ಪುಲ್ವಾಮಾ ದಾಳಿ ಆಕ್ಸಿಡೆಂಟ್ ಅನ್ನೋದಕ್ಕೆ ನಿಮ್ಮ ಬಳಿ ದಾಖಲೆ ಇದೆಯಾ? ಹುತಾತ್ಮ ಯೋಧನ ಪತ್ನಿ

Public TV
1 Min Read
mnd kalavathi

ಮಂಡ್ಯ: ಪುಲ್ವಾಮಾ ಪ್ರಕರಣ ಒಂದು ಆಕ್ಸಿಡೆಂಟ್ ಎಂದ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಹೇಳಿಕೆಗೆ ಹುತಾತ್ಮ ಯೋಧ ಗುರು ಪತ್ನಿ ಕಣ್ಣೀರು ಹಾಕುತ್ತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಹುತಾತ್ಮ ಯೋಧ ಗುರು ಅವರ ಪತ್ನಿ ಕಲಾವತಿ, ಸೈನಿಕರ ಪ್ರಾಣಕ್ಕೆ ಬೆಲೆಯೇ ಇಲ್ಲವೆ? ಚಳಿ, ಮಳೆ, ಬಿಸಿಲೆನ್ನದೆ, ತಿನ್ನಲು ಊಟ ಇಲ್ಲದೆ ದೇಶ ಕಾಯುತ್ತಾರೆ. ಅಂಥವರ ಪ್ರಾಣಕ್ಕೆ ಬೆಲೆ ಕಟ್ಟಬೇಡಿ. ಯಾವ ಉದ್ದೇಶದಿಂದ ಆಕ್ಸಿಡೆಂಟ್ ಎಂಬ ಪದ ಬಳಸಿದ್ದೀರಿ ಗೊತ್ತಿಲ್ಲ. ನಿಮ್ಮ ಬಳಿ ದಾಖಲೆ ಇದ್ದರೆ ತೋರಿಸಿ. ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರನ್ನು ಕಳೆದುಕೊಂಡು ಅವರ ಕುಟುಂಬಗಳು ಎಷ್ಟು ಕಷ್ಟ ಪಡುತ್ತಿದೆ ನಿಮಗೆ ಗೊತ್ತೆ? ಆಪ್ತರನ್ನು ಕಳೆದುಕೊಂಡಿದ್ದರೆ ನಿಮಗೆ ನಮ್ಮ ನೋವು ಗೊತ್ತಾಗುತ್ತಿತ್ತು. ಈ ರೀತಿ ಹೇಳಲು ನಿಮಗೆ ಹೇಗೆ ಧೈರ್ಯ ಬಂತು? ಪುಲ್ವಾಮಾ ದಾಳಿ ಒಂದು ಆಕ್ಸಿಡೆಂಟ್ ಅಂತ ಹೇಳಿ ಯೋಧರ ಸಾವಿಗೆ ಅವಮಾನ ಮಾಡಬೇಡಿ ಎಂದು ದಿಗ್ವಿಜಯ್ ಸಿಂಗ್ ಹೇಳಿಕೆಗೆ ಆಕ್ರೋಶ ಹೊರಹಾಕಿದ್ದಾರೆ.

pulwama

ನಮ್ಮ ಪರಿಸ್ಥಿತಿ ಅವರಿಗೆ ಗೊತ್ತಿಲ್ಲ. ನಿಮ್ಮ ಮನೆಯಲ್ಲಿ, ನಿಮ್ಮ ಮನೆ ಮಕ್ಕಳು ಈ ರೀತಿ ಮೃತಪಟ್ಟಿದ್ದರೆ ಏನು ಮಾಡುತ್ತಿದ್ದಿರಿ? ಕಳೆದುಕೊಂಡಿರುವ ನೋವು ನಮಗೆ ಗೊತ್ತು. ದೇಶಕ್ಕಾಗಿ ಪ್ರಾಣ ಕೊಟ್ಟಿರುವುದಕ್ಕೆ ಬೆಲೆಯೇ ಇಲ್ವಾ? ದಯವಿಟ್ಟು ಅಪಪ್ರಚಾರ ಮಾಡಬೇಡಿ. ಸತ್ಯ ತಿಳಿದು ಮಾತನಾಡಿ. ದಯಮಾಡಿ ಆಕ್ಸಿಡೆಂಟ್ ಎಂಬ ಪದ ಬಳಸಬೇಡಿ ಎಂದು ಕಣ್ಣೀರು ಹಾಕುತ್ತ ಕಲಾವತಿ ಅವರು ವಿನಂತಿ ಮಾಡಿಕೊಂಡಿದ್ದಾರೆ.

Martyr Pulwama

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *