ನವದೆಹಲಿ/ಬೆಂಗಳೂರು: ಇರಾನ್-ಇಸ್ರೇಲ್ ಯುದ್ಧದ ಪರಿಣಾಮ ಮಧ್ಯಪ್ರಾಚ್ಯದ ಕೆಲವು ದೇಶಗಳಲ್ಲಿ ಉಂಟಾಗಿರುವ ಪರಿಸ್ಥಿತಿಯನ್ನು ಮನಗಂಡು ಸಿಎಂ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವರ ನಿರ್ದೇಶನದ ಮೇರೆಗೆ ರಾಜ್ಯ ಮತ್ತು ಎಲ್ಲಾ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರಗಳನ್ನು ಸಂಪೂರ್ಣವಾಗಿ ಸಕ್ರಿಯಗೊಳಿಸಲಾಗಿದ್ದು, 24*7 ಕಾರ್ಯನಿರ್ವಹಿಸುತ್ತಿವೆ.
ನಾಗರಿಕ ವಿಮಾನಯಾನ ಸಚಿವಾಲಯ ಹೊರಡಿಸಿರುವ ಇತ್ತೀಚಿನ ಮಾರ್ಗಸೂಚಿಯ ಪ್ರಕಾರ, ಇರಾನ್, ಇಸ್ರೇಲ್, ಲೆಬನಾನ್, ಸೌದಿ ಅರೇಬಿಯಾ, ಬಹ್ರೇನ್, ಓಮಾನ್, ಇರಾಕ್, ಜೋರ್ಡನ್, ಕುವೈತ್, ಯುಎಇ ಹಾಗೂ ಖತಾರ್ ದೇಶಗಳ ವಾಯುಪ್ರದೇಶಗಳು ಪ್ರಸ್ತುತ ಮುಚ್ಚಲ್ಪಟ್ಟಿವೆ. ಜೊತೆಗೆ ಹಲವಾರು ರಾಷ್ಟ್ರಗಳು ಓಔಖಿಂಒ ಪ್ರಕಟಿಸಿರುವ ಹಿನ್ನೆಲೆ ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ಗಂಭೀರ ವ್ಯತ್ಯಯ ಉಂಟಾಗಿದೆ. ಇದನ್ನೂ ಓದಿ: ಮಧ್ಯಪ್ರಾಚ್ಯದಲ್ಲಿ ಸಿಲುಕಿರೋ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಕ್ರಮ: ಕೃಷ್ಣ ಭೈರೇಗೌಡ
ವಿಮಾನ ಸಂಚಾರದಲ್ಲಿ ಉಂಟಾದ ವ್ಯತ್ಯಯದಿಂದ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಅನೇಕ ಪ್ರಯಾಣಿಕರು ಮಧ್ಯಪ್ರಾಚ್ಯದ ದೇಶಗಳಲ್ಲಿ, ವಿಶೇಷವಾಗಿ UAE (ದುಬೈ)ನಲ್ಲಿ ಸಿಲುಕಿಕೊಂಡಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಮಾನ್ಯ ಕಂದಾಯ ಸಚಿವರ ನಿರ್ದೇಶನದ ಮೇರೆಗೆ, ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ಮತ್ತು ಎಲ್ಲಾ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರಗಳು ಸಂಪೂರ್ಣವಾಗಿ ಸಕ್ರಿಯಗೊಳಿಸಲಾಗಿದ್ದು, 24×7 ಕಾರ್ಯನಿರ್ವಹಿಸುತ್ತಿವೆ.
The safety of every Kannadiga in the Middle East is our highest priority.
We are closely monitoring the Iran–Israel situation and coordinating round the clock with the Government of India and our embassies to assist those stranded.
Our emergency teams are fully activated.… pic.twitter.com/tY3JqDFb44
— Siddaramaiah (@siddaramaiah) March 2, 2026
Karnataka State Disaster Management Authority ಆಯುಕ್ತರನ್ನು ನೋಡೆಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದ್ದು, ಅವರು ನವದೆಹಲಿಯ ಕರ್ನಾಟಕ ಭವನದಲ್ಲಿರುವ ಕರ್ನಾಟಕ ರಾಜ್ಯ ನಿವಾಸ ಆಯುಕ್ತರ ಕಚೇರಿ ಹಾಗೂ Ministry of External Affairs ಜೊತೆಗೆ ಸಮನ್ವಯ ಸಾಧಿಸಿ, ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿರುವ ಕರ್ನಾಟಕದ ನಾಗರಿಕರಿಗೆ ಅಗತ್ಯ ನೆರವು ಮತ್ತು ಬೆಂಬಲ ಒದಗಿಸಲು ಕ್ರಮ ಕೈಗೊಂಡಿದ್ದಾರೆ. ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) ಹಾಗೂ ಎಲ್ಲಾ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರಗಳು (DEOC) Ministry of External Affairs ಮತ್ತು ಪರಿಣಾಮಿತ ದೇಶಗಳ ಭಾರತೀಯ ರಾಯಭಾರಿ ಕಚೇರಿ/ಕಾನ್ಸುಲೇಟ್ಗಳಿಂದ ಹೊರಡಿಸಲಾಗುತ್ತಿರುವ ಸೂಚನೆಗಳನ್ನು ನಿಯಮಿತವಾಗಿ ನವೀಕರಿಸುತ್ತಿವೆ. ನವದೆಹಲಿ ಕರ್ನಾಟಕ ಭವನದಲ್ಲಿಯೂ ಸಮನ್ವಯಕ್ಕಾಗಿ ವಿಶೇಷ ತಂಡವನ್ನು ಸಕ್ರಿಯಗೊಳಿಸಲಾಗಿದೆ.
ಭಾರತೀಯ ರಾಯಭಾರಿ ಕಚೇರಿ ಹಾಗೂ ಕಾನ್ಸುಲೇಟ್ಗಳ ಸಹಾಯವಾಣಿ ಸಂಖ್ಯೆಗಳು ಮತ್ತು ಸೂಚನೆಗಳನ್ನು ಎಲ್ಲಾ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರಗಳಿಗೆ ರವಾನಿಸಲಾಗಿದ್ದು, ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸರ್ಕಾರದ ಅಧಿಕೃತ ಸಾಮಾಜಿಕ ಜಾಲತಾಣಗಳ ಮೂಲಕ (X, ವಾಟ್ಸಾಪ್ ಇತ್ಯಾದಿ) ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. SEOC ಹಾಗೂ ನವದೆಹಲಿಯ ಕರ್ನಾಟಕ ರಾಜ್ಯ ನಿವಾಸ ಆಯುಕ್ತರ ಕಚೇರಿ, Ministry of External Affairs ರ್ಯಾಪಿಡ್ ರೆಸ್ಪಾನ್ಸ್ ಸೆಲ್ ಜೊತೆ ಸಮನ್ವಯದಲ್ಲಿವೆ. ಮಾ.2ರಂದು ಬೆಳಿಗ್ಗೆ 10 ಗಂಟೆಯವರೆಗೆ SEOC ಮತ್ತು DEOCಗೆ ಲಭಿಸಿದ ಮಾಹಿತಿಯ ಪ್ರಕಾರ, ಕರ್ನಾಟಕದ 109 ಮಂದಿ ಸಿಲುಕಿರುವವರ ವಿವರಗಳನ್ನು MEA ಹಾಗೂ ಕರ್ನಾಟಕ ಭವನಕ್ಕೆ ರವಾನಿಸಲಾಗಿದೆ. ಇದನ್ನೂ ಓದಿ: ಇರಾನ್ – ಇಸ್ರೇಲ್ ವಾರ್; ಬೆಂಗಳೂರಿನಿಂದ ಹೊರಡಬೇಕಿದ್ದ 10 ವಿಮಾನಗಳು ಕ್ಯಾನ್ಸಲ್
I am closely monitoring the evolving situation in parts of the Middle East following the recent escalation of tensions. The safety and well-being of every Kannadiga abroad is our highest priority.
