ನವದೆಹಲಿ: ಇಸ್ರೇಲ್, ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧ ಭಾರತದ ಕೃಷಿ ಉತ್ಪನ್ನಗಳ ರಫ್ತಿನ ಮೇಲೂ ಪರಿಣಾಮ ಬೀರಿದೆ. ಸುಮಾರು 4 ಲಕ್ಷ ಟನ್ ಬಾಸ್ಮತಿ ಅಕ್ಕಿ ಅಂತರರಾಷ್ಟ್ರೀಯ ಬಂದರುಗಳಲ್ಲೇ ಉಳಿದಿದೆ.
ಸಾಗಣೆ ಮಾರ್ಗಗಳ ಮೇಲಿನ ನಿರ್ಬಂಧ, ಯುದ್ಧದಿಂದ ಏರಿಕೆಯಾದ ಹೆಚ್ಚುವರಿ ಶುಲ್ಕಗಳಿಂದ ರಫ್ತಿನಲ್ಲಿ ಏರುಪೇರಾಗಿದೆ. ಸುಮಾರು 4 ಲಕ್ಷ ಟನ್ ಬಾಸ್ಮತಿ ಅಕ್ಕಿ ಸಮುದ್ರ ಮಾರ್ಗ ಅಥವಾ ಅಂತರರಾಷ್ಟ್ರೀಯ ಬಂದರುಗಳಲ್ಲಿ ಸಿಲುಕಿಕೊಂಡಿವೆ. ಗಿರಣಿಗಾರರು ಮತ್ತು ರೈತರಿಗೆ ಇದು ತೀವ್ರ ಸಮಸ್ಯೆ ತಂದೊಡ್ಡಿದೆ. ಇದನ್ನೂ ಓದಿ: ಅಮೆರಿಕ, ಇಸ್ರೇಲ್, ಯುರೋಪ್ ಹಡಗುಗಳಿಗೆ ಮಾತ್ರ ಹಾರ್ಮುಜ್ ಜಲಸಂಧಿ ಬಂದ್: ಇರಾನ್

ಭಾರತವು ವಿಶ್ವದ ಪ್ರಮುಖ ಬಾಸ್ಮತಿ ಅಕ್ಕಿ ರಫ್ತುದಾರ ರಾಷ್ಟ್ರವಾಗಿದ್ದು, ಮಧ್ಯಪ್ರಾಚ್ಯಕ್ಕೆ ಭಾರೀ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತಿತ್ತು. ಭಾರತದ ಬಾಸ್ಮತಿ ರಫ್ತಿನಲ್ಲಿ ಸುಮಾರು 50% ಭಾಗವನ್ನು ಇರಾನ್, ಸೌದಿ ಅರೇಬಿಯಾ, ಇರಾಕ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಯೆಮೆನ್ ಹೊಂದಿವೆ.
ವಿದೇಶಗಳಲ್ಲಿ ಬೇಡಿಕೆಯಲ್ಲಿನ ಹಠಾತ್ ಸ್ಥಗಿತವು ಈಗಾಗಲೇ ದೇಶೀಯ ಮಾರುಕಟ್ಟೆಗಳ ಮೇಲೂ ಪರಿಣಾಮ ಬೀರಲು ಪ್ರಾರಂಭಿಸಿದೆ. ದೇಶೀಯ ಮಾರುಕಟ್ಟೆಯಲ್ಲಿ ಬಾಸ್ಮತಿ ಬೆಲೆಯಲ್ಲಿ ತೀವ್ರ ಕುಸಿತವಾಗಿದೆ. ಕ್ವಿಂಟಾಲ್ಗೆ ಸುಮಾರು 1,000 ರೂ. ಬೆಲೆ ಕುಸಿದಿದೆ. ಹಡಗು ಕಂಪನಿಗಳು ಯುದ್ಧ-ಅಪಾಯದ ಸುಂಕಗಳನ್ನು ಹೆಚ್ಚಿಸಿ ವಿತರಣಾ ಮಾರ್ಗಗಳನ್ನು ಬದಲಾಯಿಸುವುದರಿಂದ ಬಾಸ್ಮತಿ ಸೆಲಾ 1509, ಬಾಸ್ಮತಿ 1121, ಸುಗಂಧ ಮತ್ತು ಶರ್ಬತಿ ಅಕ್ಕಿಗಳ ರಫ್ತು ಸಹ ಕುಸಿಸಿದೆ.
ಮಧ್ಯಪ್ರದೇಶದಲ್ಲೂ ಇದು ಪರಿಣಾಮ ಬೀರಿದ್ದು, ಹೆಚ್ಚಿನ ಪ್ರಮಾಣದ ಬಾಸ್ಮತಿ ಅಕ್ಕಿಯನ್ನು ರಫ್ತು ಮಾಡಲು ಹೆಸರುವಾಸಿಯಾದ ರಾಯ್ಸೆನ್ ಮತ್ತು ನರ್ಮದಾಪುರಂ ಜಿಲ್ಲೆಗಳಲ್ಲಿ ಅಕ್ಕಿ ವ್ಯಾಪಾರ ಕುಸಿದಿದೆ. ಹೆಚ್ಚುತ್ತಿರುವ ಉದ್ವಿಗ್ನತೆಯಿಂದ ತೆರಿಗೆಗಳು ಮತ್ತು ಕಾರ್ಯಾಚರಣೆಯ ವೆಚ್ಚಗಳನ್ನು ಹೆಚ್ಚಿಸಲಾಗಿದೆ. ಇದರಿಂದ ಸಾಗಣಿಕೆ ದುಬಾರಿಯಾಗಿದೆ. ಹೆಚ್ಚುವರಿ ಶುಲ್ಕಗಳಿಂದಾಗಿ ರಫ್ತು ಮಾಡಲಾದ ಬಾಸ್ಮತಿ ಅಕ್ಕಿಯ ಬೆಲೆ ಪ್ರತಿ ಕೆಜಿಗೆ 8 ರೂ. ನಿಂದ 10 ರೂ.ಗೆ ಹೆಚ್ಚಾಗಿದೆ. ಇದು ಸಹ ಭಾರತದ ರಫ್ತಿಗೆ ಬಲವಾದ ಪೆಟ್ಟು ನೀಡುತ್ತಿದೆ. ಇದನ್ನೂ ಓದಿ: ಶ್ರೀಲಂಕಾ ಬಳಿ ಮುಳುಗಿ ಸಂಕಷ್ಟದಲ್ಲಿದ್ದ ಇರಾನ್ ನೌಕೆಗೆ ಭಾರತದ ನೌಕಾಪಡೆ ಸಹಾಯ

