ಕಲಬುರಗಿ: ತಂದೆ ತಂದಿದ್ದ ಥಿನ್ನರನ್ನು ನೀರೆಂದು ಭಾವಿಸಿ ಕುಡಿದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ 7ರ ಬಾಲಕಿ ಸೌಮ್ಯ 22 ದಿನಗಳ ನಂತರ ಮೃತಪಟ್ಟಿದ್ದಾಳೆ.
ಜಿಲ್ಲೆಯ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕಳೆದ ಕೆಲ ದಿನಗಳ ಹಿಂದೆಯಷ್ಟೇ ಮನೆಗೆ ಹಿಂದಿರುಗಿದ್ದ ಸೌಮ್ಯ, ಭಾನುವಾರ ಮತ್ತೆ ಏಕಾಏಕಿ ಅಸ್ವಸ್ಥಳಾಗಿದ್ದಳು. ತಕ್ಷಣ ಪೋಷಕರು ಬಾಲಕಿಯನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರು. ಆದರೆ ಇಂದು ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.
ಏನಿದು ಘಟನೆ?
ಜೂನ್ 03 ರಂದು ಸೌಮ್ಯ ತಂದೆ ಮನೆಗೆ ಪೇಂಟಿಂಗ್ ಮಾಡಿಸಲು ತಂದಿದ್ದ ವಸ್ತುಗಳಲ್ಲಿದ್ದ ಥಿನ್ನರನ್ನು ನೀರೆಂದು ಸೇವಿದ್ದಳು. ಸೇರಿದಂತೆ ಇನ್ನಿತರ ಸಾಮಾಗ್ರಿಗಳಲ್ಲಿದ್ದ ಥಿನ್ನರ್ ಅನ್ನು ಬಾಲಕಿ ನೀರೆಂದು ಸೇವಿಸಿದ್ದಳು. ಪರಿಣಾಮ ಬಾಲಕಿಯ ಮುಖವೆಲ್ಲ ವಿಚಿತ್ರವಾಗಿ ಊದಿಕೊಂಡಿತ್ತು. ತಕ್ಷಣ ಬಾಲಕಿಯನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ತೀವ್ರ ಗಂಭೀರವಾಗಿ ಅಸ್ವಸ್ಥಗೊಂಡಿದ್ದ ಸೌಮ್ಯಳನ್ನು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇದಾದ ಬಳಿಕ ಅವರು ಕೆಲ ದಿನಗಳ ಹಿಂದೇಯಷ್ಟೇ ಮನೆಗೆ ಹಿಂದಿರುಗಿದ್ದಳು.