ಉತ್ತರ ಕರ್ನಾಟಕದ ಅಭಿವೃದ್ಧಿ ಯೋಜನೆಗಳಿಗೆ ಕುಮಾರಸ್ವಾಮಿ ಸರ್ಕಾರದಿಂದ ಕತ್ತರಿ!

Public TV
1 Min Read
HDK Parameshwar

ಬೆಂಗಳೂರು: ಉತ್ತರ ಕರ್ನಾಟಕದ ಅಭಿವೃದ್ಧಿ ಯೋಜನೆಗಳಿಗೆ ಕುಮಾರಸ್ವಾಮಿ ಸರ್ಕಾರ ಕತ್ತರಿ ಹಾಕಿದೆ. ಸಿದ್ದರಾಮಯ್ಯ ಅವಧಿಯಲ್ಲಿ ಘೋಷಣೆಯಾಗಿದ್ದ ಅನುದಾನಗಳಿಗೆ ಸಿಎಂ ಕುಮಾರಸ್ವಾಮಿ ತಡೆ ನೀಡಿದ್ದಾರೆ.

ಸಾಲಮನ್ನಾಕ್ಕಾಗಿ ಹಣ ಹೊಂದಿಸಲು ಉತ್ತರ ಕರ್ನಾಟಕಕ್ಕೆ ಕುಮಾರಸ್ವಾಮಿ ಆಡಳಿತ ಬರೆ ಎಳೆದಿದೆ. ಬಜೆಟ್‍ನಲ್ಲಿ ಘೋಷಣೆ ಆಗಿ ಟೆಂಡರ್ ಮುಗಿದಿದ್ದರೂ ಸಮ್ಮಿಶ್ರ ಸರ್ಕಾರ ಇವುಗಳಿಗೆಲ್ಲ ಬ್ರೇಕ್ ಹಾಕಿದೆ.

Siddu HDK Meeting 5

ಯಾವೆಲ್ಲಾ ಯೋಜನೆಗಳಿಗೆ ಕತ್ತರಿ?
– ಕೃಷ್ಣಾ ಭಾಗ್ಯಜಲ ನಿಗಮ – 1,427 ಕೋಟಿ ರೂ.
– ಕಾವೇರಿ ನೀರಾವರಿ ನಿಗಮ – 688.75 ಕೋಟಿ ರೂ.
– ಕರ್ನಾಟಕ ನೀರಾವರಿ ನಿಗಮ – 1,825.73 ಕೋಟಿ ರೂ.

– ಕಿತ್ತೂರು, ಬೈಲಹೊಂಗಲ, ಸವದತ್ತಿ ತಾಲೂಕುಗಳ ಕೆರೆ ತುಂಬಿಸುವ ಯೋಜನೆ
– ಕೊಪ್ಪಳದ ಬಹದ್ದೂರ್ ಬಂಡಿ ಏತ ನೀರಾವರಿ ಯೋಜನೆ
– ಬಸವ ಅಂತರಾಷ್ಟ್ರೀಯ ಕೇಂದ್ರ ಮತ್ತು ಮ್ಯೂಸಿಯಂ ಯೋಜನೆ
– ಆಲಮಟ್ಟಿ ಎಡದಂಡೆ ಕಾಲುವೆಗಳ ಆಧುನೀಕರಣ ಯೋಜನೆ
– ಗಂಡೂರಿ ನಾಲಾ ಮತ್ತು ಮುಲ್ಲಾಮಾರಿ ಯೋಜನೆ

sugar factory owners HDK Meeting 3

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *