ಶಾಸಕರ ಭವನದ ಮಹಡಿ ಮೇಲಿನಿಂದ ಬಿದ್ದು ನಿರ್ವಾಹಕ ಸಾವು

Public TV
0 Min Read
vidhanasowda 2

ಬೆಂಗಳೂರು: ಶಾಸಕರ ಭವನದ ಮೇಲಿನಿಂದ ಬಿದ್ದು ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

44 ವರ್ಷದ ಶಿವಶಂಕರ್ ಮೃತಪಟ್ಟ ವ್ಯಕ್ತಿ. ಶಿವಶಂಕರ್ ಕೆಎಸ್‍ಆರ್ ಟಿಸಿಯಲ್ಲಿ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದರು. ಲೋಕಸಭಾ ಚುನಾವಣೆ ಇರುವ ಹಿನ್ನಲೆಯಲ್ಲಿ ಒಒಡಿ ಆಧಾರದ ಮೇಲೆ ಶಾಸಕರ ಭವನದಲ್ಲಿ ಕೆಲಸ ಮಾಡಿಕೊಂಡಿದರು.

ಭಾನುವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಶಿವಶಂಕರ್ ಶಾಸಕರ ಭವನದ ಮೂರನೇ ಮಹಡಿಗೆ ಹೋಗುವಾಗ ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ. ಪರಿಣಾಮ ಶಿವಶಂಕರ್ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *