Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Districts

ಜೆಡಿಎಸ್‍ನ 20 ಶಾಸಕರು ರಾಜೀನಾಮೆಗೆ ಸಿದ್ಧ

Public TV
Last updated: September 14, 2019 5:46 pm
Public TV
Share
3 Min Read
narayana gowda a
SHARE

– ಕಣ್ಣೀರಿಡುತ್ತಾ ಅನರ್ಹ ಶಾಸಕ ನಾರಾಯಣಗೌಡ ಗುಡುಗು
– ಡಿಕೆಶಿ ಜೈಲಿಗೆ ಹೋಗಲು ಗೌಡರೇ ಕಾರಣ

ಮಂಡ್ಯ: ಮೈತ್ರಿ ಸರ್ಕಾರ ಉರುಳಿದ ಬಳಿಕ ದೋಸ್ತಿ ಪಕ್ಷ ಜೆಡಿಎಸ್‍ನಲ್ಲಿ ಎಲ್ಲವೂ ಸರಿ ಇಲ್ಲವೇ ಎಂಬ ಅನುಮಾನ ವ್ಯಕ್ತವಾಗಿತ್ತು. ಅಲ್ಲದೇ ಜೆಡಿಎಸ್ ಕೆಲ ಶಾಸಕರು ರಾಜೀನಾಮೆ ನೀಡಿ ಬಿಜೆಪಿಗೆ ಸೇರಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಈ ಎಲ್ಲದರ ನಡುವೆಯೇ ಜೆಡಿಎಸ್ ರೆಬೆಲ್ ಶಾಸಕ ನಾರಾಯಣಗೌಡ ಅವರು ಜೆಡಿಎಸ್‍ನ 20 ಶಾಸಕರು ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್‍ನ 20 ಶಾಸಕರು ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ. ಪಕ್ಷದಲ್ಲಿ ಇಷೆಲ್ಲಾ ನಡೆಯಲು ಮಾಜಿ ಸಚಿವ ರೇವಣ್ಣ ಅವರೇ ಕಾರಣ. ಈ ಸಂದರ್ಭದಲ್ಲಿ ರಾಜೀನಾಮೆ ನೀಡಲು ಮುಂದಾಗಿರುವ ಶಾಸಕರ ಹೆಸರು ಹೇಳಲು ಸಾಧ್ಯವಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ ಎಂಬುವುದು ಇದರಿಂದಲೇ ಗೊತ್ತಾಗುತ್ತದೆ. ನನ್ನಂತೆ ಇನ್ನು 20 ಶಾಸಕರು ಇದ್ದು, ಈ ಬಗ್ಗೆ ಸೂಕ್ಷ್ಮವಾಗಿ ಗಮನಹರಿಸಲು ರೇವಣ್ಣ ಅವರಿಗೆ ಸಲಹೆ ನೀಡುತ್ತೇನೆ. ನಾನು ಶಾಸಕನಾಗಿದ್ದಾಗ ರೇವಣ್ಣ ಅವರ ಜೊತೆ ಕೆಲಸ ಮಾಡಿಸಿಕೊಳ್ಳಲು ಹೋಗಿದ್ದೆ. ಆಗ ನನಗೆ ದನಕ್ಕೆ ಬೈಯ್ಯುವ ಹಾಗೆ ಬೈದಿದ್ದಾರೆ. ಅಭಿವೃದ್ಧಿ ಕೆಲಸ ಮಾಡಿಸಿಕೊಳ್ಳಲು ಹೋದಾಗ ಹೀಗೆ ಮಾಡಿದ್ದರು. ಅಲ್ಲದೇ ವಿಧಾನಸೌಧದಲ್ಲಿ ನನ್ನ ಬೈದ ಬಾಗಿಲು ಹಾಕಿಕೊಂಡರು. ಇದರಿಂದ ನನಗೆ ನೋವಾಗಿತ್ತು. ಮೈತ್ರಿ ಸರ್ಕಾರ ಬೀಳಲು ಮೂಲ ಕಾರಣ ರೇವಣ್ಣ ಎಂದರು.

HD REVANNA

ನಾನು ಆ ಪಕ್ಷದಿಂದಲೇ ಶಾಸಕನಾಗಿ ಆಯ್ಕೆಯಾಗಿದ್ದ ಕಾರಣ ನಾನು ಈ ಸಲಹೆ ನೀಡುತ್ತಿದ್ದೇನೆ. ಜಿಟಿ ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದಂತೆ 20 ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ. ನನ್ನ ಬಗ್ಗೆ ಹೀನಾಮಾನವಾಗಿ ಮೊನ್ನೆ ಮಾತನಾಡಿದ್ದಾರೆ. ಆದರೆ ನನಗೆ ಕಳೆದ 5 ವರ್ಷಗಳಿಂದ ನೋವು ಕೊಟ್ಟಿದ್ದಾರೆ. ಕಳೆದ ಚುನಾವಣೆಯಲ್ಲಿಯೂ ಬಿ ಫಾರಂ ನೀಡಲು ಸಾಕಷ್ಟು ನೋವು ಕೊಟ್ಟಿದ್ದರು. ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಅವರು ಸೇರಿದಂತೆ ಎಚ್‍ಡಿಡಿ ಕುಟುಂಬದ ಹೆಣ್ಣು ಮಕ್ಕಳು ನನಗೆ ನೋವು ಕೊಟ್ಟಿದ್ದಾರೆ. ಈ ಎಲ್ಲಾ ನೋವು ನುಂಗಿಕೊಂಡು ಅವರೊಂದಿಗೆ ಇದ್ದೆ.

ದೇವೇಗೌಡರು ನಾನು ಒಕ್ಕಲಿಗನ ಹೊಟ್ಟೆಯಲ್ಲಿ ಹುಟ್ಟಿದ್ದೆ ತಪ್ಪಾಯಿತು. ನಾನು ಮುಸ್ಲಿಮರ ಹೊಟ್ಟೆಯಲ್ಲಿ ಹುಟ್ಟಬೇಕಿತ್ತು ದೇವೇಗೌಡರು ಹೇಳುತ್ತಾರೆ. ಆದರೆ ಒಂದು ಮರಿಬೇಡಿ, ನಿಮ್ಮನ್ನ ದೆಹಲಿಯಲ್ಲಿ ಕೂರಿಸಿದ್ದೇ ಒಕ್ಕಲಿಗರು. ಇದ್ದನ್ನು ನೀವೂ ಮರೆಯಬಾರದು. ನೀವು ಈ ಹೇಳಿಕೆ ನೀಡಿದ ಪ್ರತಿ ಬಾರಿ ನಮ್ಮ ಹೊಟ್ಟೆಯಲ್ಲಿ ಬೆಂಕಿ ಬಿದ್ದ ರೀತಿ ಆಗಿದೆ ಎಂದರು.

DK Shivakumar 1

ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಜೈಲಿಗೆ ಕಳುಹಿಸಿದ್ದು, ಸಿದ್ದರಾಮಯ್ಯ ಅಥವಾ ಬಿಜೆಪಿ ಅವರು ಅಲ್ಲ. ಕಬ್ಬಿಣವನ್ನು ಕಬ್ಬಿಣವೇ ಕತ್ತರಿಸಿದೆ. ಸಮುದಾಯ ಬೆಳೆಯಬಾರದು ಎಂದು ಡಿಕೆಶಿ ಅವರಿಗೆ ಈ ರೀತಿ ಮಾಡಿದ್ದಾರೆ. ಆರು ಏಳು ವರ್ಷದಿಂದ ಡಿ.ಕೆ.ಶಿವಕುಮಾರ್ ಹಾಗೂ ಎಸ್.ಎಂ.ಕೃಷ್ಣ ಅಳಿಯ ಸಿದ್ಧಾರ್ಥ್ ಅವರ ಮೇಲೆ ಹುನ್ನಾರ ನಡೆಯುತ್ತಿತ್ತು. ಇಬ್ಬರನ್ನೂ ಜೈಲಿಗೆ ಕಳಿಸಬೇಕು ಅಂದು ಕೊಂಡಿದ್ದರು. ಈ ಕುರಿತ ಎಲ್ಲಾ ಸತ್ಯಾಂಶಗಳು ಸಮಯ ಬಂದಾಗ ಇದು ಹೊರಗೆ ಬರುತ್ತೆ ಎಂದು ಮಾರ್ಮಿಕವಾಗಿ ನುಡಿದರು.

