Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ನಮ್ಮ ಸಮಾಜವನ್ನು ಕಡೆಗಣಿಸಿ ಹೇಗೆ ಪಕ್ಷ ಬೆಳೆಸುತ್ತೀರಿ : ಸಿಎಂಗೆ ನಂಜುಂಡಿ ಸವಾಲು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ನಮ್ಮ ಸಮಾಜವನ್ನು ಕಡೆಗಣಿಸಿ ಹೇಗೆ ಪಕ್ಷ ಬೆಳೆಸುತ್ತೀರಿ : ಸಿಎಂಗೆ ನಂಜುಂಡಿ ಸವಾಲು

Bengaluru City

ನಮ್ಮ ಸಮಾಜವನ್ನು ಕಡೆಗಣಿಸಿ ಹೇಗೆ ಪಕ್ಷ ಬೆಳೆಸುತ್ತೀರಿ : ಸಿಎಂಗೆ ನಂಜುಂಡಿ ಸವಾಲು

Public TV
Last updated: June 13, 2017 7:30 pm
Public TV
Share
3 Min Read
kp nanjundi and siddaramaiah
SHARE

– ಕೈ ಸರ್ಕಾರದ ವಿರುದ್ಧ ವಿಶ್ವಕರ್ಮ ಸಮುದಾಯದ ನಾಯಕರು ಗರಂ
– ಸೋನಿಯಾಗೆ ರಾಜೀನಾಮೆ ಪತ್ರ ಸಲ್ಲಿಸುತ್ತೇನೆ: ನಂಜುಂಡಿ

ಬೆಂಗಳೂರು: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ವಿಶ್ವಕರ್ಮ ಸಮಾಜ ಸಾಕಷ್ಟು ಶ್ರಮವಹಿಸಿದೆ. ನಾನು ರಾಜಕೀಯವನ್ನು ವೃತ್ತಿಯಾಗಿ ತೆಗೆದುಕೊಂಡಿಲ್ಲ, ಬದಲಾಗಿ ಸಮಾಜ ಸೇವೆಗಾಗಿ ಆರಿಸಿಕೊಂಡಿದ್ದೇನೆ. ಆದ್ರೆ ನಾನು ಸಿಎಂ ನಂಬಿ ಸೋತು ಹೋಗಿದ್ದೇನೆ ಕೆ.ಪಿ ನಂಜುಡಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಸ್ವಾಮೀಜಿಯವರು, ಸ್ವಾಮೀಜಿ ಎನ್ನುವುದನ್ನು ಮರೆತು ಚುನಾವಣೆಯಲ್ಲಿ ಮತ ಯಾಚನೆ ಮಾಡಿದ್ದರು. ಅದೆನ್ನೆಲ್ಲ ಸಿಎಂ ಮರೆತು ಬಿಟ್ಟಿದ್ದಾರೆ. ನನ್ನ ಕೈ ಬಿಟ್ಟಿರುವ ಹಿಂದೆ ಅದೇನು ರಾಜಕೀಯ ಅಡಗಿದ್ಯೋ ಗೊತ್ತಿಲ್ಲ ಎಂದು ಹೇಳಿದರು.

ಚುನಾವಣೆಯಲ್ಲಿ ಎಂಎಲ್‍ಸಿ ಸ್ಥಾನಕ್ಕೆ ಕಾಂಗ್ರೆಸ್‍ನಿಂದ ಟಿಕೆಟ್ ನೀಡುವುದಾಗಿ ಸಿಎಂ ಭರವಸೆ ನೀಡಿದ್ದರು. ಆದರೆ ಬೇರೆ ಯಾರದ್ದೋ ಹೆಸರ ಬದಲಾಗಿ ಕೊನೆಯ ಕ್ಷಣದಲ್ಲಿ ನನ್ನ ಹೆಸರನ್ನು ಕೈ ಬಿಟ್ಟಿದ್ದಾರೆ. ನನಗೆ ಭಾಷಣ ಮಾಡಲು ಬರುವುದಿಲ್ಲವೆಂದುಕೊಂಡಿದ್ದಾರೆ ಅನ್ನಿಸುತ್ತದೆ. ನಮ್ಮ ಸಮಾಜವನ್ನು ಕಡೆಗಣಿಸಿ ಹೇಗೆ ಪಕ್ಷವನ್ನು ಬೆಳೆಸುತ್ತೀರಿ ಎಂದು ಅವರು ಸಿಎಂಗೆ ಸವಾಲು ಹಾಕಿದರು.