As per the information received so far, around 100 Kannadigas are currently… pic.twitter.com/xdUaDnbOz2
— Siddaramaiah (@siddaramaiah) March 2, 2026
ಯುಎಇ (ದುಬೈ) ಪಟ್ಟಿ:
ಬಳ್ಳಾರಿ–32, ಬೆಂಗಳೂರು–25, ಚಿಕ್ಕಬಳ್ಳಾಪುರ–2, ಚಿಕ್ಕಮಂಗಳೂರು–5, ಚಿತ್ರದುರ್ಗ–2, ದಕ್ಷಿಣ ಕನ್ನಡ–3, ದಾವಣಗೆರೆ–9, ಕಲಬುರಗಿ–2, ಶಿವಮೊಗ್ಗ–3, ಕೊಡಗು–4, ತುಮಕೂರು–1, ಉಡುಪಿ–2, ವಿಜಯಪುರ–4, ರಾಯಚೂರು–3, ಜಿಲ್ಲೆ ವಿವರ ಲಭ್ಯವಿಲ್ಲದ–3: ಒಟ್ಟು 100 ಮಂದಿ.
ಬಹ್ರೇನ್ ಪಟ್ಟಿ:
ಹಾಸನ–4, ಕೊಡಗು–1, ಉಡುಪಿ–3, ಜಿಲ್ಲೆ ವಿವರ ಲಭ್ಯವಿಲ್ಲದ–1: ಒಟ್ಟು 9 ಮಂದಿ.
ಮಧ್ಯಪ್ರಾಚ್ಯದ ಪರಿಣಾಮಿತ ದೇಶಗಳಲ್ಲಿ ವಾಸಿಸುತ್ತಿರುವ ಕರ್ನಾಟಕದ ನಾಗರಿಕರು ಅಲ್ಲಿ ಸ್ಥಳೀಯ ಸರ್ಕಾರಗಳಿಂದ ಹೊರಡಿಸಲಾದ ಮಾರ್ಗಸೂಚಿಗಳು ಹಾಗೂ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ವಿನಂತಿಸಲಾಗಿದೆ. ಸಂಬಂತ ಭಾರತೀಯ ರಾಯಭಾರಿ ಕಚೇರಿ/ಕಾನ್ಸುಲೇಟ್ಗಳ ಸಹಾಯವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಿ, ಸಾರ್ಥಿ ಸಹಾಯತಾ ಪೋರ್ಟಲ್ ಸೇರಿದಂತೆ ಸಂಬಂಧಿತ ಅಧಿಕೃತ ಪೋರ್ಟಲ್ಗಳಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಸಲಹೆ ನೀಡಲಾಗಿದೆ. ಟ್ರಾನ್ಸಿಟ್ ವೀಸಾ ಸಂಬಂಧಿತ ವಿಷಯಗಳಿಗೆ ಸಮೀಪದ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ಕಚೇರಿಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಯುಎಇಯ ಭಾರತೀಯ ರಾಯಭಾರಿ ಕಚೇರಿ ಸಹಾಯವಾಣಿ ಸಂಖ್ಯೆಗಳಾದ +971 569916774, +971 563888288, +971 507576238 ಸಂಪರ್ಕಿಸುವಂತೆ ಸೂಚಿಸಲಾಗಿದೆ. ಇದನ್ನೂ ಓದಿ: ಆಪರೇಷನ್ ʻರೋರಿಂಗ್ ಲಯನ್ʼ – ಲೆಬನಾನ್ ಮೇಲೆ ಇಸ್ರೇಲ್ ಮಿಸೈಲ್ ಮಳೆ; 31 ಮಂದಿ ಸಾವು