ಸುದ್ದಿಗೋಷ್ಠಿ ನಡೆಸುವ ವೇಳೆ ಭಾವನಾತ್ಮಕವಾಗಿ ಮಾತನಾಡಿದ ನಾರಾಯಣಗೌಡರು, ಮೈತ್ರಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ 800 ಕೋಟಿ ರೂ. ನೀಡಲಾಗಿದೆ ಎಂದು ಬರಿ ಘೋಷಣೆ ಮಾತ್ರ ಮಾಡಿದರು. ಆದರೆ ಸಿಎಂ ಯಾವುದೇ ಹಣ ಬಿಡುಗಡೆ ಮಾಡಿಲ್ಲ. ನಾವು ಸಮಸ್ಯೆ ಹೇಳಿಕೊಳ್ಳಲು ಸಿಎಂ ಬಳಿ ತೆರಳಿದರೆ ಕಣ್ಣು ಹೊಡೆದು ನಾಳೆ ಬರುವಂತೆ ಹೇಳುತ್ತಿದ್ದರೇ ವಿನಃ ಸಮಸ್ಯೆ ಬಗೆಹರಿಸುತ್ತಿರಲಿಲ್ಲ. ಎಚ್‍ಡಿಕೆ ಹಾಗೂ ರೇವಣ್ಣ ಇಬ್ಬರು ಕುಟುಂಬ ಪ್ರಿಯರಾಗಿ ಅಭಿವೃದ್ಧಿಯನ್ನು ಮರೆತರು ಎಂದು ಆರೋಪಿಸಿದರು.

HDD

ಯಡಿಯೂರಪ್ಪ ಅವರು ಹೇಳಿದ ಮಾತಿಗೆ ನಡೆದುಕೊಳ್ಳುತ್ತಾರೆ. ಹೇಳಿದ ಕೆಲಸ ಮಾಡುತ್ತಾರೆ. ಇದ್ದಕ್ಕಾಗಿ ನಾನು ಯಡಿಯೂರಪ್ಪ ಅವರ ಮನೆಗೆ ಹೋಗುತ್ತಿದ್ದೇನೆ ಅಷ್ಟೇ. ಆದರೆ ನೀವು ಎಷ್ಟೇ ನೋವು ಕೊಟ್ಟರು ನಾನು ಕೆ.ಆರ್.ಪೇಟೆ ತಾಲೂಕು ಬಿಟ್ಟು ಹೋಗಲ್ಲ. ಇನ್ನೊಬ್ಬ ಮಗಳ ಮದುವೆ ಬಾಕಿ ಇದ್ದು, ಈ ಕಾರ್ಯವನ್ನು ಮಾಡಿ ಇಲ್ಲೇ ಪ್ರಾಣ ಬಿಡುತ್ತೇನೆ ಎಂದು ಭಾವುಕರಾದರು.

ಹಣ ಪಡೆದಿಲ್ಲ: ನಾನು ಬಿಜೆಪಿ ಜೊತೆ ಹಣ ತೆಗೆದುಕೊಂಡಿದ್ದಾರೆ ಎಂದು ಆರೋಪಿಸುತ್ತಾರೆ. ಆದರೆ ಈ ಹಿಂದೆ ಅವರು ಬಿಜೆಪಿ ಜೊತೆ ಸರ್ಕಾರ ಮಾಡಿದಾಗ ಹಣ ತೆಗೆದುಕೊಂಡಿದ್ದಾರೆಯೇ ಎಂದು ಉತ್ತರಿಸಬೇಕು. ಅವರು ಆಗ ಹಣ ಪಡೆದಿದ್ದರೆ. ಈಗ ನಾನು ತಗೊಂಡ ರೀತಿಯಾಗುತ್ತದೆ. ನನಗೆ ಮಾತ್ರವಲ್ಲದೇ ಪುಟ್ಟರಾಜ ಅಣ್ಣನಿಗೂ ನೋವು ಉಂಟುಮಾಡಿದ್ದಾರೆ. ನಾನು ಹೇಳಿಕೊಳ್ಳುತ್ತಿದ್ದೇನೆ, ಅವರು ಹೇಳಿಕೊಳ್ಳುತ್ತಿಲ್ಲ. ಅವರು ಎಲ್ಲಾ ನೋವನ್ನು ನುಂಗಿಕೊಂಡು ಓಡಾಡುತ್ತಿದ್ದಾರೆ ಎಂದರು.

TAGGED:HD Deve Gowdahd kumaraswamyHD Revannajdsmandyanarayana gowdaPublic TVಅನರ್ಹ ಶಾಸಕ ನಾರಾಯಣಗೌಡಎಚ್‍ಡಿ ಕುಮಾರಸ್ವಾಮಿಎಚ್‍ಡಿ ದೇವೇಗೌಡಎಚ್‍ಡಿ ರೇವಣ್ಣಜೆಡಿಎಸ್ಪಬ್ಲಿಕ್ ಟಿವಿಮಂಡ್ಯ
Share This Article
Facebook Whatsapp Whatsapp Telegram

Cinema Updates

Kamal Haasan
ಕಮಲ್‌ ಹಾಸನ್‌ಗೆ ಮತ್ತೆ ಶಾಕ್‌ – ತುರ್ತು ವಿಚಾರಣೆ ನಡೆಸಲ್ಲ ಎಂದ ಸುಪ್ರೀಂ ಕೋರ್ಟ್‌
6 hours ago
Chitradurga Renukaswamy Father
ಮಗನ ಸಾವಿನ ನೋವು ನಿರಂತರವಾಗಿ ಕಾಡ್ತಿದೆ – ಮೃತ ರೇಣುಕಾಸ್ವಾಮಿ ತಂದೆ
1 day ago
virat kohli sumalatha ambareesh
ಕಾಲ್ತುಳಿತ ಪ್ರಕರಣದಲ್ಲಿ ಕೊಹ್ಲಿ ವಿರುದ್ಧ ಮಾತನಾಡುವುದು ಮೂರ್ಖತನ: ಸುಮಲತಾ ಬೇಸರ
1 day ago
madenur manu
ಮಡೆನೂರು ಮನು ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್
2 days ago

You Might Also Like

Kodagu Home
Districts

`ಪಬ್ಲಿಕ್ ಟಿವಿ’ ಮನವಿಗೆ ಮಿಡಿದ ಹೃದಯ – ರುಂಡ ಕತ್ತರಿಸಿದ ಬಾಲಕಿ ಕುಟುಂಬಕ್ಕೆ ಹೊಸ ಮನೆ ಹಸ್ತಾಂತರಿಸಿದ ಮಂತರ್ ಗೌಡ

Public TV
By Public TV
6 minutes ago
rapido
Latest

ಫುಡ್ ಡೆಲಿವರಿಗೂ ಕಾಲಿಡ್ತಿದೆ Rapido – ಸ್ವಿಗ್ಗಿ, ಝೊಮ್ಯಾಟೋಗಿಂತಲೂ ಕಡಿಮೆ ಕಮಿಷನ್

Public TV
By Public TV
19 minutes ago
kea
Bengaluru City

DCET ಜೂ.10ರಿಂದ 13ರವರೆಗೆ ದಾಖಲಾತಿ ಪರಿಶೀಲನೆ – KEA

Public TV
By Public TV
37 minutes ago
Meghalaya Honeymoon 7
Crime

Honeymoon Murder | ಕಾಂಟ್ರ್ಯಾಕ್ಟ್‌ ಕಿಲ್ಲರ್ಸ್‌.. ಫೋನ್‌ಕಾಲ್‌ನಲ್ಲೇ ಪಿನ್‌ ಟು ಪಿನ್‌ ಅಪ್ಡೇಟ್‌ – ಕೊಲೆ ರಹಸ್ಯ ಬಯಲಾಗಿದ್ದೇ ರೋಚಕ

Public TV
By Public TV
51 minutes ago
Chinnaswamy RCB Stampede 1
Bengaluru City

ಮುಂಬೈ ವಿಕ್ಟರಿ ಪರೇಡ್‌ ಉಲ್ಲೇಖಿಸಿ ಕಾಲ್ತುಳಿತಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂದ ಡಿಎನ್‌ಎ

Public TV
By Public TV
1 hour ago
Lover Killed 5
Bengaluru City

ಜಾತ್ರೆಯಲ್ಲಿ ಲವ್‌… ಓಯೋ ರೂಮಲ್ಲಿ ಕೆಲಸ ಮುಗಿದ್ಮೇಲೆ ಆಂಟಿಯನ್ನ ಇರಿದು ಕೊಂದ ಟೆಕ್ಕಿ

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?