ಮಡಿಕೇರಿ: ಸರ್ಕಾರಿ ಶಾಲೆ (Government School) ಅಂದರೆ ಅಲ್ಲಿ ಶಿಕ್ಷಕರ ಸಮಸ್ಯೆ, ಕಂಪ್ಯೂಟರ್ ಇದ್ರೂ ಅದಕ್ಕೆ ಕೊಠಡಿ ಇರೋಲ್ಲ, ಶಿಕ್ಷಕರು ಇರೋಲ್ಲ, ಅಳಿವಿನಂಚಿನಲ್ಲಿರುವ ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಯಾರು ಕಳಿಸುತ್ತಾರೆ? ಸ್ವಲ್ಪ ಕಷ್ಟವಾದ್ರೂ ಪರವಾಗಿಲ್ಲ ಇಂದಿನ ಪೈಪೋಟಿ ಯುಗದಲ್ಲಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವುದೇ ಮುಖ್ಯ ಎಂದು ಅಂದುಕೊಳ್ಳುತ್ತಿದ್ದ ಪೋಷಕರು, ಇದೀಗಾ ತಮ್ಮ ಮಕ್ಕಳು ಸರ್ಕಾರಿ ಶಾಲೆಯಲ್ಲೇ ಓದಬೇಕು ಅಂತ ಮುಗಿಬೀಳುತ್ತಿದ್ದಾರೆ. ಈ ಸನ್ನಿವೇಶ ನಿರ್ಮಾಣ ಆಗಿರೋದು ಕೊಡಗು (Kodagu) ಜಿಲ್ಲೆಯ ಕುಶಾಲನಗರದ (Kushalnagar) ಸರ್ಕಾರಿ ಶಾಲೆಯಲ್ಲಿ.
ಹೌದು. ಇಂಗ್ಲಿಷ್ ಮೇಲಿನ ವ್ಯಾಮೋಹದಿಂದ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವುದು ಪರಿಪಾಠವಾಗುತ್ತಿದೆ. ಹೀಗಾಗಿ ಹಲವಾರು ಕನ್ನಡ ಶಾಲೆಗಳು ಮುಂಚುವ ಹಂತಕ್ಕೆ ತಲುಪಿದೆ. ಈ ನಡುವೆ ಸರ್ಕಾರಿ ಶಾಲೆಯ ಪರಿಸ್ಥಿತಿಯನ್ನು ಅರಿತ ನಿಮ್ಮ ʻಪಬ್ಲಿಕ್ ಟಿವಿʼಯಿಂದ 2 ವರ್ಷಗಳ ಹಿಂದೆ ಆ ಊರಿನ ಶಾಲೆಗೆ ಕಂಪ್ಯೂಟರ್ ಕೊಠಡಿ ಕಟ್ಟಿಸಿಕೊಡಲಾಗಿತ್ತು. ಅಳಿವಿನಂಚಿನಲ್ಲಿರುವ ಶಾಲೆಗೆ ಈ ಕೊಡುಗೆ ನೀಡಿದ ಬೆನ್ನಲ್ಲೇ, ಇದೀಗ ಆ ಸರ್ಕಾರಿ ಶಾಲೆಗೆ ಮಕ್ಕಳ ಹಾಜರಾತಿ ಸಂಖ್ಯೆ ಮತ್ತಷ್ಟು ಏರಿಕೆ ಆಗಿದೆ. ಇದನ್ನೂ ಓದಿ: ಕೊಡಗಿನಲ್ಲಿ BSNL ಸೇವೆ ಸರಿಪಡಿಸಲು ಕೇಂದ್ರ ಸಚಿವರಿಗೆ ಯದುವೀರ್ ಒಡೆಯರ್ ಮನವಿ
2 ವರ್ಷಗಳ ಹಿಂದೆ ಶಾಲೆಯಲ್ಲಿ ಮಕ್ಕಳ ಹಾಜರಾತಿ ಸಂಖ್ಯೆ 284 ಇತ್ತು. ಅಲ್ಲದೇ ಹಲವಾರು ಕಟ್ಟಡಗಳು ದುಸ್ಥಿತಿಯಿಂದ ಕಂಪ್ಯೂಟರ್ ಕೊಠಡಿಯು ಬೀಳುವ ಹಂತಕ್ಕೆ ತಲುಪಿತ್ತು. ಈ ಶಾಲೆಯ ಪರಿಸ್ಥಿತಿ ಕಂಡ ನಿಮ್ಮ ʻಪಬ್ಲಿಕ್ ಟಿವಿʼ ಬೆಳಕು ಕಾರ್ಯಕ್ರಮದ ಮೂಲಕ ಶಾಲೆಗೆ ಸುಸಜ್ಜಿತವಾದ ಕಂಪ್ಯೂಟರ್ ಕೊಠಡಿ ಕೊಡುಗೆಯಾಗಿ ನೀಡಿತ್ತು. ಅಷ್ಟೇ ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರ್ಚುವಲ್ ಆಗಿ ಉದ್ಘಾಟನೆ ಮಾಡಿ ಸರ್ಕಾರಿ ಶಾಲೆಗೆ ಮಕ್ಕಳ ಹಾಜರಾತಿ ಸಂಖ್ಯೆ ಏರಿಕೆ ಅಗಬೇಕು ಎಂದು ತಿಳಿಸಿದ್ರು. ʻಪಬ್ಲಿಕ್ ಟಿವಿʼ ಹಾಗೂ ಶಾಲೆಯ ಶಿಕ್ಷಕರ ಪ್ರಯತ್ನದ ಫಲವಾಗಿ ಇದೀಗ ಈ ಸರ್ಕಾರಿ ಶಾಲೆಗೆ ಕಳೆದ 2 ವರ್ಷಗಳಲ್ಲಿ ಬರೋಬ್ಬರಿ 392 ಮಕ್ಕಳು ಶಾಲೆಗೆ ದಾಖಲು ಆಗಿದ್ದಾರೆ. ಅಲ್ಲದೇ ಕುಶಾಲನಗರ ಸುತ್ತಮುತ್ತಲಿನ ಪೋಷಕರು ತಮ್ಮ ಮಕ್ಕಳನ್ನು ಸೇರಿಸಲು ಮುಗಿ ಬೀಳುತ್ತಿದ್ದಾರೆ. ಇದನ್ನೂ ಓದಿ: ಅನುದಾನ ಕೊರತೆ ಹೇಳಿಕೆ ಕೊಟ್ಟವರಿಗೆ ತಲೆ ಕೆಟ್ಟಿರಬೇಕು: ಬೇಳೂರು ಗೋಪಾಲಕೃಷ್ಣ
ಇನ್ನೂ ಸರ್ಕಾರಿ ಶಾಲೆಗೆ ಆಂಗ್ಲ ಮಾಧ್ಯಮ ಶಾಲೆಗಳು ವರ್ಷದಿಂದ ವರ್ಷಕ್ಕೆ ಬೇಡಿಕೆ ಪಡೆದುಕೊಳ್ಳುತ್ತಿವೆ. ನಿಗದಿತ ಸೀಟ್ಗಳಿಗಿಂತ ಮೂರು ಪಟ್ಟು ಅಧಿಕ ಅರ್ಜಿಗಳು ಬರುತ್ತಿದ್ದು, ಮಕ್ಕಳನ್ನು ಆಯ್ಕೆ ಮಾಡಿಕೊಳ್ಳುವುದೇ ಎಸ್ಡಿಎಂಸಿಗಳಿಗೆ ತಲೆನೋವಾಗಿದೆ. ಇದನ್ನೂ ಓದಿ: NASA Axiom-4 Mission; ಆಕ್ಸಿಯಂ-4 ಉಡಾವಣೆ ಯಶಸ್ವಿ – ಶುಭಾಂಶು ಶುಕ್ಲಾ ಸೇರಿ ನಾಲ್ವರು ಗಗನಯಾತ್ರಿಗಳು ಅಂತರಿಕ್ಷ ಪ್ರಯಾಣ
ಕುಶಾಲನಗರ ಜಿಲ್ಲೆಯಲ್ಲೇ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿದ್ದು, ಕುಶಾಲನಗರ ಪುರಸಭೆ ವ್ಯಾಪ್ತಿಯ ಜನಸಂಖ್ಯೆಗೆ ಅನುಗುಣವಾಗಿ ಇಲ್ಲಿನ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಯನ್ನು ವಿಶೇಷವಾಗಿ ಪರಿಗಣಿಸಿ ಹೆಚ್ಚುವರಿ ಸೀಟ್ಗಳ ಅವಕಾಶ ಕಲ್ಪಿಸಿಕೊಡಬೇಕು ಎಂದು ಮೊದಲಿನಿಂದಲೂ ಬೇಡಿಕೆ ಇಡಲಾಗುತ್ತಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಇಲ್ಲಿ ಈ ವರ್ಷ ಎಲ್ಕೆಜಿ ಪ್ರವೇಶಕ್ಕೆ 80ಕ್ಕೂ ಹೆಚ್ಚು ಅರ್ಜಿಗಳು ಬಂದಿದೆ. ಇರುವ 30 ಸೀಟ್ಗಳನ್ನು ಯಾವ ಮಾನದಂಡ ಮೇಲೆ 80 ಅರ್ಜಿಗಳಲ್ಲಿ ಆಯ್ಕೆ ಮಾಡುವುದು ಎನ್ನುವುದರ ಬಗ್ಗೆ ಎಸ್ಡಿಎಂಸಿ ತಲೆ ಕೆಡಿಸಿಕೊಂಡಿದೆ. ಇದನ್ನೂ ಓದಿ: Rain Alert | ಕರ್ನಾಟಕದ ಕರಾವಳಿಯಲ್ಲಿ ಜೂನ್ 26ರ ವರೆಗೂ ಭಾರೀ ಮಳೆ