– ಶಾಸಕ ಚಂದ್ರು ಲಮಾಣಿ ಟ್ರ್ಯಾಪ್ನಲ್ಲಿ ಆತುರ ಕಾಣ್ತಿದೆ
ಬೆಂಗಳೂರು: ಕುರ್ಚಿಗೆ ಕಂಟಕ ಬಂದಾಗ ಸಾಮಾಜಿಕ ನ್ಯಾಯ, ಜಾತಿಯನ್ನ ಸಿದ್ದರಾಮಯ್ಯ (Siddaramaiah) ಮುಂದೆ ತರುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕ ಸಿಟಿ ರವಿ (CT Ravi) ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಸಿದ್ದರಾಮಯ್ಯರಿಂದ ಜಾತಿ ಅಸ್ತ್ರ ಪ್ರಯೋಗ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದು ಪ್ರಜಾಪ್ರಭುತ್ವ ಬ್ಯೂಟಿ. ಸಿದ್ದರಾಮಯ್ಯ ಅವರೇ ಇದನ್ನ ಎಷ್ಟು ಸಾರಿ ಹೇಳ್ತೀರಾ, ಜಾಸ್ತಿ ಬಜೆಟ್ ಮಂಡಿಸಿದ್ದು ನೀವು. ಎರಡು ಸಾರಿ ಸಿಎಂ, ಡಿಸಿಎಂ ಎಲ್ಲವೂ ಆಗಿದ್ದೀರಾ. ಯಾರಿಗೆ ಹೇಳ್ತಿರಾ ಇದನ್ನ. ನೀವು ಸಿಎಂ ಆದ ಮೇಲೆ ಎಷ್ಡು ಜನ ಕುರಿ ಕಾಯೋರನ್ನ ಮೇಲೆ ತಂದಿದ್ದೀರಾ ಹೇಳಿ. ಯಾರಿಗೆ ಆರ್ಥಿಕ ಶಕ್ತಿ ಕೊಟ್ಟಿದ್ದೀರಾ ಹೇಳಿ. ನಿಮಗೆ ದೇವರು ಎಲ್ಲಾ ಕೊಟ್ಟಿದ್ದಾರೆ. ಇನ್ನೇನು ಬೇಕು, ಇನ್ನೇನು ಕೊಡಬೇಕು ಹೇಳಿ? ಸಮುದಾಯ ಎಷ್ಟು ಉದ್ಧಾರ ಆಗಿದೆ ಹೇಳಿ? ನೀವು ಚೆನ್ನಾಗಿ ಉದ್ಧಾರ ಆಗಿದ್ದೀರಾ. ಅದನ್ನ ಹೇಳೋದು ಬೇಡ. ಆದರೆ ಕುರಿಕಾಯೋ ಎಷ್ಟು ಜನರು ಮೇಲೆ ಬಂದಿದ್ದಾರೆ? ಅವರ ಕುಟುಂಬ ಮೇಲೆ ಬಂದಿದೆ ಹೇಳಿ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಶಿವಮೊಗ್ಗದಲ್ಲಿ ಸಂಕೇತ್ ಹತ್ಯೆ| ಕೋಮು ಗಲಭೆ ಹುಟ್ಟು ಹಾಕಲು ಕೃತ್ಯ ಎಸಗಿದಂತಿದೆ – ಸಿಟಿ ರವಿ
ಈಗ ಸಿದ್ದರಾಮಯ್ಯ ದಲಿತ ಸಿಎಂ ಅಂತ ಮಾತನಾಡುತ್ತಿದ್ದಾರೆ. ಪರಮೇಶ್ವರ್ ಅವರನ್ನ ಮಾತಾಡಿಸಿ 2018 ಚುನಾವಣೆಯಲ್ಲಿ ಸೋಲಿಸಿದ್ದು ಯಾರು ಅಂತ ಕೇಳಿ. ಕೆಪಿಸಿಸಿ ಅಧ್ಯಕ್ಷ ಅಗಿದ್ದ ಪರಮೇಶ್ವರ್ ಸೋಲಿಗೆ ಷಡ್ಯಂತ್ರ ಮಾಡಿದ್ದು ಯಾರು ಕೇಳಿ. ಅವರ ಸೋಲಿಗೆ ಕಾರಣ ಯಾರು ಅಂತ ಕೇಳಿದ್ರೆ ಯಾರು ಸಂವಿಧಾನ ಪುಸ್ತಕ ಹಿಡಿದು ಮಾತಾಡೋರು, ಬಸವಣ್ಣ, ಕುವೆಂಪು ಬಗ್ಗೆ ಮಾತಾಡೋರು, ಸಾಮಾಜಿಕ ನ್ಯಾಯದ ಬಗ್ಗೆ ಮಾತಾಡೋರು ಷಡ್ಯಂತ್ರದ ಭಾಗ ಆಗಿದ್ರು ಅಂತ ಅವರ ನೋವಿನ ಕಥೆ ಹೇಳುತ್ತಾರೆ. ಅವರ ನೋವಿನ ಕಥೆ ಕೇಳಿದ್ರೆ ಯಾವ ಕಾರಣಕ್ಕೆ ಯಾವ ಯಾವ ಹೆಸರು ಮುನ್ನಲೆಗೆ ತರುತ್ತಾರೆ ಅನ್ನೋ ರಾಜಕೀಯ ಮರ್ಮ ನಿಮಗೆ ಅರ್ಥ ಆಗುತ್ತದೆ ಅಂತ ಸಿಎಂ ವಿರುದ್ದ ಕಿಡಿಕಾರಿದರು. ಇದನ್ನೂ ಓದಿ: ಮೊದಲ ಬಾರಿ ಗೆದ್ದ ಶಾಸಕರು ಸಚಿವ ಸ್ಥಾನ ಕೇಳೋದು ತಪ್ಪಲ್ಲ: ಅಶೋಕ್ ಪಟ್ಟಣ್
ಬಿಜೆಪಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಟ್ರ್ಯಾಪ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪ್ರಕರಣದ ಬಗ್ಗೆ ತನಿಖೆ ಆಗಲಿ ತನಿಖೆ ಆಗಿ ಸತ್ಯಾಸತ್ಯತೆ ಹೊರಗೆ ಬರಲಿ. ತನಿಖೆಗೆ ಮುಂಚೆ ನಾವು ಅವರಿಗೆ ಕ್ಲೀನ್ ಚಿಟ್ ಕೊಡಲ್ಲ. ಅವರನ್ನು ಅಪರಾಧಿ ಅಂತಾನೂ ಪರಿಗಣಿಸಲ್ಲ. ಈ ಪ್ರಕರಣದಲ್ಲಿ ಸ್ವಲ್ಪ ಆತುರ ಕಾಣಿಸುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು. ಇದನ್ನೂ ಓದಿ: 9 ತಿಂಗಳಿನಿಂದ ಬಳಲುತ್ತಿದ್ದ ಸೊಸೆಗೆ ಕಿಡ್ನಿ ದಾನ ಮಾಡಿದ ಅತ್ತೆ
ಆಡಿಯೋ ಶಾಸಕರದ್ದೇ ಅಂತ ತನಿಖೆ ಆಗಿದೆಯಾ? ಅವರ ವಾಯ್ಸ್ ಅಂತ ದೃಢ ಅದ ಮೇಲೆ ಬಂಧನ ಮಾಡಬೇಕಿತ್ತು. ಗುತ್ತಿಗೆದಾರ ಪಡೆದ ಹಣ ಇವರು ಪಡೆದಿಲ್ಲ. ಆಡಿಯೋ ಮೇಲೆ ಬಂಧನ ಮಾಡಿರೋದು. ಅದು ಅವರ ಆಡಿಯೋ ಅಂತ ದೃಢ ಆಗಬೇಕು. ಅದಕ್ಕೆ ಯಾವ ಎಫ್ಎಸ್ಎಲ್ಗೆ ಕಳಿಸಿದ್ದೀರಾ. ಪಾಕಿಸ್ತಾನ ಪರ ಘೋಷಣೆ ಕೂಗಿದಾಗ ಏನೇನು ಮಾತಾಡಿದ್ರಿ. ಇಲ್ಲಿ ಮೊದಲು ಎಫ್ಐಆರ್, ಬಂಧನ ಆಗಿದೆ. ಇದರ ಹಿಂದೆ ಸತ್ಯಕ್ಕಿಂತ ಹೊರತಾಗಿ ಷಡ್ಯಂತ್ರ ಇರೋ ಅನುಮಾನ ಬರುತ್ತದೆ. ಸತ್ಯ ತನಿಖೆ ಆಗಲಿ. ತಪ್ಪು ಮಾಡಿದ್ರೆ ಶಿಕ್ಷೆ ಆಗಲಿ. ಉಪ್ಪು ತಿಂದವನು ನೀರು ಕುಡಿಯಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಗೊಂದಲ ಬಿಟ್ಟು ಸೂಕ್ತ ಆಡಳಿತ ನಡೆಸಲಿ: ಮುರುಗೇಶ್ ನಿರಾಣಿ

