ಕೆ ಇಲ್ಲಸಲ್ಲದ ಬಣ್ಣ ಬಳಿಯಲಾಗುತ್ತಿದೆ. ಆದಾಯ ತೆರಿಗೆ ಕಾಯ್ದೆ ಅಡಿ ಕೇವಲ ಸಕ್ರಮ ಹಣವನ್ನು ಪರಿಗಣಿಸಲಾಗುತ್ತದೆ ಎಂಬುದೂ ಸರಿಯಲ್ಲ.

ಸೆಕ್ಷನ್ 45ನ್ನು ಈ ಪ್ರಕರಣದಲ್ಲಿ ಪರಿಗಣಿಸಬಾರದು. ಕಕ್ಷಿದಾರರರಿಗೆ ಜಾಮೀನು ನೀಡಲೇಬೇಕು. ಈ ವೇಳೆ ಸಿಂಘ್ವಿ ಅವರು ಕೆಲವು ಹಳೆ ಆದೇಶಗಳನ್ನು ಪ್ರಸ್ತಾಪ ಮಾಡಿದರು. ಸೆಕ್ಷನ್ 45ಕ್ಕೆ ತಿದ್ದುಪಡಿಯನ್ನು ತರಲಾಗಿದೆ. ಹಾಗಾಗಿ ತಿದ್ದುಪಡಿಯನ್ನು ಪರಿಗಣಿಸಬೇಕು. ಇಲ್ಲದ ಆರೋಪಗಳನ್ನು ನನ್ನ ಕಕ್ಷಿದಾರರ ಮೇಲೆ ಹೊರಿಸಿ ವೈಭವೀಕರಿಸಲಾಗುತ್ತಿದೆ.

DKSHI DHL 1 1

ಸೆಕ್ಷನ್ 14ಕ್ಕೆ ತಿದ್ದುಪಡಿ ತಂದಿದೆ. ತಿದ್ದುಪಡಿ ಬಳಿಕ ಅದನ್ನ ಸ್ಥಗಿತಗೊಳಿಸಿದಂತಾಗಿದ್ದು, ಪಿಎಂಎಲ್‍ಎ ಆಕ್ಟ್ ಅಡಿ ಇದನ್ನು ಹೇಗೆ ಪರಿಗಣಿಸುವುದು. ಸೆಕ್ಷನ್ 45 ತಿದ್ದುಪಡಿ ಬಗೆಗಿನ ಹಳೆ ಜಡ್ಜಮೆಂಟ್ ಬಗ್ಗಗೆ ವಿವರಣೆ ನೀಡಲಾಯ್ತು. ಹಾಗಾಗಿ ಈ ಸೆಕ್ಷನ್ ಅಡಿ ಪ್ರಕರಣ ದಾಖಲಾದರೂ ಷರತ್ತು ವಿಧಿಸಕೂಡದು ಎಂದೇ ಹೇಳಬೇಕಾಗುತ್ತದೆ. ಈ ಸೆಕ್ಷನ್ ಅನ್ನು ಒತ್ತಾಯಪೂರ್ವಕವಾಗಿ ಹೇರುವುದರ ಉದ್ದೇಶವೇನು ಎಂದು ಇಡಿ ಸ್ಪಷ್ಟಪಡಿಸಬೇಕಿದೆ. ಪ್ರಾಸಿಕ್ಯುಷನ್ ಇದನ್ನು ಸಮರ್ಥಿಸಿ ವಾದ ಮಂಡಿಸಿರುವುದು ಆಶ್ಚರ್ಯಕರ. ಜಾರಿಯೇ ಇಲ್ಲದ ಕೆಲವು ಕಾನೂನುಗಳ ಕುರಿತು ಅವರು ವಾದ ಮಂಡಿಸುತ್ತಿದ್ದಾರೆ.

41 ಲಕ್ಷ ರೂ. ಮಾತ್ರ ಆರೋಪಿಯಿಂದ ವಶಪಡಿಸಿಕೊಂಡಿದೆ. ರಾಜೇಂದ್ರ ಎಂಬವರಿಂದ ಡೈರಿ ವಶಪಡಿಸಿಕೊಂಡಿದೆ. ರಾಜೇಂದ್ರಗೂ ಡಿಕೆಶಿಗೂ ಸಂಬಂಧ ಇಲ್ಲ. ರಾಜೇಂದ್ರ ಶರ್ಮಾ ಟ್ರಾವೆಲ್ಸ್ ಗೆ ಸಂಬಂಧಿಸಿದ ವ್ಯಕ್ತಿಯಾಗಿದ್ದಾರೆ. ಇನ್ನು ಸಚಿನ್ ನಾರಾಯಣ್ 30 ಲಿಕ್ಕರ್ ಶಾಪ್ ಹೊಂದಿದ್ದು, ಅಧಿಕೃತವಾಗಿ ಅವರೆಲ್ಲ ನಗದಿನಲ್ಲಿ ವ್ಯವಹಾರ ಮಾಡುತ್ತಾರೆ. ಇವರ ಬಳಿಕ ಸಿಕ್ಕ ಹಣಕ್ಕೂ ದಾಖಲೆಗೂ ಡಿಕೆಶಿಗೂ ಸಂಬಂಧ ಇಲ್ಲ. ಲೂಸ್ ಪೇಪರ್ಸ್ ಗೂ ಸಂಬಂಧ ಇಲ್ಲ. ಈ ವೇಳೆ ಕೋರ್ಟ್‍ಗೆ ಕೆಲ ದಾಖಲೆಗಳನ್ನ ಸಿಂಘ್ವಿ ನೀಡಿದರು.

DKShi Main

ಎಲ್ಲವೂ ಆಸ್ತಿ ಇದೆ, ಮಾರ್ಕೆಟ್ ವ್ಯಾಲ್ಯೂ ಮಾತ್ರ ಜಾಸ್ತಿಯಾಗಿದೆ. ಇದನ್ನ ಅಕ್ರಮ ಹಣ ವರ್ಗಾವಣೆ ಎನ್ನಲಾಗದು. ಡಿಕೆಶಿಯವರ ಪುತ್ರಿ ಐಶ್ವರ್ಯರ ಮೇಲೆ ಸುಮ್ಮನೆ ಆರೋಪ ಮಾಡಿದೆ. 40 ಕೋಟಿ ವಿಜಯಾ ಬ್ಯಾಂಕ್ ಸಾಲ ಪಡೆದಿದೆ. ಆಕೆಗೆ ಮೂವರು ತಲಾ 1- ಕೋಟಿ ಸಾಲ ನೀಡಿದ್ದಾರೆ. ರಾಜೇಂದ್ರ ಸುನೀಲ್ ಶರ್ಮಾ,  ಸಚಿನ್  ನಾರಾಯಣ್ ಎಲ್ಲರ ಖಾತೆ ಆರೋಪಿಯದ್ದು ಅಂದ್ರೆ ಹೇಗಾಗುತ್ತದೆ. 20 ಖಾತೆಯ ಮಾಹಿತಿ ನೀಡಿದೆ. ಎಲ್ಲರ ಖಾತೆಗಳನ್ನ ಡಿಕೆ ಶಿವಕುಮಾರ್ ಅವರದ್ದು ಎಂದು ಬಿಂಬಿಸಲಾಗಿದೆ. ಸಂಬಂಧಿಕರ ಖಾತೆಗಳನ್ನ ಡಿಕೆಶಿಯವರಲ್ಲಿ ಸೇರಿಸಲಾಗಿದೆ ಎಂದು ಅಭಿಷೇಕ್ ಮನು ಸಿಂಘ್ವಿ ತಮ್ಮ ವಾದ ಮುಗಿಸಿದರು.

ಸಿಂಘ್ವಿ ಅವರ ವಾದದ ಬಳಿಕ ಡಿಕೆಶಿ ಪರ ಮತ್ತೋರ್ವ ವಕೀಲರಾದ ಮುಕುಲ್ ರೋಹ್ಟಗಿ ತಮ್ಮ ವಾದ ಆರಂಭಿಸಿ, ನಮ್ಮ ಕಕ್ಷಿದಾರ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಗೌರವಾನ್ವಿತ ವ್ಯಕ್ತಿ ಜನಪ್ರತಿನಿಧಿಯಾಗಿದ್ದಾರೆ. ಕಕ್ಷಿದಾರರ ಮನೆಯಲ್ಲಿ ಕೇವಲ 41 ಲಕ್ಷ ರೂ. ಮಾತ್ರ ದೊರಕಿದೆ. ಈ ವೇಳೆ ರೋಹ್ಟಗಿ ಸುಪ್ರೀಂ ಕೋರ್ಟಿನ ತೀರ್ಪುಗಳನ್ನು ಓದಿದರು. ಕಕ್ಷಿದಾರರ ಮನೆಯಲ್ಲಿ ವಶಪಡಿಸಿಕೊಂಡಿರುವ 41 ಲಕ್ಷ ರೂ.ಯಿಂದ ರಾಷ್ಟ್ರದ ಅರ್ಥಿಕತೆ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದರು.

TAGGED:bailcongresscourtDK Shivakumarenforcement directorateTihar Jailಅಭಿಷೇಕ್ ಮನು ಸಿಂಘ್ವಿಜಾರಿ ನಿರ್ದೇಶನಾಲಯಡಿ.ಕೆ.ಶಿವಕುಮಾರ್
Share This Article
Facebook Whatsapp Whatsapp Telegram

You Might Also Like

basanagouda patil yatnal 1
Districts

ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ತುಂಬಿ ತುಳುಕುತ್ತಿದ್ದು, ಸದ್ಯ ಐಸಿಯುಲ್ಲಿದೆ – ಯತ್ನಾಳ್

Public TV
By Public TV
2 minutes ago
Fishermens boat
Latest

ಅರಬ್ಬಿ ಸಮುದ್ರದಲ್ಲಿ ಮೀನುಗಾರರ ಬೋಟ್ ವಶಕ್ಕೆ – ನೌಕಾದಳದಿಂದ ಆರು ಮೀನುಗಾರರ ಬಂಧನ

Public TV
By Public TV
15 minutes ago
Aamir Khan Sitaare Zameen Par premiere Salman Khans bodyguard stop the person Viral Video
Bollywood

ಸ್ಟೆಪ್ ಹತ್ತಿ ಓಡೋಡಿ ಬಂದ – ಅಪರಿಚಿತನನ್ನು ನೋಡಿ ಸಲ್ಲು ಶಾಕ್‌!

Public TV
By Public TV
33 minutes ago
Himachal Pradesh rain
Latest

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ – ಹಲವೆಡೆ ಭೂಕುಸಿತ

Public TV
By Public TV
35 minutes ago
Amit Shah BGS Medical College Adichunchanagiri Mutt 1
Bengaluru City

ಬಿಜಿಎಸ್ ಮೆಡಿಕಲ್ ಕಾಲೇಜು ಆಸ್ಪತ್ರೆ ಉದ್ಘಾಟಿಸಿದ ಅಮಿತ್ ಶಾ – ಶ್ರೀಗಳ ಸೇವೆಗೆ ಶ್ಲಾಘನೆ

Public TV
By Public TV
38 minutes ago
Rina Sindhu
Crime

ಆಸ್ತಿಯ ದುರಾಸೆ, ರೋಗಿಯೊಂದಿಗೇ ಚಕ್ಕಂದ – ʻಪಾರಿತೋಷʼನ ಪ್ರೇಮಕ್ಕೆ ಪತಿಯನ್ನೇ ಕೊಂದ ಫಿಸಿಯೋಥೆರಪಿಸ್ಟ್‌ ಪತ್ನಿ

Public TV
By Public TV
43 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?