ಬಾಯಲ್ಲಿ ಬೂಟು ಇಡ್ತೀನಿ ಅಂದ ಪರಮೇಶ್ವರ್ ನಾಯ್ಕ್ ವಿರುದ್ಧ ಭುಗಿಲೆದ್ದ ಆಕ್ರೋಶ

Public TV
1 Min Read
Parameshwar Naik

ಬಳ್ಳಾರಿ: ನೀವು ನನಗೆ ಮತ ಹಾಕಿಲ್ಲ. ನಿಮ್ಮ ಬಾಯಲ್ಲಿ ಬೂಟು ಇಟ್ಟು ಹೊಡೆಯುತ್ತೇನೆ ಎಂದು ಅವಾಜ್ ಹಾಕಿದ್ದ ಪರಮೇಶ್ವರ್ ನಾಯ್ಕ್ ವಿರುದ್ಧ ಹಡಗಲಿ ಜನರು ಆಕ್ರೋಶ ಗೊಂಡಿದ್ದು, ಜನರು ಪರಮೇಶ್ವರ್ ನಾಯ್ಕ್ ಶಾಸಕತ್ವವನ್ನು ರದ್ದು ಮಾಡಿ ಅಂತ ಆಂದೋಲನ ಶುರು ಮಾಡಿದ್ದಾರೆ.

ಇತ್ತೀಚೆಗೆ ಮೈಲಾರ ಗ್ರಾಮದ ಮತದಾರರಿಗೆ ಮನಸೋ ಇಚ್ಛೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಪರಮೇಶ್ವರ್ ನಾಯ್ಕ್ ರ ಶಾಸಕತ್ವವನ್ನ ರದ್ದುಗೊಳಿಸಬೇಕೆಂದು ಆಗ್ರಹಿಸಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಓದೋ ಗಂಗಪ್ಪ ನೇತೃತ್ವದಲ್ಲಿ ಇಂದು ಸಾವಿರಾರು ಮತದಾರರು ಬೃಹತ್ ಪ್ರತಿಭಟನೆ ನಡೆಸಿದರು.

vlcsnap 2018 09 19 18h58m56s142

ಹಡಗಲಿಯ ಮೈಲಾರ ದೇವಸ್ಥಾನದಿಂದ ಹಡಗಲಿಯ ವಿವಿಧೆಡೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಓದೋ ಗಂಗಪ್ಪ ಅಭಿಮಾನಿಗಳು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಪರಮೇಶ್ವರ್ ನಾಯ್ಕ್ ರಿಂದ ಕ್ಷೇತ್ರದ ಜನರಿಗೆ ಅವಮಾನವಾಗಿದೆ ಅಂತಾ ಕಿಡಿಕಾರಿದರು. ಅಲ್ಲದೇ ಮತದಾರರಿಂದ ಮತ ಪಡೆದು ಅವರ ಬಾಯಲ್ಲೇ ಬೂಟು ಇಡ್ತೀನಿ ಅನ್ನೋ ಅವರಿಗಿರುವ ದರ್ಪ ದಬ್ಬಾಳಿಕೆ ಹಿನ್ನೆಲೆಯಲ್ಲಿ ಅವರ ಶಾಸಕ ಸ್ಥಾನವನ್ನು ರದ್ದುಗೊಳಿಸಬೇಕೆಂದು ತಹಶಿಲ್ದಾರ್ ಮೂಲಕ ವಿಧಾನ ಸಭಾಧ್ಯಕ್ಷರು ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದೇವೆ ಎಂದು ಪುರಸಭೆ ಸದಸ್ಯ ವಿಲನ್ಸ್ ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *