ನವದೆಹಲಿ: ಉತ್ತಮ ವಾಗ್ಮಿಯಾಗಲು ಏನು ಮಾಡಬೇಕು ಎಂಬ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕಿಯಿಂದಲೇ ಸಲಹೆ ಪಡೆದ ಪ್ರಸಂಗವೊಂದು ಗಮನ ಸೆಳೆಯಿತು.
ಶಿಕ್ಷಕರ ದಿನದ (Teacher’s Day) ಅಂಗವಾಗಿ ನವದೆಹಲಿಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಶಿಕ್ಷಕರೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದರು. ಈ ವೇಳೆ ತಮ್ಮನ್ನು ವಿದ್ಯಾರ್ಥಿಯಂತೆ ಪರಿಗಣಿಸಿಕೊಂಡು, ನಾನು ನಿಮ್ಮ ವಿದ್ಯಾರ್ಥಿಯಾಗಿದ್ದರೆ ಉತ್ತಮ ವಾಗ್ಮಿಯಾಗಲು ಏನು ಮಾಡಬೇಕು? ಎಂದು ಶಿಕ್ಷಕಿಗೆ ಪ್ರಶ್ನಿಸಿದರು. ಇದನ್ನೂ ಓದಿ: GBA ಕಾಮಗಾರಿ ವೇಳೆ ಗ್ಯಾಸ್ ಪೈಪ್ಗೆ ಹಾನಿ – 8 ಅಡಿ ಎತ್ತರಕ್ಕೆ ಚಿಮ್ಮುತ್ತಿರುವ ಗ್ಯಾಸ್
ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಕಿ, ಮೊದಲಿಗೆ ಆತ್ಮವಿಶ್ವಾಸ ಇರಬೇಕು. ನಿರಂತರ ಅಭ್ಯಾಸದಿಂದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚುತ್ತದೆ ಎಂದು ಸಲಹೆ ನೀಡಿದರು. ಪ್ರಧಾನಿಯವರ ಸಮ್ಮುಖದಲ್ಲಿ ಮಾತನಾಡುವಾಗ ತಮಗೇ ಆತ್ಮವಿಶ್ವಾಸ ಕಡಿಮೆಯಾದಂತಾಗಿದೆ ಎಂದು ಶಿಕ್ಷಕಿ ಹಾಸ್ಯಭರಿತವಾಗಿ ಹೇಳಿದಾಗ ಸಭೆಯಲ್ಲಿ ನಗೆ ಮೂಡಿತು. ಶಿಕ್ಷಕಿಯ ಮಾತಿಗೆ ಮೋದಿ ಅವರೂ ನಕ್ಕರು. ಇದನ್ನೂ ಓದಿ: ಬಿಡದಿ ಟೌನ್ಶಿಪ್ಗೆ ಭೂಮಿ ನೀಡಿದ ರೈತರ ಪರಿಹಾರಕ್ಕೆ ಕನ್ನ – ನಕಲಿ ದಾಖಲೆ ಸೃಷ್ಟಿಸಿ 5 ಕೋಟಿ ರೂ. ವಂಚನೆಗೆ ಯತ್ನ
ಮಕ್ಕಳಲ್ಲಿ ಹೆಚ್ಚುತ್ತಿರುವ ‘ಸ್ಕ್ರೀನ್ ಟೈಮ್’ ಬಗ್ಗೆ ಕಳವಳ:
ಶಿಕ್ಷಕರೊಂದಿಗೆ ನಡೆದ ಚರ್ಚೆಯಲ್ಲಿ ಮಕ್ಕಳ ಹೆಚ್ಚುತ್ತಿರುವ ಸ್ಕ್ರೀನ್ಟೈಮ್ ಬಗ್ಗೆಯೂ ಪ್ರಧಾನಿ ಮೋದಿ ಕಳವಳ ವ್ಯಕ್ತಪಡಿಸಿದರು. ಮೊಬೈಲ್, ಕಂಪ್ಯೂಟರ್ ಹಾಗೂ ಇತರ ಡಿಜಿಟಲ್ ಸಾಧನಗಳ ಮುಂದೆ ಮಕ್ಕಳು ಹೆಚ್ಚು ಸಮಯ ಕಳೆಯುತ್ತಿರುವುದು ಒಂದು ರೀತಿಯ ಚಟವಾಗಿ ಪರಿಣಮಿಸುತ್ತಿದೆ ಎಂದು ಅವರು ಹೇಳಿದರು. ಮಕ್ಕಳನ್ನು ಸ್ಕ್ರೀನ್ನಿಂದ ದೂರವಿಡಲು ಅವರನ್ನು ಹೊರಾಂಗಣ ಕ್ರೀಡೆಗಳತ್ತ ಹೆಚ್ಚು ಸೆಳೆಯಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಬಾಗಿಲಿಗೆ ಬಂದಿದೆ ಸರ್ಕಾರ, ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7 ಮೀಸಲಾತಿ: ಪ್ರಜಾಸೇವಾ ಇಲಾಖೆಗೆ ಡಿಕೆಶಿ ಚಾಲನೆ
ಇಲ್ಲಿ ಕ್ರೀಡೆ ಎಂದರೆ ವೀಡಿಯೋ ಗೇಮ್ಗಳಲ್ಲ, ಬದಲಿಗೆ ಮಕ್ಕಳು ಮೈದಾನಕ್ಕೆ ತೆರಳಿ ಆಡುವ ಕ್ರೀಡೆಗಳು ಎಂದು ಮೋದಿ ಸ್ಪಷ್ಟಪಡಿಸಿದರು. ಆಟವಾಡುವ ಅಭ್ಯಾಸವು ಮಕ್ಕಳ ದೈಹಿಕ ಆರೋಗ್ಯದ ಜೊತೆಗೆ ಸಾಮಾಜಿಕ ಮತ್ತು ಮಾನಸಿಕ ಬೆಳವಣಿಗೆಗೂ ಸಹಕಾರಿಯಾಗುತ್ತದೆ ಎಂಬ ಸಂದೇಶವನ್ನು ಅವರು ನೀಡಿದರು. ಇದನ್ನೂ ಓದಿ: ಸಿಎಂ ಡಿಕೆಶಿ ಕನಸಿನ ʻಪ್ರಜಾಸೇವಾ ಇಲಾಖೆʼ ಲೋಕಾರ್ಪಣೆ – ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ
ಸೃಜನಶೀಲ ಚಟುವಟಿಕೆಗಳಿಗೆ ಉತ್ತೇಜನ:
ಮಕ್ಕಳ ಗಮನವನ್ನು ಮೊಬೈಲ್ ಮತ್ತು ಇತರ ಪರದೆಗಳಿಂದ ಬೇರೆಡೆ ಸೆಳೆಯಲು ಅವರನ್ನು ವಿವಿಧ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಬೇಕು ಎಂದು ಮೋದಿ ಹೇಳಿದರು. ಚಿತ್ರಕಲೆ, ಸೃಜನಾತ್ಮಕ ಕಾರ್ಯಕ್ರಮಗಳು ಹಾಗೂ ಇತರ ಚಟುವಟಿಕೆಗಳ ಮೂಲಕ ಮಕ್ಕಳ ಕಲ್ಪನಾ ಶಕ್ತಿಯನ್ನು ಬೆಳೆಸಬಹುದು. ಇಂತಹ ಚಟುವಟಿಕೆಗಳನ್ನು ಕೇವಲ ಶಾಲಾ ಕಾರ್ಯಕ್ರಮಗಳಿಗೆ ಸೀಮಿತಗೊಳಿಸದೆ, ಮಕ್ಕಳ ಜೀವನದ ಭಾಗವಾಗಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಕರ್ನಾಟಕ ಸಾಫ್ಟ್ ಬಾಲ್ ಪ್ರಿಮಿಯರ್ ಲೀಗ್ ಸೀಸನ್-3ಗೆ ಚಾಲನೆ; ನಟ ಡಾರ್ಲಿಂಗ್ ಕೃಷ್ಣ, ಐಂದ್ರಿತಾ ರೇ ಉದ್ಘಾಟನೆ
ವಿದ್ಯಾರ್ಥಿಗಳಲ್ಲಿ ನಶೆ ತಡೆಯಲು ಶಿಕ್ಷಕರ ಪಾತ್ರ:
ಯುವಜನರಲ್ಲಿ ಹೆಚ್ಚುತ್ತಿರುವ ನಶೆಯ ಅಪಾಯದ ಬಗ್ಗೆಯೂ ಪ್ರಧಾನಿ ಮೋದಿ ಶಿಕ್ಷಕರ ಗಮನ ಸೆಳೆದರು. ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸಬೇಕು ಎಂದು ಅವರು ಶಿಕ್ಷಕರಿಗೆ ಮನವಿ ಮಾಡಿದರು. ದೊಡ್ಡ ನಗರಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಒಬ್ಬ ವಿದ್ಯಾರ್ಥಿ ಯಾವ ರೀತಿಯಲ್ಲಿ ನಶೆಯತ್ತ ಆಕರ್ಷಿತನಾಗುತ್ತಾನೆ ಎಂಬುದನ್ನು ಗುರುತಿಸುವುದು ಕೆಲವೊಮ್ಮೆ ಕಷ್ಟವಾಗುತ್ತದೆ. ಹೀಗಾಗಿ ಶಿಕ್ಷಕರು ಮಕ್ಕಳೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ವಿದ್ಯಾರ್ಥಿಗಳ ವರ್ತನೆಯಲ್ಲಿ ಕಂಡುಬರುವ ಸಣ್ಣಪುಟ್ಟ ಬದಲಾವಣೆಗಳನ್ನೂ ಗಮನಿಸುವುದು ಮುಖ್ಯ. ಆರಂಭದಲ್ಲೇ ಸಮಸ್ಯೆಯನ್ನು ಗುರುತಿಸಿದರೆ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಪ್ರಧಾನಿ ಹೇಳಿದರು. ಇದನ್ನೂ ಓದಿ: ಭಾರತ ಚಂದ್ರನನ್ನ ತಲುಪಿರಬಹುದು, ಜಾತಿ ವ್ಯವಸ್ಥೆಯ ದುಷ್ಟತನ ಇನ್ನೂ ಸಮಾಜದಲ್ಲಿ ಅಸ್ತಿತ್ವದಲ್ಲಿದೆ: ಬಾಂಬೆ ಹೈಕೋರ್ಟ್ ಬೇಸರ
ಶಿಕ್ಷಕರು ಪುಸ್ತಕಕ್ಕೆ ಸೀಮಿತವಾಗಬಾರದು:
ಶಿಕ್ಷಕರ ಜವಾಬ್ದಾರಿ ಕೇವಲ ಪಠ್ಯಪುಸ್ತಕ ಮತ್ತು ಪಠ್ಯಕ್ರಮ ಬೋಧಿಸುವುದಕ್ಕೆ ಸೀಮಿತವಾಗಬಾರದು ಎಂಬುದನ್ನು ಮೋದಿ ಒತ್ತಿ ಹೇಳಿದರು. ಮಕ್ಕಳ ಜೀವನ, ಅವರ ಆಸಕ್ತಿಗಳು, ಸಮಸ್ಯೆಗಳು ಮತ್ತು ನಡವಳಿಕೆಯೊಂದಿಗೆ ಶಿಕ್ಷಕರು ನಿಕಟವಾಗಿ ಸಂಪರ್ಕ ಹೊಂದಬೇಕು. ವಿದ್ಯಾರ್ಥಿಯೊಬ್ಬನಿಗೆ ಪಾಠ ಹೇಳುವುದಕ್ಕಿಂತ ಆತನನ್ನು ಅರ್ಥಮಾಡಿಕೊಳ್ಳುವುದು ಕೂಡ ಶಿಕ್ಷಕರ ಪ್ರಮುಖ ಕರ್ತವ್ಯವಾಗಿದೆ. ಮಕ್ಕಳ ವರ್ತನೆಯಲ್ಲಿ ಬದಲಾವಣೆ ಕಂಡುಬಂದರೆ ಅದರ ಹಿಂದಿನ ಕಾರಣವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಶಿಕ್ಷಕರು ಮಕ್ಕಳಿಗೆ ಮಾರ್ಗದರ್ಶಕರಾಗಿಯೂ, ಅಗತ್ಯವಿದ್ದಾಗ ಆಪ್ತರಂತೆ ಬೆಂಬಲ ನೀಡುವವರಾಗಿಯೂ ಇರಬೇಕು ಎಂಬ ಸಂದೇಶವನ್ನು ನೀಡಿದರು. ಇದನ್ನೂ ಓದಿ: ವಾರ್ಡರ್ ಮೇಲೆ ಕೈದಿಗಳಿಂದ ಹಲ್ಲೆ| ಪೂರ್ಣ ಮಾಹಿತಿ ಇನ್ನೂ ಬಂದಿಲ್ಲ, ಕಾರಣ ತಿಳ್ಕೊಂಡು ಕ್ರಮ: ಪ್ರಿಯಾಂಕ್ ಖರ್ಗೆ
ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳಬೇಡಿ:
ಮಕ್ಕಳ ಬಾಲ್ಯವನ್ನು ಉಳಿಸುವ ಮಹತ್ವದ ಜವಾಬ್ದಾರಿ ಶಿಕ್ಷಕರು ಮತ್ತು ಸಮಾಜದ ಮೇಲಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಇಂದಿನ ಸ್ಪರ್ಧಾತ್ಮಕ ವಾತಾವರಣದಲ್ಲಿ ಮಕ್ಕಳ ಮೇಲೆ ಶೈಕ್ಷಣಿಕ ಹಾಗೂ ಇತರ ಒತ್ತಡ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಮಕ್ಕಳ ಸಹಜ ಕುತೂಹಲ, ಆಟ, ಸೃಜನಶೀಲತೆ ಮತ್ತು ಸಂತೋಷಕ್ಕೆ ಅವಕಾಶ ಕಲ್ಪಿಸಬೇಕು. ಮಕ್ಕಳ ಬಾಲ್ಯ ಕಳೆದುಹೋಗದಂತೆ ನೋಡಿಕೊಳ್ಳುವುದು ಮುಖ್ಯ ಎಂದು ಹೇಳಿದರು. ಇದನ್ನೂ ಓದಿ: ನೆಲಮಂಗಲ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ – 10 ಕಿ.ಮೀ. ವಾಹನಗಳ ಸಾಲು
ಡ್ರೆಸ್ಕೋಡ್ ವಿಚಾರವೂ ಪ್ರಸ್ತಾಪ:
ಕೆಲವು ದೊಡ್ಡ ನಗರಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಚರ್ಚೆಗೆ ಕಾರಣವಾಗಿರುವ ಡ್ರೆಸ್ಕೋಡ್ ವಿಚಾರವನ್ನೂ ಪ್ರಧಾನಿ ಪ್ರಸ್ತಾಪಿಸಿದರು. ಯಾವುದೇ ನಿಯಮವನ್ನು ಜಾರಿಗೆ ತರುವ ಮುನ್ನ ಅದರ ಬಗ್ಗೆ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ತಿಳಿಸಬೇಕು. ನಿಯಮದ ಉದ್ದೇಶ ಏನು, ಅದರಿಂದ ವಿದ್ಯಾರ್ಥಿಗಳ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗಬಹುದು ಎಂಬುದನ್ನು ಅರ್ಥಮಾಡಿಕೊಳ್ಳುವುದು ಅಗತ್ಯ. ನಿಯಮಗಳನ್ನು ಕೇವಲ ಜಾರಿಗೊಳಿಸುವುದಕ್ಕಿಂತ ಅವುಗಳ ಪರಿಣಾಮವನ್ನು ಗಮನಿಸುವುದು ಮುಖ್ಯ. ವಿದ್ಯಾರ್ಥಿಗಳ ವರ್ತನೆಯಲ್ಲಿ ಬದಲಾವಣೆ ಕಂಡುಬರುತ್ತಿದೆಯೇ ಎಂಬುದನ್ನು ಶಿಕ್ಷಕರು ಗಮನಿಸಬೇಕು ಎಂದು ಮೋದಿ ಸಲಹೆ ನೀಡಿದರು. ಇದನ್ನೂ ಓದಿ: ಇಬ್ಬರೇ ಮಕ್ಕಳಿಗಾಗಿ ಕಾಡಿನ ದುರ್ಗಮ ದಾರಿಯಲ್ಲಿ ನಡೆದು 13 ವರ್ಷ ಪಾಠ – ಶಿಕ್ಷಕನ ಸಾಹಸಮಯಗಾಥೆ!
ಕಾಶಿಯ ಸ್ತನ ಕ್ಯಾನ್ಸರ್ ಜಾಗೃತಿ ಅಭಿಯಾನ ಸ್ಮರಣೆ:
ಸಂವಾದದ ವೇಳೆ ಪ್ರಧಾನಿ ಮೋದಿ ಅವರು ಕಾಶಿಯ ಸಂಸದರಾಗಿದ್ದ ಸಂದರ್ಭದಲ್ಲಿ ಆರಂಭಿಸಿದ್ದ ಸ್ತನ ಕ್ಯಾನ್ಸರ್ ಜಾಗೃತಿ ಮತ್ತು ತಪಾಸಣಾ ಅಭಿಯಾನವನ್ನೂ ನೆನಪಿಸಿಕೊಂಡರು. ಮಹಿಳೆಯರಲ್ಲಿ ಆರೋಗ್ಯ ತಪಾಸಣೆಯ ಬಗ್ಗೆ ಹಿಂದೆ ಇದ್ದ ಹಿಂಜರಿಕೆ ಈಗ ಕಡಿಮೆಯಾಗುತ್ತಿದೆ. ಮಹಿಳೆಯರೇ ಸ್ವಯಂಪ್ರೇರಣೆಯಿಂದ ತಪಾಸಣೆಗೆ ಮುಂದೆ ಬರುತ್ತಿರುವುದು ಉತ್ತಮ ಬೆಳವಣಿಗೆ ಎಂದು ಅವರು ಹೇಳಿದರು. ಒಂದೇ ದಿನದಲ್ಲಿ ಅತಿ ಹೆಚ್ಚು ಮಂದಿಯನ್ನು ತಪಾಸಣೆಗೊಳಪಡಿಸಿದ ವಿಶ್ವ ದಾಖಲೆಯೂ ಈ ಅಭಿಯಾನಕ್ಕೆ ಸಂಬಂಧಿಸಿದಂತೆ ನಿರ್ಮಾಣವಾಗಿತ್ತು ಎಂದು ಪ್ರಧಾನಿ ಉಲ್ಲೇಖಿಸಿದರು. ಇದನ್ನೂ ಓದಿ: ಅಡುಗೆ ಮಾಡದೆ ಡ್ಯಾನ್ಸ್ ಕ್ಲಾಸ್ಗೆ ತೆರಳಲು ಮುಂದಾದ ಪತ್ನಿಯ ಹತ್ಯೆ – ಆರೋಪಿ ಅರೆಸ್ಟ್
