ಬಾಹುಬಲಿ ಸಕ್ಸಸ್: ನಿನ್ನೆ ಕೊಲ್ಲೂರು, ಇಂದು ಬಪ್ಪನಾಡು ಕ್ಷೇತ್ರಕ್ಕೆ ಅನುಷ್ಕಾ ಶೆಟ್ಟಿ ಭೇಟಿ

Public TV
1 Min Read
MNG ANUSHKA AV 1

ಮಂಗಳೂರು: ಟಾಲಿವುಡ್ ಬೆಡಗಿ ಅನುಷ್ಕಾ ಶೆಟ್ಟಿ ಇಂದು ಮಂಗಳೂರಿನ ಮೂಲ್ಕಿಯಲ್ಲಿರುವ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

anushka n

ಅನುಷ್ಕಾ ಶೆಟ್ಟಿ ಜೊತೆ ತಾಯಿ, ಸಹೋದರ ಹಾಗು ಉದ್ಯಮಿ ಮುತ್ತಪ್ಪ ರೈ ದಂಪತಿ ಸಾಥ್ ನೀಡಿದ್ದು, ಶ್ರೀ ದುರ್ಗಾಪರಮೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

anushka n1

ಬಾಹುಬಲಿ ಸಿನಿಮಾದ ಯಶಸ್ಸಿನ ನಂತರ ನಿನ್ನೆ ಕೊಲ್ಲೂರಿಗೆ ಭೇಟಿ ನೀಡಿದ್ದೆವು. ಹೋಗುವಾಗ ಬಪ್ಪನಾಡು ತಾಯಿಯ ದರ್ಶನ ಪಡೆಯಲು ಬಂದಿದ್ದೇವೆ ಎಂದು ಅನುಷ್ಕಾ ಶೆಟ್ಟಿ ಹೇಳಿದರು.

MNG ANUSHKA AV 2

ಶುಕ್ರವಾರ ಕೊಲ್ಲೂರು ಮುಕಾಂಬಿಕಾ ದೇವಸ್ಥಾನಕ್ಕೂ ಭೇಟಿ ನೀಡಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಯಾವ ಮುನ್ಸೂಚನೆಯೂ ನೀಡದೇ ಕೊಲ್ಲೂರಿಗೆ ಭೇಟಿ ನೀಡಿದ್ದ ಅನುಷ್ಕಾ ಸಾಮನ್ಯ ಜನರಂತೆ ಸರತಿ ಸಾಲಿನಲ್ಲಿ ನಿಂತು ತಾಯಿ ಮುಕಾಂಭಿಕೆಯ ದರ್ಶನ ಪಡೆದಿದ್ದರು. ಬಾಹುಬಲಿ ಸಿನಿಮಾ ಯಶಸ್ಸಿನ ನಂತರ ನಾಡಿನ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ.

anushka new

 

anushka n 3

anushka n 4

 

Share This Article
Leave a Comment

Leave a Reply

Your email address will not be published. Required fields are marked *