ನನ್ನಿಂದ್ಲೇ ಪ್ರೇರಣೆ ಪಡೆದು ಮೈತ್ರಿ ನಾಯಕರು ಅಳ್ತಿದ್ದಾರೆ- ನಟಿ ಶೃತಿ

Public TV
1 Min Read
shruthi

ಹುಬ್ಬಳ್ಳಿ: ನನ್ನಿಂದಲೇ ಪ್ರೇರಣೆಗೊಂದು ಇಂದು ಅನೇಕರು ಅಳುತ್ತಿದ್ದಾರೆ ಎಂದು ಮೈತ್ರಿ ಸರ್ಕಾರದ ವಿರುದ್ಧ ನಟಿ ಶೃತಿ ಕಿಡಿಕಾರಿದ್ದಾರೆ.

ಕುಂದಗೋಳ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಅತ್ತು ಅತ್ತು ಹೆಸರು ಮಾಡಿದ್ದೇನೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ನನ್ನಿಂದಲೇ ಪ್ರೇರಣೆ ಪಡೆದು ಇಂದು ಅನೇಕರು ಅಳುತ್ತಿದ್ದಾರೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಲೇವಡಿ ಮಾಡಿದ್ದಾರೆ.

dks hdk congress jds 1

ನಾನು ಅತ್ತು ಅಭಿಮಾನಿಗಳನ್ನು ಮಾಡಿಕೊಂಡಿದ್ದೇನೆ ಎಂದು ಜನ ಅಂದಿದ್ದಕ್ಕಾಗಿಯೇ ಜೆಡಿಎಸ್ ಕಾಂಗ್ರೆಸ್ ನಲ್ಲಿ ಬಹಳ ಜನ ಇಂದು ಅಳುತ್ತಿದ್ದಾರೆ. ಆದರೆ ನಮಗೆ ಅಳುವ ನಾಯಕರು ಬೇಕಾಗಿಲ್ಲ. ಕಣ್ಣೀರು ಒರೆಸುವ ನಾಯಕರು ಬೇಕಾಗಿದ್ದಾರೆ ಎಂದು ಹೇಳುವ ಮೂಲಕ ಸಿಎಂಗೆ ಟಾಂಗ್ ನೀಡಿದರು.

ಸರ್ಕಾರದ ವಿರುದ್ಧ ಬಿಎಸ್‍ವೈ ಕಿಡಿ:
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಾತನಾಡಿ, ಕುಂದಗೋಳ, ಚಿಂಚೊಳಿ ಗೆದ್ದರೆ ನಾವು 106 ಆಗ್ತೀವಿ. ಇಬ್ಬರು ಪಕ್ಷೇತರರು ನಮ್ಮ ಜೊತೆಗೆ ಇದ್ದಾರೆ. ಇನ್ನೂ ಎರಡ್ಮೂರು ಜನ ಬಂದರೆ ಮುಂದೆ ನಮ್ಮದೇ ಸರ್ಕಾರ ಬರುತ್ತದೆ ಎಂದು ಹೇಳಿದ್ದಾರೆ.

BSY e1552463395667

ಕುಮಾರಸ್ವಾಮಿ ಮತ್ತು ಅವರ ಕಂಪನಿಯನ್ನು ಮನೆಗೆ ಕಳುಹಿಸಬೇಕಿದೆ. 166 ತಾಲೂಕಿನಲ್ಲಿ ಭೀಕರ ಬರಗಾಲ ಇದೆ. ಆದರೂ ಸಚಿವ, ಮುಖ್ಯಮಂತ್ರಿ ಬರಗಾಲ ಪ್ರದೇಶಕ್ಕೆ ಹೋಗಿಲ್ಲ. ಅದಕ್ಕಾಗಿಯೇ ಬಿತ್ತನೆ ಬೀಜ, ಗೊಬ್ಬರಕ್ಕಾಗಿ ಆರು ಸಾವಿರ ಕೊಡುವ ಯೋಜನೆ ಮೋದಿ ಮಾಡಿದ್ದಾರೆ. ಹೆಣ್ಣುಮಕ್ಕಳು ಹುಟ್ಟಿದರೆ ಕಣ್ಣೀರು ಹಾಕುವ ಕಾಲ ಇತ್ತು. ಅದರೆ ನಾನು ಭಾಗ್ಯಲಕ್ಷ್ಮಿ ಯೋಜನೆ ಕೊಟ್ಟ ಬಳಿಕ ಹೆಣ್ಣು ಮಕ್ಕಳ ನೋಡುವ ದೃಷ್ಟಿ ಬದಲಾಯಿತು. ಆದರೆ ಕುಮಾರಸ್ವಾಮಿ ಆ ಯೋಜನೆ ಚಿವುಟಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

hdk 1

ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಕಂಪನಿ ರೈತರ ಸಾಲ ಮನ್ನಾ ಮಾಡಿಲ್ಲ. ರೈತರ ಸಾಲ ಮನ್ನಾ ಮಾಡದೇ ಹೋದರೆ, ಅಧಿವೇಶನ ಆರಂಭವಾದಾಗ ಕುಮಾರಸ್ವಾಮಿ ಮೂಗು ಹಿಡಿದು ಕೇಳುತ್ತೇನೆ. ಸಾಲ ಮನ್ನಾ ಮಾಡು ಇಲ್ಲವೇ ಅಧಿಕಾರ ಬಿಟ್ಟು ತೊಲಗು ಎಂದು ಹೇಳುತ್ತೇನೆ. ರೈತರ ಸಾಲಮನ್ನಾ ಆಗುವವರೆಗೂ ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *