ಸುಮಲತಾರನ್ನ ಭೇಟಿಯಾದ ಮೊದಲ ಮತ ಚಲಾಯಿಸಿದ್ದ ಯೋಧ

Public TV
1 Min Read
mnd suma meet yodha

ಮಂಡ್ಯ: ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರ ಪರ ಮತ ಚಲಾಯಿಸಿ ಫೋಟೋ ಹಂಚಿಕೊಂಡಿದ್ದ ಯೋಧ ರಾಜನಾಯಕ್ ಇಂದು ಸುಮಲತಾರನ್ನ ಭೇಟಿ ಮಾಡಿದ್ದಾರೆ.

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಹಕ್ಕಿಹೆಬ್ಬಾಳು ಗ್ರಾಮದವರಾದ ರಾಜನಾಯಕ್ ಅವರು ಅಂಚೆ ಮತದಾನ ಮಾಡಿ ಸುಮಲತಾ ಅವರಿಗೆ ಮತ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದರು. ಈ ಫೋಟೋ ಸಖತ್ ವೈರಲ್ ಆಗಿತ್ತು.

mnd suma meet yodha 2

ಇಂದು ಸುಮಲತಾರನ್ನ ಮಂಡ್ಯದ ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿ ಶುಭ ಕೋರಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುಮಲತಾ ಅವರು ಗೆಲುವು ಪಡೆದಿರುವುದು ಸಂತಸ ತಂದಿದೆ. ಅವರಿಗೆ ಶುಭ ಕೋರಲು ಇಂದು ಆಗಮಿಸಿದ್ದೆ. ನಾನು ಅಂಬಿ ಅವರ ಅಭಿಮಾನಿಯಾಗಿದ್ದೆ. ಈಗ ಸುಮಲತಾ ಅವರಿಗೆ ಬೆಂಬಲ ನೀಡಿದ್ದೆ. ಇದೇ ಮೊದಲ ಬಾರಿಗೆ ಅವರನ್ನು ಭೇಟಿ ಮಾಡಿದೆ. ಅವರ ಪಕ್ಕ ಕುಳಿತು ಊಟ ಮಾಡಿದ್ದು, ನನಗೆ ಸ್ಮರಣಿಯ. ಭೇಟಿ ವೇಳೆ ಅವರಿಗೆ ತೆಂಗಿನ ಸಸಿಯನ್ನ ನೀಡಿದ್ದು, ಅವರು ನನಗೆ ಮತ್ತೊಂದು ಸಸಿ ನೀಡಿದ್ದಾರೆ. ಅವರ ನೆನಪಿನಲ್ಲೇ ಇದನ್ನು ತೋಟದಲ್ಲಿ ನಾಟಿ ಮಾಡುತ್ತೇನೆ ಎಂದರು.

sumla

 

ಯೋಧ ರಾಜನಾಯಕ್ ಸುಮಲತಾ ಅವರಿಗೆ ಹಾಕಿದ ಮತ ಮತ ಏಣಿಕೆ ವೇಳೆ ಅಸಿಂಧು ಆಗಿತ್ತು. ಮತದಾನ ಗೌಪ್ಯತೆ ಬಹಿರಂಗವಾದ ಹಿನ್ನೆಲೆಯಲ್ಲಿ ಅವರ ಮತ ಅಸಿಂಧು ಆಗಿತ್ತು. ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ರಾಜನಾಯಕ್, ನನಗೆ ಈ ಬಗ್ಗೆ ಮಾಹಿತಿ ಇರಲಿಲ್ಲ. ಆದ್ದರಿಂದ ಫೋಟೋ ಶೇರ್ ಮಾಡಿದ್ದೆ. ನನ್ನ ಸಂತೋಷಕ್ಕಾಗಿ ನಾನು ಇದನ್ನು ಮಾಡಿದ್ದೆ ಅಷ್ಟೇ ಎಂದು ಸ್ಪಷ್ಟಪಡಿಸಿದರು. ರಜೆಯ ಹಿನ್ನೆಲೆಯಲ್ಲಿ ರಾಜನಾಯಕ್ ಗ್ರಾಮಕ್ಕೆ ಆಗಮಿಸಿದ್ದು, ಈ ಸಂದರ್ಭದಲ್ಲಿ ಸುಮಲತಾರನ್ನು ಭೇಟಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *