ಮಡಿಕೇರಿ: ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ದಸರಾ ಆನೆ ದ್ರೋಣ ಸಾವಿಗೆ ಅರಣ್ಯಾಧಿಕಾರಿಗಳು ಕಾರಣಾವಾದ್ರಾ ಎಂಬ ಪ್ರಶ್ನೆಯೊಂದು ಮೂಡಿದೆ. ಯಾಕಂದ್ರೆ ದ್ರೋಣನ ಕೊನೆಯ ಗಳಿಗೆಯ ದೃಶ್ಯ ಸೆರೆಯಾಗಿದೆ.
ಹೌದು. ದ್ರೋಣ ಸಾವನ್ನಪ್ಪುತ್ತಿರುವ ದೃಶ್ಯವನ್ನು ಅಲ್ಲೇ ಇದ್ದವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಈ ದೃಶ್ಯ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ವಿಡಿಯೋದಲ್ಲೇನಿದೆ?:
ದ್ರೋಣ ಅನಾರೋಗ್ಯದಿಂದ ಬಳಲುತ್ತಿದ್ದರೂ ಮೇಲಾಧಿಕಾರಿಗಳು ವೈದ್ಯರನ್ನ ಕರೆಸಲಿಲ್ಲ. ಹೀಗಾಗಿ ಮಾವುತರು ಹಾಗೂ ಕಾವಾಡಿಗರು ದ್ರೋಣನ ಪ್ರಾಣ ಉಳಿಸಲು ಕೊನೆ ಕ್ಷಣದವರೆಗೂ ಪರದಾಡಿದ್ದಾರೆ. ದ್ರೋಣನ ಮೈಮೇಲೆ ನೀರು ಹಾಕಿ ಪ್ರಾಣ ಉಳಿಸಲು ಪರದಾಡುತ್ತಿದ್ದಾರೆ. ತನ್ನ ಮೇಲೆ ನೀರು ಬೀಳುತ್ತಿದ್ದಂತೆಯೇ ದ್ರೋಣ ನಿಂತಲ್ಲೇ ಕುಸಿಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಒಟ್ಟಿನಲ್ಲಿ ಇದೀಗ ದ್ರೋಣ ಸಾಯೋ ವೇಳೆ ವೈದ್ಯರನ್ನ ಕರೆಸದ್ದಕ್ಕೆ ಮಾವುತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ದ್ರೋಣ ವಿಶ್ವವಿಖ್ಯಾತ ದಸರಾ ಉತ್ಸವಕ್ಕೆ ಮೆರುಗು ನೀಡುತ್ತಿದ್ದನು.
https://www.youtube.com/watch?v=yYgCJ2rsEic