ಶೋಷಿತ ವರ್ಗದ ಧ್ವನಿಯಲ್ಲ: ಸಿಎಂ ಸಿದ್ಧರಾಮಯ್ಯ ದೇವರಾಜ್ ಅರಸು ಆಗುತ್ತಾರೆ ಎಂದುಕೊಂಡಿದ್ದೆವು. ಆದರೆ ಅವರು ಹಾಗೆ ಅಗಿಲ್ಲ. ಅರಸು ಜೊತೆ ಅವರನ್ನು ಹೋಲಿಕೆ ಮಾಡುವುದು ಸರಿಯಲ್ಲ. ಅವರು ಶೋಷಿತ ವರ್ಗದ ಧ್ವನಿಯಲ್ಲ, ಎಲ್ಲವು ಕಾಲ ನಿರ್ಣಯ. ನನ್ನಂತವನಿಗೆ ಈ ರೀತಿ ಆದರೆ ಸಾಮಾನ್ಯ ವ್ಯಕ್ತಿಗಳ ಗತಿ ಏನು ಎಂದು ನಂಜುಂಡಿ ಪ್ರಶ್ನಿಸಿದರು.

224 ಶಾಸಕರಿಗೆ ವಿಶ್ವಕರ್ಮ ಸಮುದಾಯದವರ ಮತ ಬೇಕು, ಆದ್ರೆ ನಾವು ಬೇಡ. ಇಷ್ಟರ ಮಟ್ಟಿಗೆ ಒಂದು ಸಮಾಜವನ್ನು ನಿರ್ಲಕ್ಷ್ಯ ಮಾಡಬಾರದು. ನನಗೆ ಕಾಂಗ್ರೆಸ್ ಪಕ್ಷ ಸೇರೋದೆ ಬೇಡ ಅಂತ ನಮ್ಮ ಸಮಾಜದ ಜನ ಹೇಳಿದ್ದರು. ಆದ್ರೇ ನಾನೇ ಅವರ ಮನವೊಲಿಸಿ ಪಕ್ಷಕ್ಕೆ ಸೇರಲು ಮುಂದಾದರೆ ಇಂದು ಇಡೀ ಸಮಾಜಕ್ಕೆ ಅನ್ಯಾಯ ಮಾಡಿದ್ದೇನೆ. ಈಗ ಅವರು ಬಿಜೆಪಿಗೆ ಹೋಗು ಅಂದ್ರೆ ಹೋಗುತ್ತೇನೆ, ಜೆಡಿಎಸ್‍ಗೆ ಹೋಗು ಅಂದ್ರೆ ಹೋಗ್ತೀನಿ ಎಂದರು.

ಸೋನಿಯಾ ಚೆನ್ನಾಗಿದ್ದಾರೆ: ಸ್ವತಃ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನನಗೆ ಆ ಹಬ್ಬಕ್ಕೆ ಶುಭಾಶಯ ಈ ಹಬ್ಬಕ್ಕೆ ಶುಭಾಶಯ, ಅಂತಾ ಹೇಳಿದ್ದಾರೆ. ದಿಗ್ವಿಜಯ ಸಿಂಗ್ ನಮ್ಮ ಸಮಾಜದ ಸಮಾವೇಶಕ್ಕೆ ಬಂದು ನನ್ನನ್ನು ಗ್ರೇಟ್ ಲೀಡರ್ ಅಂತಾ ಟ್ವೀಟ್ ಮಾಡಿದ್ದಾರೆ. ಅವರೆಲ್ಲರಿಗೆ ನನ್ನ ಬಗ್ಗೆ ಗೊತ್ತಿದೆ. ಆದ್ರೆ ಸಿದ್ದರಾಮಯ್ಯ ಅವರ ಬಳಿ ನನ್ನ ಬಗ್ಗೆ ಏನು ಹೇಳಿದ್ದಾರೋ ಗೊತ್ತಿಲ್ಲ. ನಾನು ಇಲ್ಲಿಯವರೆಗೆ ರಾಜೀನಾಮೆ ನೀಡಿಲ್ಲ, ಇಲ್ಲಿ ರಾಜೀನಾಮೆ ನೀಡುವುದಿಲ್ಲ. ಮುಖ್ಯಮಂತ್ರಿಗಿಂತ ನನ್ನ ಜೊತೆ ಸೋನಿಯಾ ಗಾಂಧಿಯವರು ಚೆನ್ನಾಗಿದ್ದು ಅವರಲ್ಲಿ ರಾಜೀನಾಮೆ ನೀಡಿ, ನನಗಾದ ಅನ್ಯಾಯವನ್ನು ಹೇಳಿಕೊಳ್ಳುತ್ತೇನೆ ಎಂದರು.

‘ಕೈ’ ಸೇರಲ್ಲ: ಬಿಜೆಪಿಯವರು ನನ್ನ ಸಂಪರ್ಕ ಮಾಡಿದ್ದಾರೆ. ಆದ್ರೆ ಸ್ವಾಮಿಜಿಯವರು ಯಾರು ಸ್ಥಾನಮಾನ ನೀಡ್ತಾರೋ ಅವರ ಜೊತೆ ಹೋಗೋಣ ಅಂತಾ ಸಲಹೆ ನೀಡಿದ್ದಾರೆ. ಯಾವ ಪಕ್ಷ ಅಂತಾ ನಿರ್ಧಾರ ಮಾಡಿಲ್ಲ. ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಆಹ್ವಾನಿಸಿದ್ದಾರೆ. ಮತ್ತೆ ಸೋನಿಯಾ ಮನವೊಲಿಸಿದರೂ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರುವ ಮಾತೇ ಇಲ್ಲ ಎಂದು ನಂಜುಡಿ ತಮ್ಮ ನಿರ್ಧಾರವನ್ನು ತಿಳಿಸಿದರು.

ಕಾಳಹಸ್ತೇಂದ್ರ ಶ್ರೀಗಳು ಮಾತನಾಡಿ, ಇನ್ನು ಮುಂದೆ ಕಾಂಗ್ರೆಸ್ ಪಕ್ಷದ ಜೊತೆ ನಾವು ಯಾವುದೇ ಕಾರಣಕ್ಕೂ ಕೈ ಜೋಡಿಸಲ್ಲ. ಸಿದ್ದರಾಮಯ್ಯ ಹತ್ತಿರ ನಾವು ಉಪಮುಖ್ಯಮಂತ್ರಿ, ಸಚಿವ ಸ್ಥಾನ ಕೇಳಿಲ್ಲ. ಸಣ್ಣ ಸ್ಥಾನಮಾನ ಕೊಡಲು ಇಷ್ಟೆಲ್ಲ ಹಿಂದೇಟು ಹಾಕ್ತಾರೆ ಅಂದ್ರೆ ನಮ್ಮನ್ನು ಎಷ್ಟು ನಿರ್ಲಕ್ಷ್ಯ ಮಾಡ್ತಾರೆ ಅನ್ನೋದು ಗೊತ್ತಾಗುತ್ತದೆ ಎಂದರು.

45 ಲಕ್ಷ ಜನ ಇರುವ ಸಮುದಾಯ ನಮ್ಮದು, ನಮಗೆ ಸಿಎಂ ಮೋಸ ಮಾಡಿದ್ದಾರೆ. ಅವರ ಮೇಲಿನ ನಂಬಿಕೆ ಹೋಗಿದೆ. ಕಾಂಗ್ರೆಸ್ ಸರ್ಕಾರಕ್ಕೆ ಕೊಟ್ಟಿರುವ ಬೆಂಬಲವನ್ನು ಸಂಪೂರ್ಣ ವಾಪಸ್ ಪಡೆದುಕೊಳ್ಳುತ್ತೇವೆ. ಆದರೆ ನಮಗೆ ಯಾಕೆ ಮೋಸ ಮಾಡಿದ್ದಾರೆ ಎಂದು ಪ್ರಶ್ನಿಸಿ ಶ್ರೀಗಳು ಭಾವುಕರಾದರು.

ಅದ್ಯಾವುದೋ ಸಮಾಜಕ್ಕೆ ಪಕ್ಷದಲ್ಲಿ, ಉನ್ನತ ಸ್ಥಾನ ಕೊಟ್ಟಿದ್ದೀರಿ? ಆದರೆ ವಿಶ್ವ ಕರ್ಮ ಸಮಾಜಕ್ಕೆ ಮಾತ್ರ ಪದೇ ಪದೇ ಮೋಸ ಯಾಕೆ ಮಾಡ್ತಾ ಇದ್ದೀರಿ ಎಂದು ಪ್ರಶ್ನಿಸಿದ ಅವರು ಇನ್ಯಾವ ಪರಿ ನಿಮಗೆ ಕೆಲಸ ಮಾಡಬೇಕು? ನಂಜುಂಡಿ ಇಷ್ಟೆಲ್ಲ ಪಕ್ಷಕ್ಕೆ ಒದ್ದಾಡಿದ್ದಾರೆ. ಆದರೆ ಅವರಿಗೆ ಬೆಲೆ ಕೊಟ್ಟಿಲ್ಲ. ಇದು ಸಿಎಂ ನಮಗೆ ಮಾಡಿದ ಮೋಸ ಅಷ್ಟೇ ಅಲ್ಲ, ಅವರಿಗೆ ಅವರೇ, ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ಮಾಡಿದ ಮಹಾಮೋಸ ಎಂದು ವಾಗ್ದಾಳಿ ನಡೆಸಿದರು.

TAGGED:bengalurukp nanjundisiddaramaiahvishwakarmaಕೆ.ಪಿ ನಂಜುಂಡಿಚುನಾವಣೆಟಿಕೆಟ್ಬೆಂಗಳೂರುಮಹಾಮೋಸವಿಶ್ವಕರ್ಮಸಿದ್ದರಾಮಯ್ಯ
Share This Article
Facebook Whatsapp Whatsapp Telegram

Cinema news

Jai Lalitha Serial
ಹೊಸ ಧಾರಾವಾಹಿ: ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಜೈ ಲಲಿತಾ
Cinema Latest Top Stories TV Shows
Arjun Janya
ಅರ್ಜುನ್ ಜನ್ಯ ಸಂಯೋಜನೆಯಲ್ಲಿ ʻಮಹಾಗುರು ಮಹಾದೇವʼ ಆಲ್ಬಂ
Cinema Latest Sandalwood
Sanvi Sudeep
ಅರಿಶಿಣ ಶಾಸ್ತ್ರದಲ್ಲಿ ಸುದೀಪ್ ಪುತ್ರಿ – ಫೋಟೋ ವೈರಲ್
Cinema Latest Sandalwood Top Stories
Ratha Saptami Jeevan Moulya
ರಥಸಪ್ತಮಿ: ವಿಭಿನ್ನ ಧಾರಾವಾಹಿಗೆ ಸಾಕ್ಷಿಯಾದ ಉದಯ ಟಿವಿ
Cinema Latest TV Shows

You Might Also Like

Siddaramaiah Pralhad Joshi
Latest

ಚಳಿಗಾಲದ ಅಧಿವೇಶನ; ಸಿಎಂ ಕರೆದ ಸಭೆಗೆ ಬರೋದು ಅಸಾಧ್ಯ – ಜೋಶಿ

Public TV
By Public TV
31 minutes ago
Darshan Pavithra
Bengaluru City

ಒಂದೂವರೆ ವರ್ಷಗಳ ಬಳಿಕ ರೇಣುಕಾ ಕೇಸ್ ವಿಚಾರಣೆ – ಲೆಕ್ಕ ಕೊಡದ 82 ಲಕ್ಷ ರೂ. ಇಡಿ ಸುಪರ್ದಿಗೆ

Public TV
By Public TV
49 minutes ago
Techie
Bengaluru City

ಬೆಂಗಳೂರು | ತಾನೇ ಕಟ್ಟಿಸುತ್ತಿದ್ದ ಕನಸಿನ ಮನೆಯಲ್ಲಿ ಟೆಕ್ಕಿ ನೇಣಿಗೆ ಶರಣು

Public TV
By Public TV
1 hour ago
Afghanistan
Latest

ಒಂದೇ ಕುಟುಂಬದ 13 ಮಂದಿ ಹತ್ಯೆ; ಆಫ್ಘನ್‌ನಲ್ಲಿ ಹಂತಕನಿಗೆ ಬೀದಿಯಲ್ಲಿ ಗುಂಡಿಟ್ಟು ಕೊಲೆ

Public TV
By Public TV
1 hour ago
Rajnath Singh 1
Latest

ಬಾಬರಿ ಮಸೀದಿ ನಿರ್ಮಾಣಕ್ಕೆ ನೆಹರು ಸರ್ಕಾರಿ ಹಣ ಬಳಲು ಮುಂದಾಗಿದ್ರು: ರಾಜನಾಥ್ ಸಿಂಗ್ ಹೇಳಿಕೆಗೆ ʻಕೈʼ ಖಂಡನೆ

Public TV
By Public TV
2 hours ago
namma metro driverless train
Bengaluru City

ಯೆಲ್ಲೋ ಮಾರ್ಗದ ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್ – ಬೆಂಗಳೂರಿಗೆ ಬಂತು 6ನೇ ಡ್ರೈವರ್‌ಲೆಸ್‌ ರೈಲು

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?